/newsfirstlive-kannada/media/post_attachments/wp-content/uploads/2023/07/HDK_MONEY.jpg)
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಇದ್ದ ಹಾಗೆ. ಕರ್ನಾಟಕ ಸಂಪತ್ಭರಿತ ರಾಜ್ಯ, ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು, ತಹಶೀಲ್ದಾರ್ ಅಜಿತ್ ಕುಮಾರ್ ರೈ ನಿವಾಸದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಮತ್ತು ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಇದೇ ವಿಚಾರದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಮಾಧ್ಯಮಗಳಲ್ಲಿ ಐನೂರು, ಸಾವಿರ ಕೋಟಿ ಎಂದು ಪ್ರಸಾರ ಆಗುತ್ತಿದೆ.
ಅದು ಯಾರೋ ಒಬ್ಬ ತಹಶೀಲ್ದಾರ್ ಕುರಿತ ವರದಿ. ಅವನು ಹಿಂದೆ ಮೂರು ಕೋಟಿ ಕೊಟ್ಟು ಬಂದ. ಹಿಂದಿನ ಸರ್ಕಾರದಲ್ಲಿ ಅವನು ಮೂರು ಕೋಟಿ ನೀಡಿ ಬಂದ. ಇದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಯಾಕಂದ್ರೆ ನಮ್ಮ ರಾಜ್ಯ ಸಂಪತ್ಭರಿತವಾಗಿದೆ. ಬಿಜೆಪಿ-ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ ಎಂದು ಟೀಕಿಸಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ 30 ಲಕ್ಷ ರೂಪಾಯಿ ಕೊಟ್ರೆ ಕೆಲಸ ಮಾಡ್ಕೊಡ್ತೀವಿ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. #NewsFirstKannada#Newsfirstlive#KannadaNews@Siddaramaiah@Dkshivakumar@INCKarnataka@BJP4Karnataka@hd_kumaraswamypic.twitter.com/nimfMcivbQ
— NewsFirst Kannada (@NewsFirstKan) July 3, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ