/newsfirstlive-kannada/media/post_attachments/wp-content/uploads/2024/06/DARSHAN_GANG-1.jpg)
ಬೆಂಗಳೂರು: ಪಟ್ಟಣಗೆರೆ ಶೆಡ್ನಿಂದ ಮೈಸೂರು, ಮೈಸೂರಿಂದ ಕಾಮಾಕ್ಷಿಪಾಳ್ಯಪೊಲೀಸ್ ಸ್ಟೇಷನ್, ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಿಂದ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯ ಜೈಲು, ಅಲ್ಲಿಂದ ಪರಪ್ಪನ ಅಗ್ರಹಾರ. ಈಗ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ದರ್ಶನ್ ಪ್ರಯಾಣ ನಡೆಯತ್ತಿದೆ. ಪರಪ್ಪನ ಅಗ್ರಹಾರದಿಂದ 332 ಕಿಲೋ ಮೀಟರ್ನ 6 ಗಂಟೆಯ ಪ್ರಯಾಣ ಸದ್ಯದಲ್ಲಿಯೇ ಸಾಗಲಿದೆ.
ದರ್ಶನ್ ಕಾಲಿಟ್ಟಲ್ಲೆಲ್ಲಾ ಬರೀ ಯಡವಟ್ಟುಗಳೇ ಕಾಣ ಸಿಗುತ್ತಿವೆ. ಮೊದಲು ಮುಟ್ಟಿದ್ದೆಲ್ಲವೂ ಚಿನ್ನವೇ ಆಗುತ್ತಿದ್ದ ಒಂದು ಕಾಲವಿತ್ತು. ಆದ್ರೆ ದರ್ಶನ್ಗೆ ಅದ್ಯಾವಾಗ ಶನಿ ಹೆಗಲೇರಿ ಕಿವಿಯೆರಡರಲ್ಲೂ ಬೆರಳಿಟ್ಟನೋ ಗೊತ್ತಿಲ್ಲ. ಒಂದಿಲ್ಲೊಂದು ವಿವಾದ, ಒಂದಿಲ್ಲೊಂದು ತಕರಾರು. ಒಂದಿಲ್ಲೊಂದು ಕೇಸು. ಈಗ ಪರಪ್ಪನ ಅಗ್ರಹಾರದಲ್ಲೂ ನೆಮ್ಮದಿಯಿಂದ ಇರಲು ಆಗದೇ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಾರೆ ದರ್ಶನ್.
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್.. ‘ಡಿ’ಗ್ಯಾಂಗ್ ದಿಕ್ಕಾಪಾಲು!
ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್ಮೆಂಟ್ ತೆಗೆದುಕೊಂಡು ಬಿಂದಾಸ್ ಆಗಿದ್ದ ನಟ ದರ್ಶನ್ಗೆ ಸರ್ಕಾರ ಹಾಗೂ ಪೊಲೀಸರು ಶಾಕ್ ಕೊಟ್ಟಿದ್ದಾರೆ. ದರ್ಶನ್ ಬಳ್ಳಾರಿ ಜೈಲುಪಾಲಾಗಿದ್ದಾರೆ. ಬರೀ ದರ್ಶನ್ ಅಷ್ಟೇ ಅಲ್ಲ. ಡಿ ಗ್ಯಾಂಗ್ನ ಇತರ ಕೆಲ ಆರೋಪಿಗಳನ್ನೂ ಬೇರೆ ಬೇರೆ ಜಿಲ್ಲೆಗಳ ಜೈಲಿಗೆ ಟ್ರಾನ್ಸ್ಫರ್ ಮಾಡಲಾಗಿದೆ. ರಾಜಾತಿಥ್ಯದ ಫೋಟೋ, ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಚೀಫ್ ಸೂರ್ಪಡೆಂಟ್ರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಮನವಿಯನ್ನು ಆಲಿಸಿದ ಕೋರ್ಟ್ ಜೈಲಿನ ಡಿಜಿಗೆ ದರ್ಶನ್ ಅಂಡ್ ಗ್ಯಾಂಗ್ನ ಇತರೆ ಜೈಲಿಗೆ ಶಿಫ್ಟ್ ಮಾಡಲು ಶಿಫಾರಸ್ಸು ಮಾಡಿ ಆದೇಶ ನೀಡಿದೆ.
ಇದನ್ನೂ ಓದಿ:ಬೆಂಗಳೂರು ಡಾನ್ ಯಾರು? ಭೂಗತ ಲೋಕದ ವಿಲ್ಸನ್ ಗಾರ್ಡನ್ ನಾಗನ ಭಯಾನಕ ಕಥೆ ಇಲ್ಲಿದೆ!
ಪರಪ್ಪನ ಅಗ್ರಹಾರದಲ್ಲೇ ಇದ್ದ 13 ಡಿ ಗ್ಯಾಂಗ್ ಸದಸ್ಯರು ಇದೀಗ ದಿಕ್ಕಾಪಾಲಾಗಲಿದ್ದಾರೆ. ಈ ಪೈಕಿ ದರ್ಶನ್ಗೆ ಬಳ್ಳಾರಿ ಜೈಲಿನ ದರ್ಶನವಾಗಲಿದೆ. ಪವನ್, ರಾಘವೇಂದ್ರ, ನಂದೀಶ್ ಮೂವರೂ ಮೈಸೂರು ಜೈಲಿನಲ್ಲಿ ಉಳಿಯಬೇಕಾಗಲಿದೆ. ಜಗದೀಶ್ ಹಾಗೂ ಲಕ್ಷ್ಮಣ್ ಇಬ್ಬರೂ ಶಿವಮೊಗ್ಗ ಜೈಲಿನಲ್ಲಿರಲಿದ್ದಾರೆ. ಧನರಾಜ್ ಧಾರವಾಡ ಜೈಲಿಗೆ ಶಿಫ್ಟ್ ಆಗ್ತಾನೆ. ವಿನಯ್ ವಿಜಯಪುರ ಜೈಲಿಗೆ ವರ್ಗ ಆಗಿದ್ದಾನೆ. ನಾಗರಾಜ್ನನ್ನ ಗುಲ್ಬರ್ಗಾ ಜೈಲಿಗೆ ಎತ್ತಿ ಬಿಸಾಡಲಾಗಿದೆ. ಪ್ರದೋಷ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಿದ್ದಾನೆ. ಇನ್ನುಳಿದಂತೆ ಪವಿತ್ರಗೌಡ, ದೀಪಕ್, ಅನುಕುಮಾರ್ ಮೂವರನ್ನೂ ಪರಪ್ಪನ ಅಗ್ರಹಾರದಲ್ಲೇ ಉಳಿಸಲಾಗಿದೆ. ಈಗಾಗಲೇ ರವಿ , ಕಾರ್ತಿಕ್, ನಿಖಿಲ್, ಕೇಶವಮೂರ್ತಿ ತುಮಕೂರು ಜೈಲಿನಲ್ಲೆ ಇದ್ದರು.
ದರ್ಶನ್ಗೆ ರಾಜಾತಿಥ್ಯದ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ!
ದರ್ಶನ್ದು ಈ ಫೋಟೋ ವೈರಲ್ ಆಗ್ತಾ ಇದ್ದಂತೆ ಪರಪ್ಪನ ಅಗ್ರಹಾರದಲ್ಲಿ ಅಕ್ಷರಶಃ ಬೆಂಕಿ ಹೊತ್ತಿಕೊಳ್ತು..ಒಬ್ಬರ ಹಿಂದೆ ಒಬ್ಬರಂತೆ 9 ಮಂದಿ ಪೊಲೀಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಯ್ತು..ಸಸ್ಪೆಂಡ್ ಅಂದ್ರೆ ಡಿಪಾರ್ಟ್ಮೆಂಟ್ ಭಾಷೆಯಲ್ಲಿ ಶಿಕ್ಷೆಯೇನಲ್ಲ ಬಿಡಿ..ಆದ್ರೂ, ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಇಬ್ಬರೂ ಪ್ರಕರಣದಿಂದ ಮುಜುಗರಕ್ಕೀಡಾಗಿರೋದು ಸತ್ಯ.
ಇನ್ನು, ಫೋಟೋ ಸ್ಫೋಟವಾದ್ಮೇಲೆ ದರ್ಶನ್ರ ವಿಚಿತ್ರ ಅಭಿಮಾನಿಗಳನ್ನ ಕೇಳ್ಬೇಕಾ? ಬಾಸ್ ಎಲ್ಲಿದ್ರೂ ಬಾಸೇ ಅಂತಾ ವಿಲಕ್ಷಣವಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ...ಈ ಫೋಟೋ ಅದೇಗೆ ತಮ್ಮ ಬಾಸ್ಗೇ ಇನ್ನೊಂದು ಗುಂಡಿ ತೋಡಿದೆ ಅನ್ನೋ ಬಗ್ಗೆ ಚೂರೂ ಅರಿವಿಲ್ಲದೇ ವರ್ತಿಸ್ತಿದ್ದಾರೆ. ಇಂಥಾ ಅಭಿಮಾನಿಗಳ ಮಧ್ಯೆ ದರ್ಶನ್ ಪಾಲಿನ ಮದರ್ ಇಂಡಿಯಾ ಸುಮಲತಾ ಕೊಟ್ಟಿರೋ ಒಂದು ಸ್ಟೇಟ್ಮೆಂಟ್ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಿದೆ.
ಇದನ್ನೂ ಓದಿ:ದರ್ಶನ್ರನ್ನ ಬಳ್ಳಾರಿಗೆ ಶಿಫ್ಟ್ ಮಾಡೋದು ಯಾವಾಗ.. ಇವತ್ತು ರಾತ್ರಿನಾ, ಬೆಳಗ್ಗೆನಾ?
ಜೈಲಲ್ಲಿ ಇದೆಲ್ಲಾ ಮೂಮೂಲಿ ಅಂತಿದ್ದಾರೆ ಸುಮಲತಾ. ಅಂದ್ರೆ, ದರ್ಶನ್ ಪಶ್ಚಾತಾಪ ಪಡೋದು ಬಿಟ್ಟು ರಾಜಾತಿಥ್ಯ ಅನುಭವಿಸಿದ್ರಲ್ಲಿ ಯಾವುದೇ ತಪ್ಪಿಲ್ಲ ಅನ್ನೋದು ಸುಮಲತಾರವರ ಮಾತಿನ ಅರ್ಥ. ಇಷ್ಟು ಹೇಳಿದ ಸುಮಲತಾ ನಾನು ಇನ್ನೂ ಹೆಚ್ಚು ಮಾತನಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಅಂತಲೂ ಹೇಳಿ ಸೈಲೆಂಟ್ ಆಗಿದ್ದಾರೆ. ಈ ಮಧ್ಯೆ ದರ್ಶನ್ ಹೆಸ್ರಿಗೆ ಌಡ್ ಆಗಿರೋ ಆ ಅಲಿಯಾಸ್ ಅನ್ನೋ ಟೈಟಲ್ ಬಗ್ಗೆ ಚರ್ಚೆ ಜೋರಾಗಿದೆ.
ದರ್ಶನ್ ಅಲಿಯಾಸ್ ಡಿಬಾಸ್ ಹೆಸರು ಬಂದಿದ್ದು ಯಾಕೆ?
ಈಗ ಅಸಲೀ ವಿಷ್ಯಕ್ಕೆ ಬರ್ತೀವಿ ಕೇಳಿ. ದರ್ಶನ್ ಅಲಿಯಾಸ್ ಡಿ ಬಾಸ್. ಈ ಒಂದು ಬದಲಾವಣೆಯೇ ದರ್ಶನ್ ಫ್ಯಾನ್ಸ್ಗೆ, ರಾಜ್ಯದ ಮಂದಿಗೆ ಕುತೂಹಲ ಸೃಷ್ಟಿಯಾಗುವಂತೆ ಮಾಡಿದೆ. 2011ರಲ್ಲಿ ಪತ್ನಿಗೆ ಹೊಡೆದು ಜೈಲಿಗೆ ಹೋಗಿದ್ದ ದರ್ಶನ್ ವಿರುದ್ಧ ದಾಖಲಾಗಿದ್ದ ಕೇಸ್ನ ಪೊಲೀಸ್ ರೆಕಾರ್ಡ್ಗಳಲ್ಲಿ ದರ್ಶನ್ ಶ್ರೀನಿವಾಸ್ ಅಂತಲೇ ಬರೆಯಲಾಗಿತ್ತು.
ಇದನ್ನೂ ಓದಿ:ದರ್ಶನ್ಗೂ ಮುಂಚೆ ಬೇಲ್ ಸಿಗುತ್ತಾ? ಕೋರ್ಟ್ ಮೊರೆ ಹೋದ ಪವಿತ್ರಾಗೆ ಪೊಲೀಸರಿಂದ 5 ಕೌಂಟರ್!
ಕೊಲೆ ಕೇಸ್ನಲ್ಲಿ ಈಗಾಗಲೇ ವಿವಿಧ ಸೆಕ್ಷನ್ಗಳನ್ನ ಎದುರಿಸ್ತಿರೋ ದರ್ಶನ್ಗೆ ಈಗ ಅದೇ ಫೋಟೋ ಮತ್ತೊಂದು ಕಂಟಕ ತಂದಿಟ್ಟಿದೆ. ಜೈಲಿನಲ್ಲಿ ಹಾಯಾಗಿ ರೌಡಿಗಳ ಜೊತೆಗೆ ಧಮ್ ಹೊಡೀತಿದ್ದ ದರ್ಶನ್ ವಿರುದ್ಧ ಮತ್ತೆ 3 ಎಫ್ಐಆರ್ಗಳು ಫಿಟ್ ಆಗಿವೆ. ಆ ಮೂರು ಎಫ್ಐಆರ್ಗಳಲ್ಲಿ ಎರಡರಲ್ಲಿ, ದರ್ಶನ್ ಅಲಿಯಾಸ್ ಡಿ ಬಾಸ್ ಅಂತಾ ಅಗ್ರಹಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ.ಇನ್ಮೇಲೆ ಪೊಲೀಸ್ ಕ್ತೈಂ ರೆಕಾರ್ಡ್ಸ್ ನಲ್ಲೂ ದರ್ಶನ್ ಅಲಿಯಾಸ್ ಡಿ-ಬಾಸ್ ಅಂತಲೇ ಎಂಟ್ರಿಯಾಗಲಿದೆ..ಅಷ್ಟಕ್ಕೂ ಅಲಿಯಾಸ್ ಅನ್ನೋ ಪಟ್ಟ ಯಾರಿಗೆ ಹೆಚ್ಚಾಗಿ ಸಿಗುತ್ತೆ ಗೊತ್ತಾ?
ಘೋರ ಅಪರಾಧಗಳನ್ನು ಮಾಡಿದ್ರೆ ‘ಅಲಿಯಾಸ್’ ಪಟ್ಟನಾ?
ಈ ಹಿಂದೆ ದರ್ಶನ್ ಮಾಡಿದ್ದ ತಪ್ಪುಗಳಲ್ಲೆಲ್ಲಾ ಅಷ್ಟೊಂದು ಘೋರತನ ಅನ್ನೋದು ಇರಲಿಲ್ಲ..ಕೋರ್ಟು, ಪೊಲೀಸರು ಯಾರೂ ಕೂಡ ಆ ಕೇಸ್ಗಳನ್ನ ಘೋರ ಅಂತಾ ಪರಿಗಣನೆ ಮಾಡಿರಲಿಲ್ಲ....ಹಾಗಾಗಿ, ಎಲ್ಲಾ ಪೊಲೀಸ್ ರೆಕಾರ್ಡ್ಗಳಲ್ಲೂ ಬರೀ ದರ್ಶನ್ ಅಂತಲೇ ನಟನ ಹೆಸರನ್ನ ನಮೂದಿಸಲಾಗ್ತಿತ್ತು...ಬಟ್, ರೇಣುಕಾಸ್ವಾಮಿಯ ಕೊಲೆ ಕೇಸ್ ಇದ್ಯಲ್ಲ.. ಇದು ನಿಜಕ್ಕೂ ಹೀನಸ್ ಕ್ರೈಂ..ಅಂದ್ರೆ ಘನಘೋರ ಅಪರಾಧ.
ಅತ್ಯಾಚಾರ ಮಾಡೋದು, ದೈಹಿಕ ಹಾಗೂ ಮಾನಸಿಕವಾಗಿ ಸಾಕಷ್ಟು ಕ್ರೂರವಾಗಿ ದಾಳಿ ಮಾಡೋದನ್ನ ಘೋರ ಅಂತಲೇ ಪರಿಗಣನೆ ಮಾಡಲಾಗುತ್ತೆ..ತಾವ್ ಮಾಡೋ ಅಪರಾಧಗಳಲ್ಲಿ ಸಿಲುಕಿ ಒಂದು ವೇಳೆ 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಬಿದ್ದರೂ ಅದನ್ನ ಹೀನಸ್ ಕ್ರೈಂನ ಲಿಸ್ಟ್ಗೆ ಸೇರಿಸಲಾಗುತ್ತೆ.. ಇಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ಕೂಡ ಅಂತಹದ್ದೇ ಘನಘೋರ ಪ್ರಕರಣ ಅನ್ನೋ ಪರಿಗಣನೆಗೆ ಬರಲಾಗಿದೆ..ಹಾಗಾಗಿ ದರ್ಶನ್ ಹೆಸರಿನ ಮುಂದೆ ಅಲಿಯಾಸ್ ಅನ್ನೋ ಹೆಸರು ಬಂದಿರಬಹುದು.
ಈ ಹಿಂದೆ ಮೆರೀತಿದ್ದ ಡಿ-ಬಾಸ್ ದರ್ಶನ್, ಇವತ್ತು ದರ್ಶನ್ ಅಲಿಯಾಸ್ ಡಿ ಬಾಸ್ ಆಗಿದ್ದಾರೆ. ಒಟ್ನಲ್ಲಿ ವ್ಯಕ್ತಿಯನ್ನ ಗುರುತಿಸೋಕೆ, ಸುಲಭವಾಗಿ ಕೈದಿ ಅಂತಲೂ ಪರಿಗಣಿಸೋಕೆ, ಅಲಿಯಾಸ್ ಅಂತ ಸೇರಿಸ್ತಾರಂತೆ. ಇಲ್ಲಿ ಇನ್ನೂ ಒಂದು ಪ್ರಶ್ನೆ ನಿಮ್ಮನ್ನ ಕಾಡ್ತಾ ಇರಬಹುದು. ದರ್ಶನ್ ಕೂಡ ಎಲ್ಲಾ ರೌಡಿಗಳಂತೆ ಸ್ಲೇಟ್ ಹಿಡೀಬೇಕಾ? ಅಂತಾ ಸಭ್ಯತೆಗಳನ್ನ ಅನುಸರಿಸಿಕೊಂಡು, ಧ್ಯಾನ, ಅಥವಾ ಇನ್ಯಾವುದೋ ಶಿಸ್ತು ಕ್ರಮಗಳನ್ನ ಪಾಲಿಸ್ತಾ, ಜಾಮೀನಿಗಾಗಿ ಟ್ರೈ ಮಾಡ್ತಿದ್ದ ದರ್ಶನ್ಗೆ, ಈಗ ಮತ್ತೊಂದು ಶಾಕ್ ಸಿಕ್ಕಿದೆ. ಪರಪ್ಪನ ಅಗ್ರಹಾರದಿಂದ ದರ್ಶನ್ರನ್ನ ಬಳ್ಳಾರಿಗೆ ಜೈಲಿಗೆ ಎತ್ತಿ ಒಗೆಯಲಾಗುತ್ತೆ. ಕೊಲೆ ಕೇಸ್ ಜೊತೆ ಜೊತೆಗೆ ಮತ್ತೆ ಮೂರು ಕೇಸ್ಗಳನ್ನ ತಲೆ ಮೇಲೆ ಹೊತ್ತು ಹೋಗ್ತಿದ್ದಾರೆ ಅಭಿಮಾನಿಗಳ ಚಾಲೆಂಜಿಂಗ್ ಸ್ಟಾರ್ ದರ್ಶನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ