ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಸೋಲು
ಸೋಲಿಗೆ ತಿಲಕ್ನ ಗುರಿ ಮಾಡಿದ ಹಾರ್ದಿಕ್..!
ಡ್ರೆಸ್ಸಿಂಗ್ ರೂಮ್ನಲ್ಲಿ ನಡೀತಾ ಜೋರು ಜಗಳ..?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಎಲ್ಲಾ ಸರಿಯಿಲ್ಲ ಅನ್ನೋದು ಮತ್ತೆ ಜಗಜ್ಜಾಹೀರಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಜೋರು ಜಗಳ ನಡೆದೇ ಬಿಟ್ಟಿದೆ. ಜಗಳ ಬಿಡಿಸಲು ಹೋದ ರೋಹಿತ್ ಶರ್ಮಾ ಹೈರಾಣಾಗಿದ್ದಾರೆ. ಅಷ್ಟಕ್ಕೂ ಹಾರ್ದಿಕ್-ತಿಲಕ್ ನಡುವೆ ಆಗಿದ್ದೇನು? ಏನಿದು ಕಥೆ?
ಈ ಸೀಸನ್ನ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆದ ಮನೆಯಾಗಿದ್ದಿದ್ದು ನಿಮ್ಗೆಲ್ಲಾ ಗೊತ್ತಿರೋ ವಿಚಾರನೇ.. ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ಕೊಟ್ಟಿದ್ದು, ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಿದ್ದು, ಒನ್ ಫ್ಯಾಮಿಲಿಯನ್ನ ಮೆನಿ ಫ್ಯಾಮಿಲಿಯನ್ನಾಗಿಸಿತ್ತು. ಐಪಿಎಲ್ ಆರಂಭಿಕ ಹಂತದಲ್ಲಿ ಮುಂಬೈ ಇಂಡಿಯನ್ಸ್ನ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು.
ಇದನ್ನೂ ಓದಿ:ವಿಶ್ವಕಪ್ನಿಂದ ರಾಹುಲ್ಗೆ ಕೊಕ್..! ಬಾಲಿವುಡ್ ಸ್ಟಾರ್ ಆಕ್ರೋಶ.. ಬಿಸಿಸಿಐಗೆ LSG ಟಾಂಟ್..!
ಆರಂಭದಲ್ಲಿ ಕಾಂಟ್ರವರ್ಸಿಯಿಂದಲೇ ಮುಂಬೈ ಫ್ರಾಂಚೈಸಿ ಸದ್ದು ಮಾಡಿತ್ತು. ನಿಜ. ಕಳೆದ ಕೆಲ ಪಂದ್ಯಗಳಿಂದ ವಿವಾದದ ಕಾವು ಕಡಿಮೆಯಾಗಿತ್ತು. ಎಲ್ಲಾ ಸರಿಯಾಯ್ತು, ವಿವಾದಕ್ಕೆ ಫುಲ್ ಸ್ಟಾಫ್ ಬಿತ್ತು ಎಂಬ ತಿರ್ಮಾನಕ್ಕೆ ಎಲ್ಲಾ ಬಂದಿದ್ರು. ಅಸಲಿಗೆ ವಿವಾದದ ಅಂತ್ಯವಾಗಿರಲಿಲ್ಲ.. ಬೂದಿ ಮುಚ್ಚಿದ ಕೆಂಡವಾಗಿತ್ತು. ಇದೀಗ ಮತ್ತೆ ಹೊಗೆಯಾಡಲು ಶುರುವಾಗಿದೆ.
ನನ್ನ ಪ್ರಕಾರ, ಮಧ್ಯದ ಕೆಲ ಓವರ್ಗಳಲ್ಲಿ ನಾವು ಇನ್ನಷ್ಟು ಅವಕಾಶಗಳನ್ನ ತೆಗೆದುಕೊಳ್ಳಬಹುದಿತ್ತು. ಅಕ್ಷರ್ ಪಟೇಲ್, ಎಡಗೈ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡ್ತಿದ್ರು. ಅವರ ಬೌಲಿಂಗ್ನಲ್ಲಿ ಉತ್ತಮ ಆಟವಾಡಬಹುದಿತ್ತು. ಪಂದ್ಯದ ಬಗ್ಗೆ ಅರಿವು ಇರಲಿಲ್ಲ. ಅಂತಿಮವಾಗಿ ಅದು ಸೋಲಿಗೆ ಗುರಿ ಮಾಡಿತು.
ಇದನ್ನೂ ಓದಿ:ಇನ್ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?
ಸೋಲಿಗೆ ತಿಲಕ್ ವರ್ಮಾನ ಗುರಿ ಮಾಡಿದ ಹಾರ್ದಿಕ್..!
ಪ್ಲೇ ಆಫ್ ಎಂಟ್ರಿಗೆ ಗೆಲ್ಲಲೇಬೇಕಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಸೋಲುಂಡಿತು. ಇದ್ರ ಬೆನ್ನಲ್ಲೇ, ಸೋಲಿನ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹೇಳಿದ ಮಾತುಗಳಿವು. ಅಂದ್ಹಾಗೆ ಹಾರ್ದಿಕ್ ಪಾಂಡ್ಯಾ ಹೇಳಿದ ಎಡಗೈ ಬ್ಯಾಟರ್ ಬೇರಾರೂ ಅಲ್ಲ.. ಆ ಪಂದ್ಯದ ಹೈಯೆಸ್ಟ್ ರನ್ ಸ್ಕೋರರ್ ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ ವಿರುದ್ಧ ತಿಲಕ್ ವರ್ಮಾ ಕೆಂಡ
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ತಿಲಕ್ ವರ್ಮಾ ಮುಂಬೈ ಪರ ಏಕಾಂಗಿಯಾಗಿ ಹೋರಾಡಿದ್ರು. 32 ಎಸೆತಗಳಲ್ಲಿ 63 ರನ್ ಚಚ್ಚಿದ್ರು. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಉತ್ತಮ ಪಾರ್ಟನರ್ಶಿಪ್ ಕೂಡ ಬ್ಯುಲ್ಡ್ ಮಾಡಿದ್ರು. ಹಾಗಿದ್ರೂ, ಪಂದ್ಯದ ಬಳಿಕ ಹಾರ್ದಿಕ್ ಸೋಲಿಗೆ ತಿಲಕ್ ವರ್ಮಾ ಬ್ಯಾಟಿಂಗ್ ಶೈಲಿ ಕಾರಣ ಎಂದು ಹೇಳಿದ್ರು. ಇದೇ ಕಾರಣಕ್ಕೆ ಮುಂಬೈ ತಂಡದಲ್ಲಿ ಮತ್ತೆ ಕಿತ್ತಾಟ ಶುರುವಾಗಿದೆ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ಡ್ರೆಸ್ಸಿಂಗ್ ರೂಮ್ನಲ್ಲಿ ರಂಪಾಟ, ವಾಗ್ವಾದ..?
ಹಾರ್ದಿಕ್ ಪಾಂಡ್ಯ ಸೋಲಿಗೆ ತಿಲಕ್ ವರ್ಮಾ ಕಾರಣ ಎಂದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ ಜೋರು ರಂಪಾಟವೇ ನಡೆದಿದ್ಯಂತೆ. ಹಾರ್ದಿಕ್ ಮೇಲೆ ಪೂರ್ತಿ ಸಿಟ್ಟಾಗಿದ್ದ ತಿಲಕ್ ವರ್ಮಾ, ಡ್ರೆಸ್ಸಿಂಗ್ ರೂಮ್ನಲ್ಲಿ ವಾಗ್ವಾದ ನಡೆಸಿದ್ದಾರಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜೋರು ಜಗಳವೇ ನಡೆದಿದೆ ಅನ್ನೋ ಆಘಾತಕಾರಿ ವಿಚಾರದ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ತಾರಕಕ್ಕೇರಿದ ಜಗಳ, ರೋಹಿತ್ ಮಧ್ಯಪ್ರವೇಶ..?
ಡ್ರೆಸ್ಸಿಂಗ್ ರೂಮ್ನಲ್ಲಿ ಹಾರ್ದಿಕ್, ತಿಲಕ್ ನಡುವೆ ತೀವ್ರ ತರದಲ್ಲಿ ಜಗಳ ನಡೆದಿದ್ಯಂತೆ. ಇಬ್ಬರೂ ಕೂಡ ಸಮಾಧಾನವಾಗುವಂತೆ ಕಾಣದೇ ಇದ್ದಾಗ, ಮಾಜಿ ಕ್ಯಾಪ್ಟನ್ ರೋಹಿತ್ ಮಧ್ಯ ಪ್ರವೇಶ ಮಾಡಿದ್ದಾರಂತೆ. ಆ ಬಳಿಕವಷ್ಟೇ ಪರಿಸ್ಥಿತಿ ತಿಳಿಯಾಗಿದ್ದಂತೆ. ಅಂತಿಮವಾಗಿ ಫ್ರಾಂಚೈಸಿಯ ಓನರ್ಸ್ ಇಬ್ಬರೂ ಆಟಗಾರರನ್ನ ಸಮಾಧಾನ ಪಡೆಸಿದ್ರು, ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು; ಮೂರು ವರ್ಷದ ಬಳಿಕ ಸೀರಮ್ ಸಂಸ್ಥೆ ವಿರುದ್ಧ ಕೇಸ್..!
ಒನ್ ಫ್ಯಾಮಿಲಿ ಈಗ ಮೆನಿ ಫ್ಯಾಮಿಲಿ..!
ಒನ್ಫ್ಯಾಮಿಲಿ ಅಂತಾ ಒಗ್ಗಟ್ಟಿನ ಮಂತ್ರ ಪಠಿಸ್ತಾ ಇದ್ದ ಮುಂಬೈ, ಇದೀಗ ಮೆನಿ ಫ್ಯಾಮಿಲಿಯಾಗಿದೆ. ಹಾರ್ದಿಕ್ – ತಿಲಕ್ ನಡುವಿನ ಜಗಳ ತಂಡದ ವಾತಾವರಣವನ್ನ ಇನ್ನಷ್ಟು ಹದಗೆಡಿಸಿದೆ. ಇದನೆಲ್ಲಾ ನೋಡಿದ್ರೆ, ಮುಂದಿನ ಸೀಸನ್ನಲ್ಲಿ ಮುಂಬೈ ತಂಡದಲ್ಲಿ ಭಾರೀ ಬದಲಾವಣೆಗಳಾಗೋ ಸಾಧ್ಯತೆ ದಟ್ಟವಾಗಿದೆ. ತಂಡದ ಕೋರ್ ಟೀಮ್ನ ಭಾಗವಾಗಿರೋ ಆಟಗಾರರೇ ಮೆಗಾ ಆಕ್ಷನ್ಗೆ ಧುಮಿಕಿದ್ರೂ ಅಚ್ಚರಿ ಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈಗೆ ಸೋಲು
ಸೋಲಿಗೆ ತಿಲಕ್ನ ಗುರಿ ಮಾಡಿದ ಹಾರ್ದಿಕ್..!
ಡ್ರೆಸ್ಸಿಂಗ್ ರೂಮ್ನಲ್ಲಿ ನಡೀತಾ ಜೋರು ಜಗಳ..?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಲ್ಲಿ ಎಲ್ಲಾ ಸರಿಯಿಲ್ಲ ಅನ್ನೋದು ಮತ್ತೆ ಜಗಜ್ಜಾಹೀರಾಗಿದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ-ತಿಲಕ್ ವರ್ಮಾ ಜೋರು ಜಗಳ ನಡೆದೇ ಬಿಟ್ಟಿದೆ. ಜಗಳ ಬಿಡಿಸಲು ಹೋದ ರೋಹಿತ್ ಶರ್ಮಾ ಹೈರಾಣಾಗಿದ್ದಾರೆ. ಅಷ್ಟಕ್ಕೂ ಹಾರ್ದಿಕ್-ತಿಲಕ್ ನಡುವೆ ಆಗಿದ್ದೇನು? ಏನಿದು ಕಥೆ?
ಈ ಸೀಸನ್ನ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆದ ಮನೆಯಾಗಿದ್ದಿದ್ದು ನಿಮ್ಗೆಲ್ಲಾ ಗೊತ್ತಿರೋ ವಿಚಾರನೇ.. ರೋಹಿತ್ ಶರ್ಮಾಗೆ ನಾಯಕತ್ವದಿಂದ ಕೊಕ್ ಕೊಟ್ಟಿದ್ದು, ಹಾರ್ದಿಕ್ ಪಾಂಡ್ಯಾಗೆ ಪಟ್ಟ ಕಟ್ಟಿದ್ದು, ಒನ್ ಫ್ಯಾಮಿಲಿಯನ್ನ ಮೆನಿ ಫ್ಯಾಮಿಲಿಯನ್ನಾಗಿಸಿತ್ತು. ಐಪಿಎಲ್ ಆರಂಭಿಕ ಹಂತದಲ್ಲಿ ಮುಂಬೈ ಇಂಡಿಯನ್ಸ್ನ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು.
ಇದನ್ನೂ ಓದಿ:ವಿಶ್ವಕಪ್ನಿಂದ ರಾಹುಲ್ಗೆ ಕೊಕ್..! ಬಾಲಿವುಡ್ ಸ್ಟಾರ್ ಆಕ್ರೋಶ.. ಬಿಸಿಸಿಐಗೆ LSG ಟಾಂಟ್..!
ಆರಂಭದಲ್ಲಿ ಕಾಂಟ್ರವರ್ಸಿಯಿಂದಲೇ ಮುಂಬೈ ಫ್ರಾಂಚೈಸಿ ಸದ್ದು ಮಾಡಿತ್ತು. ನಿಜ. ಕಳೆದ ಕೆಲ ಪಂದ್ಯಗಳಿಂದ ವಿವಾದದ ಕಾವು ಕಡಿಮೆಯಾಗಿತ್ತು. ಎಲ್ಲಾ ಸರಿಯಾಯ್ತು, ವಿವಾದಕ್ಕೆ ಫುಲ್ ಸ್ಟಾಫ್ ಬಿತ್ತು ಎಂಬ ತಿರ್ಮಾನಕ್ಕೆ ಎಲ್ಲಾ ಬಂದಿದ್ರು. ಅಸಲಿಗೆ ವಿವಾದದ ಅಂತ್ಯವಾಗಿರಲಿಲ್ಲ.. ಬೂದಿ ಮುಚ್ಚಿದ ಕೆಂಡವಾಗಿತ್ತು. ಇದೀಗ ಮತ್ತೆ ಹೊಗೆಯಾಡಲು ಶುರುವಾಗಿದೆ.
ನನ್ನ ಪ್ರಕಾರ, ಮಧ್ಯದ ಕೆಲ ಓವರ್ಗಳಲ್ಲಿ ನಾವು ಇನ್ನಷ್ಟು ಅವಕಾಶಗಳನ್ನ ತೆಗೆದುಕೊಳ್ಳಬಹುದಿತ್ತು. ಅಕ್ಷರ್ ಪಟೇಲ್, ಎಡಗೈ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡ್ತಿದ್ರು. ಅವರ ಬೌಲಿಂಗ್ನಲ್ಲಿ ಉತ್ತಮ ಆಟವಾಡಬಹುದಿತ್ತು. ಪಂದ್ಯದ ಬಗ್ಗೆ ಅರಿವು ಇರಲಿಲ್ಲ. ಅಂತಿಮವಾಗಿ ಅದು ಸೋಲಿಗೆ ಗುರಿ ಮಾಡಿತು.
ಇದನ್ನೂ ಓದಿ:ಇನ್ಸ್ಟಾದಲ್ಲಿ ಅರಳಿದ ಒಂದು ಪ್ರೀತಿ..! ಯಾಕೆ ಹೀಗೆ ಆಯಿತು.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.. ಏನಂತೀರಾ?
ಸೋಲಿಗೆ ತಿಲಕ್ ವರ್ಮಾನ ಗುರಿ ಮಾಡಿದ ಹಾರ್ದಿಕ್..!
ಪ್ಲೇ ಆಫ್ ಎಂಟ್ರಿಗೆ ಗೆಲ್ಲಲೇಬೇಕಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಸೋಲುಂಡಿತು. ಇದ್ರ ಬೆನ್ನಲ್ಲೇ, ಸೋಲಿನ ಬಗ್ಗೆ ಮಾತನಾಡಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹೇಳಿದ ಮಾತುಗಳಿವು. ಅಂದ್ಹಾಗೆ ಹಾರ್ದಿಕ್ ಪಾಂಡ್ಯಾ ಹೇಳಿದ ಎಡಗೈ ಬ್ಯಾಟರ್ ಬೇರಾರೂ ಅಲ್ಲ.. ಆ ಪಂದ್ಯದ ಹೈಯೆಸ್ಟ್ ರನ್ ಸ್ಕೋರರ್ ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ ವಿರುದ್ಧ ತಿಲಕ್ ವರ್ಮಾ ಕೆಂಡ
ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ತಿಲಕ್ ವರ್ಮಾ ಮುಂಬೈ ಪರ ಏಕಾಂಗಿಯಾಗಿ ಹೋರಾಡಿದ್ರು. 32 ಎಸೆತಗಳಲ್ಲಿ 63 ರನ್ ಚಚ್ಚಿದ್ರು. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಉತ್ತಮ ಪಾರ್ಟನರ್ಶಿಪ್ ಕೂಡ ಬ್ಯುಲ್ಡ್ ಮಾಡಿದ್ರು. ಹಾಗಿದ್ರೂ, ಪಂದ್ಯದ ಬಳಿಕ ಹಾರ್ದಿಕ್ ಸೋಲಿಗೆ ತಿಲಕ್ ವರ್ಮಾ ಬ್ಯಾಟಿಂಗ್ ಶೈಲಿ ಕಾರಣ ಎಂದು ಹೇಳಿದ್ರು. ಇದೇ ಕಾರಣಕ್ಕೆ ಮುಂಬೈ ತಂಡದಲ್ಲಿ ಮತ್ತೆ ಕಿತ್ತಾಟ ಶುರುವಾಗಿದೆ.
ಇದನ್ನೂ ಓದಿ:ಮಳೆಯ ಬಗ್ಗೆ ಬಿಗ್ ಅಪ್ಡೇಟ್.. ಮುಂದಿನ ನಾಲ್ಕು ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ..!
ಡ್ರೆಸ್ಸಿಂಗ್ ರೂಮ್ನಲ್ಲಿ ರಂಪಾಟ, ವಾಗ್ವಾದ..?
ಹಾರ್ದಿಕ್ ಪಾಂಡ್ಯ ಸೋಲಿಗೆ ತಿಲಕ್ ವರ್ಮಾ ಕಾರಣ ಎಂದ ಬೆನ್ನಲ್ಲೇ ಡ್ರೆಸ್ಸಿಂಗ್ ರೂಮ್ ಜೋರು ರಂಪಾಟವೇ ನಡೆದಿದ್ಯಂತೆ. ಹಾರ್ದಿಕ್ ಮೇಲೆ ಪೂರ್ತಿ ಸಿಟ್ಟಾಗಿದ್ದ ತಿಲಕ್ ವರ್ಮಾ, ಡ್ರೆಸ್ಸಿಂಗ್ ರೂಮ್ನಲ್ಲಿ ವಾಗ್ವಾದ ನಡೆಸಿದ್ದಾರಂತೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜೋರು ಜಗಳವೇ ನಡೆದಿದೆ ಅನ್ನೋ ಆಘಾತಕಾರಿ ವಿಚಾರದ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ತಾರಕಕ್ಕೇರಿದ ಜಗಳ, ರೋಹಿತ್ ಮಧ್ಯಪ್ರವೇಶ..?
ಡ್ರೆಸ್ಸಿಂಗ್ ರೂಮ್ನಲ್ಲಿ ಹಾರ್ದಿಕ್, ತಿಲಕ್ ನಡುವೆ ತೀವ್ರ ತರದಲ್ಲಿ ಜಗಳ ನಡೆದಿದ್ಯಂತೆ. ಇಬ್ಬರೂ ಕೂಡ ಸಮಾಧಾನವಾಗುವಂತೆ ಕಾಣದೇ ಇದ್ದಾಗ, ಮಾಜಿ ಕ್ಯಾಪ್ಟನ್ ರೋಹಿತ್ ಮಧ್ಯ ಪ್ರವೇಶ ಮಾಡಿದ್ದಾರಂತೆ. ಆ ಬಳಿಕವಷ್ಟೇ ಪರಿಸ್ಥಿತಿ ತಿಳಿಯಾಗಿದ್ದಂತೆ. ಅಂತಿಮವಾಗಿ ಫ್ರಾಂಚೈಸಿಯ ಓನರ್ಸ್ ಇಬ್ಬರೂ ಆಟಗಾರರನ್ನ ಸಮಾಧಾನ ಪಡೆಸಿದ್ರು, ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್ ಪಡೆದ ಬೆನ್ನಲ್ಲೇ ಇಬ್ಬರು ಸಾವು; ಮೂರು ವರ್ಷದ ಬಳಿಕ ಸೀರಮ್ ಸಂಸ್ಥೆ ವಿರುದ್ಧ ಕೇಸ್..!
ಒನ್ ಫ್ಯಾಮಿಲಿ ಈಗ ಮೆನಿ ಫ್ಯಾಮಿಲಿ..!
ಒನ್ಫ್ಯಾಮಿಲಿ ಅಂತಾ ಒಗ್ಗಟ್ಟಿನ ಮಂತ್ರ ಪಠಿಸ್ತಾ ಇದ್ದ ಮುಂಬೈ, ಇದೀಗ ಮೆನಿ ಫ್ಯಾಮಿಲಿಯಾಗಿದೆ. ಹಾರ್ದಿಕ್ – ತಿಲಕ್ ನಡುವಿನ ಜಗಳ ತಂಡದ ವಾತಾವರಣವನ್ನ ಇನ್ನಷ್ಟು ಹದಗೆಡಿಸಿದೆ. ಇದನೆಲ್ಲಾ ನೋಡಿದ್ರೆ, ಮುಂದಿನ ಸೀಸನ್ನಲ್ಲಿ ಮುಂಬೈ ತಂಡದಲ್ಲಿ ಭಾರೀ ಬದಲಾವಣೆಗಳಾಗೋ ಸಾಧ್ಯತೆ ದಟ್ಟವಾಗಿದೆ. ತಂಡದ ಕೋರ್ ಟೀಮ್ನ ಭಾಗವಾಗಿರೋ ಆಟಗಾರರೇ ಮೆಗಾ ಆಕ್ಷನ್ಗೆ ಧುಮಿಕಿದ್ರೂ ಅಚ್ಚರಿ ಪಡಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್