ಟಾಸ್ ಗೆದ್ರೆ ಯಾರಿಗೆ ಲಾಭ? ಯಾವ ಆಯ್ಕೆ ಬೆಸ್ಟ್?
ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಪಂದ್ಯ
ಚೆನ್ನೈ ಎದುರು RCB ಮಾಡಬೇಕಾಗಿರೋದೇನು..?
ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗ್ ಬ್ಯಾಟಲ್ ಮೇಲೆ ಕ್ರಿಕೆಟ್ ಲೋಕದ ಕಣ್ಣಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿ ಅಂಗಳದಲ್ಲಿ, ಹೋಮ್ಕ್ರೌಡ್ ಎದುರು, ಹೈಪ್ರೆಷರ್ ಗೇಮ್ನಲ್ಲಿ ಆರ್ಸಿಬಿ ಗೆಲ್ಲುತ್ತ ಅನ್ನೋದು ಎಲ್ಲರ ಕುತೂಹಲ. ಸತತ 5 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದೆ ನಿಜ. ಆದ್ರೂ ಸಿಎಸ್ಕೆ ಗೆಲ್ಲೋದು ಟಫ್ ಟಾಸ್ಕ್. ಚಿನ್ನಸ್ವಾಮಿ ಅಂಗಳದಲ್ಲಿ ಆರ್ಸಿಬಿ ಮುಂದೆ ಸಿಕ್ಕಾಪಟ್ಟೆ ಚಾಲೆಂಜಸ್ ಇವೆ.
ಐಪಿಎಲ್ ಟೂರ್ನಿಯ ಮಹಾಕದನದ ಕಾವು ಕ್ರಿಕೆಟ್ ಲೋಕದಲ್ಲಿ ಜೋರಾಗಿದೆ. ಚೆನ್ನೈ ವರ್ಸಸ್ ಬೆಂಗಳೂರು ನಡುವಿನ ಕದನ ಕುತೂಹಲ ಅಭಿಮಾನಿಗಳ ವಲಯದಲ್ಲಿ ತೀವ್ರಗೊಂಡಿದೆ. ಚೆನ್ನೈ ಎದುರು ಕಳಪೆ ರೆಕಾರ್ಡ್ ಹೊಂದಿರೋ ಆರ್ಸಿಬಿಗೆ ಸಾಮಾನ್ಯವಾದ ಜಯ ಸಾಧಿಸೋದೆ ಸವಾಲಿನ ವಿಚಾರ. ಅಂತಾದ್ರಲ್ಲಿ, ಮೇ 18ರಂದು ಭರ್ಜರಿ ಗೆಲುವನ್ನ ಸಾಧಿಸಬೇಕಿದೆ. ಜಯದ ಜೊತೆಗೆ ರನ್ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಪ್ಲೇ ಆಫ್ ಡೋರ್ ಓಪನ್ ಆಗಲಿದೆ. ಇದೆಲ್ಲಾ ಸಾಧ್ಯವಾಗಬೇಕಂದ್ರೆ ಹಲವು ಸವಾಲುಗಳನ್ನ ಆರ್ಸಿಬಿ ಮೆಟ್ಟಿನಿಲ್ಲಬೇಕಿದೆ.
ಇದನ್ನೂ ಓದಿ:ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ
ಚಾಲೆಂಜ್ ನಂ.1: ಟಾಸ್ ಗೆಲ್ಲಲೇಬೇಕು, ಚೇಸಿಂಗ್ ಆಯ್ಕೆ ಮಾಡ್ಕೋಬೇಕು
ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಡಿಸೈಡಿಂಗ್ ಫ್ಯಾಕ್ಟರ್. ಆರ್ಸಿಬಿ ಸ್ಟ್ರೆಂಥ್ ಚೇಸಿಂಗ್. ಹೀಗಾಗಿ ಟಾಸ್ ಗೆದ್ದು, ಚೇಸಿಂಗ್ ಆಯ್ಕೆ ಮಾಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ವಿರಾಟ್ ಕೊಹ್ಲಿಯಂಥ ಚೇಸ್ ಮಾಸ್ಟರ್, ದಿನೇಶ್ ಕಾರ್ತಿಕ್ರಂತ ಫಿನಿಷರ್ ಇದ್ದಾಗ ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ಆರ್ಸಿಬಿಗೆ ಇನ್ನಷ್ಟು ಸುಲಭವಾಗಲಿದೆ.
ಚಾಲೆಂಜ್ ನಂ.2: 160ರಿಂದ 170ರೊಳಗೆ ಚೆನ್ನೈ ಆಟಕ್ಕೆ ಬ್ರೇಕ್ ಹಾಕ್ಬೇಕು
ಚೆನ್ನೈ ತಂಡ ಮೊದಲು ಬ್ಯಾಟಿಂಗ್ಗಿಳಿದಿದ್ದೇ ಆದ್ರೆ, ಕನಿಷ್ಟ 160ರಿಂದ 170 ರನ್ಗಳಿಗೆ ಸಿಎಸ್ಕೆ ತಂಡವನ್ನ ಕಟ್ಟಿ ಹಾಕಬೇಕಿದೆ. ಕಳಪೆ ಫಾರ್ಮ್ನಿಂದ ಹೊರ ಬಂದಿರುವ ಆರ್ಸಿಬಿ ಬೌಲರ್ಸ್ ಡೆಲ್ಲಿ ವಿರುದ್ಧ ಮಾಡಿದಂತೆ, ಚೆನ್ನೈ ವಿರುದ್ಧವೂ ಸೂಪರ್ಬ್ ಬೌಲಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಕನಿಷ್ಟ 160ರಿಂದ 170ರೊಳಗೆ ಸಿಎಸ್ಕೆ ಆಲೌಟ್ ಮಾಡಿದ್ರೆ, ವೇಗವಾಗಿ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗುತ್ತೆ. ರನ್ರೇಟ್ ಹೆಚ್ಚಿಸಿಕೊಳ್ಳಲೂ ನೆರವಾಗಲಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?
ಚಾಲೆಂಜ್ ನಂ.3: ಋತುರಾಜ್, ದುಬೆಗೆ ಘರ್ಜಿಸಲು ಅವಕಾಶ ಕೊಡಬಾರ್ದು
ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಸ್ಫೋಟಕ ಬ್ಯಾಟರ್ ಶಿವಂ ದುಬೆಗೆ ಸೆಟಲ್ ಆಗಲು ಅವಕಾಶವನ್ನೇ ನೀಡಬಾರದು. ಈ ಇಬ್ಬರು ಸೆಟಲ್ ಆದ್ರೆ, ಸಿಕ್ಕಾಪಟ್ಟೇ ಡೇಂಜರಸ್. ಕೊನೆಯವರೆಗೂ ಕ್ರಿಸ್ ಕಚ್ಚಿ ನಿಲ್ತಾರೆ. ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ಸುಲಭವಾಗಿ ರನ್ ಹೊಳೆಯನ್ನೂ ಹರಿಸ್ತಾರೆ. ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿದ್ರೆ, ಆರ್ಸಿಬಿ ಪ್ಲೇ ಆಫ್ ಹಾದಿ ಸಲೀಸಾಗಲಿದೆ.
ಚಾಲೆಂಜ್ ನಂ.4: CSK ಸ್ಪಿನ್ನರ್ಸ್ ಎದುರು ಎಚ್ಚರಿಕೆಯ ಆಟ ಆಡ್ಬೇಕು
ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನೆರ್, ಮಹೀಶ ತೀಕ್ಷಣ.. ಚೆನ್ನೈ ತಂಡ ಬೌಲಿಂಗ್ ಬೆನ್ನೆಲುಬಾಗಿದ್ದಾರೆ. ತಮ್ಮ ಸ್ಪಿನ್ ಮೋಡಿಯಿಂದಲೇ ಎದುರಾಳಿಗಳ ಆಟಕ್ಕೆ ಅಂತ್ಯ ಹಾಡೋ ಸಾಮರ್ಥ್ಯವಿದೆ. ಚಿನ್ನಸ್ವಾಮಿ ಪಿಚ್ ಸ್ಪಿನ್ಗೆ ನೆರವು ನೀಡೋ ಸಾಧ್ಯತೆಯಿದ್ದು, ಆರ್ಸಿಬಿ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ. ತಾಳ್ಮೆಯಿಂದ ವಿಕೆಟ್ ಕಾಯ್ದುಕೊಂಡು ರನ್ರೇಟ್ ಮೆಂಟೇನ್ ಮಾಡಿದ್ರೆ ಸಾಕು.
ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್.. ಹೈದರಾಬಾದ್ ಸೋತರೆ ಆರ್ಸಿಬಿಗೆ ಭಾರೀ ಲಾಭ.. ಅದು ಹೇಗೆ..?
ಚಾಲೆಂಜ್ ನಂ.5: ಒತ್ತಡಕ್ಕೆ ಒಳಗಾದ್ರೆ ಸೋಲು ಕಟ್ಟಿಟ್ಟ ಬುತ್ತಿ
ಮೇ 18ರ ಕದನ ಎರಡೂ ತಂಡಗಳ ಪಾಲಿನ ಡು ಆರ್ ಡೈ ಕದನ. ಲೀಗ್ ಪಂದ್ಯವಾದ್ರೂ ಇದಕ್ಕೆ ಎಲಿಮಿನೇಟರ್ ಟಚ್ ಸಿಕ್ಕಿದೆ. ಬಲಿಷ್ಟ ಸಿಎಸ್ಕೆ ಎದುರು, ಬಿಗ್ ಮಾರ್ಜಿನ್ನಲ್ಲಿ ಗೆಲ್ಲಬೇಕಾಗಿರೋದ್ರಿಂದ ಆರ್ಸಿಬಿ ಆಟಗಾರರ ಮೇಲೆ ಪ್ರೆಶರ್ ಬ್ಯುಲ್ಡ್ ಮಾಡೋ ಸಾಧ್ಯತೆಯಿದೆ. ಆಟಗಾರರು ಒತ್ತಡಕ್ಕೆ ಒಳಗಾದ್ರೆ, ಕಥೆ ಮುಗಿದಂತೆ. ಸೋಲು ಕಟ್ಟಿಟ್ಟ ಬುತ್ತಿ. ಈ ಪಂದ್ಯವನ್ನೂ ಜಸ್ಟ್ ಅನದರ್ ಗೇಮ್ ಎಂಬಂತೆ ಆಡಿದ್ರೆ ಮಾತ್ರ ಪ್ಲೇ ಆಫ್ ಎಂಟ್ರಿ ಸಾಧ್ಯ.
ಸತತ 5 ಪಂದ್ಯ ಗೆದ್ದು, ಗೆಲುವಿನ ನಾಗಾಲೋಟ ಮುಂದುವರೆಸಿರೋ ಆರ್ಸಿಬಿಯ ಮುಂದೆ ಇದೀಗ ಹಲವು ಸವಾಲುಗಳಿವೆ. ಆ ಚಾಲೆಂಜ್ಗಳನ್ನ ರಾಯಲ್ ಚಾಲೆಂಜರ್ಸ್ ದಿಟ್ಟವಾಗಿ ಎದುರಿಸಿದ್ರೆ 6ನೇ ಪಂದ್ಯದಲ್ಲೂ ಗೆಲುವು ಆರ್ಸಿಬಿಯದ್ದೇ. ಅಪ್ಪಿತಪ್ಪಿ ಎಡವಿದ್ರೆ ಸಿಎಸ್ಕೆ ಗೆದ್ದು ಬೀಗಲಿದೆ. ಈ ಸೀಸನ್ನಲ್ಲೂ ಆರ್ಸಿಬಿ ಫ್ಯಾನ್ಸ್ ಕಪ್ ನಮ್ದಲ್ಲ ಅನ್ನಬೇಕಾಗುತ್ತದೆ.
ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್ಸಿಬಿಗೆ ವರದಾನ ಆಗುತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟಾಸ್ ಗೆದ್ರೆ ಯಾರಿಗೆ ಲಾಭ? ಯಾವ ಆಯ್ಕೆ ಬೆಸ್ಟ್?
ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಪಂದ್ಯ
ಚೆನ್ನೈ ಎದುರು RCB ಮಾಡಬೇಕಾಗಿರೋದೇನು..?
ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಗ್ ಬ್ಯಾಟಲ್ ಮೇಲೆ ಕ್ರಿಕೆಟ್ ಲೋಕದ ಕಣ್ಣಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿ ಅಂಗಳದಲ್ಲಿ, ಹೋಮ್ಕ್ರೌಡ್ ಎದುರು, ಹೈಪ್ರೆಷರ್ ಗೇಮ್ನಲ್ಲಿ ಆರ್ಸಿಬಿ ಗೆಲ್ಲುತ್ತ ಅನ್ನೋದು ಎಲ್ಲರ ಕುತೂಹಲ. ಸತತ 5 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿದೆ ನಿಜ. ಆದ್ರೂ ಸಿಎಸ್ಕೆ ಗೆಲ್ಲೋದು ಟಫ್ ಟಾಸ್ಕ್. ಚಿನ್ನಸ್ವಾಮಿ ಅಂಗಳದಲ್ಲಿ ಆರ್ಸಿಬಿ ಮುಂದೆ ಸಿಕ್ಕಾಪಟ್ಟೆ ಚಾಲೆಂಜಸ್ ಇವೆ.
ಐಪಿಎಲ್ ಟೂರ್ನಿಯ ಮಹಾಕದನದ ಕಾವು ಕ್ರಿಕೆಟ್ ಲೋಕದಲ್ಲಿ ಜೋರಾಗಿದೆ. ಚೆನ್ನೈ ವರ್ಸಸ್ ಬೆಂಗಳೂರು ನಡುವಿನ ಕದನ ಕುತೂಹಲ ಅಭಿಮಾನಿಗಳ ವಲಯದಲ್ಲಿ ತೀವ್ರಗೊಂಡಿದೆ. ಚೆನ್ನೈ ಎದುರು ಕಳಪೆ ರೆಕಾರ್ಡ್ ಹೊಂದಿರೋ ಆರ್ಸಿಬಿಗೆ ಸಾಮಾನ್ಯವಾದ ಜಯ ಸಾಧಿಸೋದೆ ಸವಾಲಿನ ವಿಚಾರ. ಅಂತಾದ್ರಲ್ಲಿ, ಮೇ 18ರಂದು ಭರ್ಜರಿ ಗೆಲುವನ್ನ ಸಾಧಿಸಬೇಕಿದೆ. ಜಯದ ಜೊತೆಗೆ ರನ್ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಪ್ಲೇ ಆಫ್ ಡೋರ್ ಓಪನ್ ಆಗಲಿದೆ. ಇದೆಲ್ಲಾ ಸಾಧ್ಯವಾಗಬೇಕಂದ್ರೆ ಹಲವು ಸವಾಲುಗಳನ್ನ ಆರ್ಸಿಬಿ ಮೆಟ್ಟಿನಿಲ್ಲಬೇಕಿದೆ.
ಇದನ್ನೂ ಓದಿ:ಕಾರಿನಲ್ಲಿ ಮಗು ಮರೆತು ಮದ್ವೆಗೆ ಹೋದ ಅಪ್ಪ-ಅಮ್ಮ; ನರಳಿ ನರಳಿ ಪ್ರಾಣಬಿಟ್ಟ 3 ವರ್ಷದ ಕಂದಮ್ಮ
ಚಾಲೆಂಜ್ ನಂ.1: ಟಾಸ್ ಗೆಲ್ಲಲೇಬೇಕು, ಚೇಸಿಂಗ್ ಆಯ್ಕೆ ಮಾಡ್ಕೋಬೇಕು
ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಡಿಸೈಡಿಂಗ್ ಫ್ಯಾಕ್ಟರ್. ಆರ್ಸಿಬಿ ಸ್ಟ್ರೆಂಥ್ ಚೇಸಿಂಗ್. ಹೀಗಾಗಿ ಟಾಸ್ ಗೆದ್ದು, ಚೇಸಿಂಗ್ ಆಯ್ಕೆ ಮಾಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ. ವಿರಾಟ್ ಕೊಹ್ಲಿಯಂಥ ಚೇಸ್ ಮಾಸ್ಟರ್, ದಿನೇಶ್ ಕಾರ್ತಿಕ್ರಂತ ಫಿನಿಷರ್ ಇದ್ದಾಗ ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ಆರ್ಸಿಬಿಗೆ ಇನ್ನಷ್ಟು ಸುಲಭವಾಗಲಿದೆ.
ಚಾಲೆಂಜ್ ನಂ.2: 160ರಿಂದ 170ರೊಳಗೆ ಚೆನ್ನೈ ಆಟಕ್ಕೆ ಬ್ರೇಕ್ ಹಾಕ್ಬೇಕು
ಚೆನ್ನೈ ತಂಡ ಮೊದಲು ಬ್ಯಾಟಿಂಗ್ಗಿಳಿದಿದ್ದೇ ಆದ್ರೆ, ಕನಿಷ್ಟ 160ರಿಂದ 170 ರನ್ಗಳಿಗೆ ಸಿಎಸ್ಕೆ ತಂಡವನ್ನ ಕಟ್ಟಿ ಹಾಕಬೇಕಿದೆ. ಕಳಪೆ ಫಾರ್ಮ್ನಿಂದ ಹೊರ ಬಂದಿರುವ ಆರ್ಸಿಬಿ ಬೌಲರ್ಸ್ ಡೆಲ್ಲಿ ವಿರುದ್ಧ ಮಾಡಿದಂತೆ, ಚೆನ್ನೈ ವಿರುದ್ಧವೂ ಸೂಪರ್ಬ್ ಬೌಲಿಂಗ್ ಪರ್ಫಾಮೆನ್ಸ್ ನೀಡಬೇಕಿದೆ. ಕನಿಷ್ಟ 160ರಿಂದ 170ರೊಳಗೆ ಸಿಎಸ್ಕೆ ಆಲೌಟ್ ಮಾಡಿದ್ರೆ, ವೇಗವಾಗಿ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗುತ್ತೆ. ರನ್ರೇಟ್ ಹೆಚ್ಚಿಸಿಕೊಳ್ಳಲೂ ನೆರವಾಗಲಿದೆ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ನಲ್ಲಿ ಮತ್ತೆ ಬಿರುಕು; ರೋಹಿತ್-ಹಾರ್ದಿಕ್ ಮಧ್ಯೆ ಈಗ ಏನಾಯ್ತು..?
ಚಾಲೆಂಜ್ ನಂ.3: ಋತುರಾಜ್, ದುಬೆಗೆ ಘರ್ಜಿಸಲು ಅವಕಾಶ ಕೊಡಬಾರ್ದು
ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಸ್ಫೋಟಕ ಬ್ಯಾಟರ್ ಶಿವಂ ದುಬೆಗೆ ಸೆಟಲ್ ಆಗಲು ಅವಕಾಶವನ್ನೇ ನೀಡಬಾರದು. ಈ ಇಬ್ಬರು ಸೆಟಲ್ ಆದ್ರೆ, ಸಿಕ್ಕಾಪಟ್ಟೇ ಡೇಂಜರಸ್. ಕೊನೆಯವರೆಗೂ ಕ್ರಿಸ್ ಕಚ್ಚಿ ನಿಲ್ತಾರೆ. ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ಸುಲಭವಾಗಿ ರನ್ ಹೊಳೆಯನ್ನೂ ಹರಿಸ್ತಾರೆ. ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿದ್ರೆ, ಆರ್ಸಿಬಿ ಪ್ಲೇ ಆಫ್ ಹಾದಿ ಸಲೀಸಾಗಲಿದೆ.
ಚಾಲೆಂಜ್ ನಂ.4: CSK ಸ್ಪಿನ್ನರ್ಸ್ ಎದುರು ಎಚ್ಚರಿಕೆಯ ಆಟ ಆಡ್ಬೇಕು
ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನೆರ್, ಮಹೀಶ ತೀಕ್ಷಣ.. ಚೆನ್ನೈ ತಂಡ ಬೌಲಿಂಗ್ ಬೆನ್ನೆಲುಬಾಗಿದ್ದಾರೆ. ತಮ್ಮ ಸ್ಪಿನ್ ಮೋಡಿಯಿಂದಲೇ ಎದುರಾಳಿಗಳ ಆಟಕ್ಕೆ ಅಂತ್ಯ ಹಾಡೋ ಸಾಮರ್ಥ್ಯವಿದೆ. ಚಿನ್ನಸ್ವಾಮಿ ಪಿಚ್ ಸ್ಪಿನ್ಗೆ ನೆರವು ನೀಡೋ ಸಾಧ್ಯತೆಯಿದ್ದು, ಆರ್ಸಿಬಿ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ. ತಾಳ್ಮೆಯಿಂದ ವಿಕೆಟ್ ಕಾಯ್ದುಕೊಂಡು ರನ್ರೇಟ್ ಮೆಂಟೇನ್ ಮಾಡಿದ್ರೆ ಸಾಕು.
ಇದನ್ನೂ ಓದಿ:SRH vs GT ನಡುವೆ ಇವತ್ತು ಮೆಗಾ ಫೈಟ್.. ಹೈದರಾಬಾದ್ ಸೋತರೆ ಆರ್ಸಿಬಿಗೆ ಭಾರೀ ಲಾಭ.. ಅದು ಹೇಗೆ..?
ಚಾಲೆಂಜ್ ನಂ.5: ಒತ್ತಡಕ್ಕೆ ಒಳಗಾದ್ರೆ ಸೋಲು ಕಟ್ಟಿಟ್ಟ ಬುತ್ತಿ
ಮೇ 18ರ ಕದನ ಎರಡೂ ತಂಡಗಳ ಪಾಲಿನ ಡು ಆರ್ ಡೈ ಕದನ. ಲೀಗ್ ಪಂದ್ಯವಾದ್ರೂ ಇದಕ್ಕೆ ಎಲಿಮಿನೇಟರ್ ಟಚ್ ಸಿಕ್ಕಿದೆ. ಬಲಿಷ್ಟ ಸಿಎಸ್ಕೆ ಎದುರು, ಬಿಗ್ ಮಾರ್ಜಿನ್ನಲ್ಲಿ ಗೆಲ್ಲಬೇಕಾಗಿರೋದ್ರಿಂದ ಆರ್ಸಿಬಿ ಆಟಗಾರರ ಮೇಲೆ ಪ್ರೆಶರ್ ಬ್ಯುಲ್ಡ್ ಮಾಡೋ ಸಾಧ್ಯತೆಯಿದೆ. ಆಟಗಾರರು ಒತ್ತಡಕ್ಕೆ ಒಳಗಾದ್ರೆ, ಕಥೆ ಮುಗಿದಂತೆ. ಸೋಲು ಕಟ್ಟಿಟ್ಟ ಬುತ್ತಿ. ಈ ಪಂದ್ಯವನ್ನೂ ಜಸ್ಟ್ ಅನದರ್ ಗೇಮ್ ಎಂಬಂತೆ ಆಡಿದ್ರೆ ಮಾತ್ರ ಪ್ಲೇ ಆಫ್ ಎಂಟ್ರಿ ಸಾಧ್ಯ.
ಸತತ 5 ಪಂದ್ಯ ಗೆದ್ದು, ಗೆಲುವಿನ ನಾಗಾಲೋಟ ಮುಂದುವರೆಸಿರೋ ಆರ್ಸಿಬಿಯ ಮುಂದೆ ಇದೀಗ ಹಲವು ಸವಾಲುಗಳಿವೆ. ಆ ಚಾಲೆಂಜ್ಗಳನ್ನ ರಾಯಲ್ ಚಾಲೆಂಜರ್ಸ್ ದಿಟ್ಟವಾಗಿ ಎದುರಿಸಿದ್ರೆ 6ನೇ ಪಂದ್ಯದಲ್ಲೂ ಗೆಲುವು ಆರ್ಸಿಬಿಯದ್ದೇ. ಅಪ್ಪಿತಪ್ಪಿ ಎಡವಿದ್ರೆ ಸಿಎಸ್ಕೆ ಗೆದ್ದು ಬೀಗಲಿದೆ. ಈ ಸೀಸನ್ನಲ್ಲೂ ಆರ್ಸಿಬಿ ಫ್ಯಾನ್ಸ್ ಕಪ್ ನಮ್ದಲ್ಲ ಅನ್ನಬೇಕಾಗುತ್ತದೆ.
ಇದನ್ನೂ ಓದಿ:CSK ತಂಡದಿಂದ ಹೊರಬಿದ್ದ ಇಬ್ಬರು ಪವರ್ ಪ್ಲೇ ಸ್ಪೆಷಲಿಸ್ಟ್.. ಅದೇ ಆರ್ಸಿಬಿಗೆ ವರದಾನ ಆಗುತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್