/newsfirstlive-kannada/media/post_attachments/wp-content/uploads/2023/06/SIDDARAMIAH.jpg)
ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಮಾಡಿದ್ದಾರೆ. ಸರ್ಕಾರ ರಚನೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಿದ್ದ ಸಿದ್ದರಾಮಯ್ಯ ಇಂದು, ಸಚಿವರುಗಳಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಚ್ಚರಿಯ ವಿಚಾರ ಅಂದರೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದಾರೆ. ಅದೇ ರೀತಿ ದಿನೇಶ್ ಗುಂಡೂರಾವ್ಗೆ ದಕ್ಷಿಣ ಕನ್ನಡ, ಜಮೀರ್ ಅಹ್ಮದ್ ಖಾನ್ಗೆ ವಿಜಯನಗರ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಇನ್ನು ಸಿದ್ದರಾಮಯ್ಯ ಸಂಪುಟದ 33 ಸಚಿವರ ಪೈಕಿಯಲ್ಲಿ ಇಬ್ಬರು ಸಚಿವರಿಗೆ ಯಾವುದೇ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಿಲ್ಲ. ಸಚಿವರಾದ ಕೃಷ್ಣಬೈರೇಗೌಡ ಹಾಗೂ ರಹೀಂ ಖಾನ್ಗೆ ಯಾವುದೇ ಜಿಲ್ಲೆಯ ಜವಾಬ್ದಾರಿಯನ್ನು ನೀಡಿಲ್ಲ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ..?
- ಬೆಂಗಳೂರು ನಗರ -ಡಿ.ಕೆ.ಶಿವಕುಮಾರ್
- ರಾಮನಗರ- ರಾಮಲಿಂಗಾರೆಡ್ಡಿ
- ಹಾಸನ- ಕೆ.ಎನ್ ರಾಜಣ್ಣ
- ಕೊಡಗು- ಬೋಸುರಾಜ್
- ವಿಜಯನಗರ- ಜಮೀರ್ ಅಹ್ಮದ್ ಖಾನ್
- ತುಮಕೂರು-ಡಾ.ಜಿ.ಪರಮೇಶ್ವರ್
- ಗದಗ- ಹೆಚ್ಕೆ ಪಾಟೀಲ್
- ಬೆಂಗಳೂರು ಗ್ರಾಮಾಂತರ- ಕೆ.ಹೆಚ್.ಮುನಿಯಪ್ಪ
- ಚಿಕ್ಕಮಗಳೂರು -ಕೆ.ಜೆ.ಜಾರ್ಜ್
- ವಿಜಯಪುರ-ಎಂ.ಬಿ.ಪಾಟೀಲ್
- ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
- ಮೈಸೂರು-ಡಾ.ಹೆಚ್ಸಿ ಮಹದೇವಪ್ಪ
- ಬೆಳಗಾವಿ-ಸತೀಶ್ ಜಾರಕಿಹೊಳಿ
- ಕಲಬುರಗಿ-ಪ್ರಿಯಾಂಕ್ ಖರ್ಗೆ
- ಹಾವೇರಿ-ಶಿವಾನಂದ್ ಪಾಟೀಲ್
- ಯಾದಗಿರಿ-ಶರಣ ಬಸಪ್ಪ ದರ್ಶನಾಪೂರ್
- ಬೀದರ್-ಈಶ್ವರ್ ಖಂಡ್ರೆ
- ಮಂಡ್ಯ-ಎನ್.ಚಲುವರಾಯಸ್ವಾಮಿ
- ದಾವಣಗೆರೆ -ಎಸ್ಎಸ್ ಮಲ್ಲಿಕಾರ್ಜುನ್
- ಧಾರವಾಡ-ಸಂತೋಷ್ ಲಾಡ್
- ರಾಯಚೂರು-ಶರಣ್ ಪ್ರಕಾಶ್ ಪಾಟೀಲ್
- ಬಾಗಲಕೋಟೆ-ಆರ್ಬಿ ತಿಮ್ಮಾಪೂರ್
- ಚಾಮರಾಜನಗರ-ಕೆ.ವೆಂಕಟೇಶ್
- ಕೊಪ್ಪಳ-ಶಿವರಾಜ್ ತಂಗಡಗಿ
- ಚಿತ್ರದುರ್ಗ-ಡಿ.ಸುಧಾಕರ್
- ಬಳ್ಳಾರಿ-ಬಿ.ನಾಗೇಂದ್ರ
- ಹಾಸನ-ಕೆ.ಎನ್.ರಾಜಣ್ಣ
- ಕೋಲಾರ-ಬಿ.ಎಸ್.ಸುರೇಶ್
- ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
- ಉತ್ತರ ಕನ್ನಡ-ಮಂಕಾಳು ವೈದ್ಯ
- ಶಿವಮೊಗ್ಗ-ಮಧು ಬಂಗಾರಪ್ಪ
- ಚಿಕ್ಕಬಳ್ಳಾಪುರ-ಡಾ.ಎಂಸಿ ಸುಧಾಕರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಎಂ ಸಿದ್ದರಾಮಯ್ಯ ಸಂಪುಟದ ಸದಸ್ಯರಿಗೆ ತಕ್ಷಣದಿಂದ ಜಾರಿಗೆ ಬರುವಂತೆ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. #Newsfirstlive#Siddaramaiah#Districtinchargeminister@DKShivakumar@INCKarnataka@laxmi_hebbalkar@BJP4Karnataka@siddaramaiahpic.twitter.com/OccORqV4Td
— NewsFirst Kannada (@NewsFirstKan) June 9, 2023