/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಬರ್ತಿದೆ ವರಮಹಾಲಕ್ಷ್ಮಿ ಹಬ್ಬ.. ಹೆಣ್ಣನ್ನು ಮನೆಯ ಲಕ್ಷ್ಮಿ ಅನ್ನೋದೇಕೆ..? ಈ ವಿಚಾರ ನಿಮಗೆ ತಿಳಿದಿರಲಿ..!
---------
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಶುಕ್ಲಪಕ್ಷ, ಚತುರ್ದಶಿ ತಿಥಿ, ಉತ್ತರಾಷಾಡ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ
ಮೇಷ
- ಇಂದು ಖಾಸಗಿ ಉದ್ಯೋಗಿಗಳಿಗೆ ಬದಲಾವಣೆಯ ಭಯ
- ಹಣದಿಂದ ಜನರು ನಿಮ್ಮನ್ನು ಗೌರವಿಸುವ ಸಾಧ್ಯತೆ
- ಇಂದು ನಿಮ್ಮ ಮಾತು, ಕೋಪದಿಂದ ಕೆಲಸವಾಗಬಹುದು
- ನಿಮ್ಮ ಆಲೋಚನೆಗಳು ಕುಟುಂಬದ ಮಧ್ಯದಲ್ಲಿರಲಿ
- ಸ್ಪರ್ಧಾತ್ಮಕ ವಿಚಾರಗಳಿಗೆ ಶುಭದಿನ
- ತುಂಬಾ ಬುದ್ಧಿವಂತರಾದ ನೀವು ಮೋಸ ಹೋಗುವ ಸಾಧ್ಯತೆ
- ಶ್ರೀರಾಮನನ್ನು ಪ್ರಾರ್ಥನೆ ಮಾಡಿ
ವೃಷಭ
- ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇದ್ದರೂ ದ್ರೋಹ ಅಥವಾ ಮೋಸ ಸಾಧ್ಯತೆ
- ಯಾವುದೇ ವಿಚಾರಗಳನ್ನು ಲಘುವಾಗಿ ಪರಿಗಣಿಸಬೇಡಿ
- ಸಹೋದರರಲ್ಲಿ ವಿವಾದ, ಕಲಹ ಬೇಡ
- ಅನಿವಾರ್ಯವಾಗಿ ಪ್ರಯಾಣ ಸಾಧ್ಯತೆ ಆದರೆ ಶುಭಕರವಲ್ಲ
- ವ್ಯವಹಾರದಲ್ಲಿ ನಿಮ್ಮ ಜಾಗ್ರತೆ ಬೇರೆಯವರಿಗೆ ಮಾದರಿ
- ಆರೋಗ್ಯ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
- ಬಿಳಿ ಎಕ್ಕದ ಗಿಡಕ್ಕೆ 12 ಪ್ರದಕ್ಷಿಣೆ ಹಾಕಿ
ಮಿಥುನ
- ಹಳೆಯ ವಿಚಾರ ಪ್ರಸ್ತಾಪವಾಗಿ ಬೇಸರ ಸಾಧ್ಯತೆ
- ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ
- ಪ್ರೇಮಿಗಳಿಗೆ ತೊಂದರೆಯಾಗುವ ಸಾಧ್ಯತೆ
- ಪ್ರಯಾಣವು ಕೂಡ ಸುಖಕರವಾಗಿರಬಹುದು
- ಸ್ನೇಹ, ಮಿತ್ರತ್ವಕ್ಕೆ ಬೆಲೆ ಸಿಗುವುದರಿಂದ ನೆಮ್ಮದಿ ಸಿಗಲಿದೆ
- ಹೊಸ ಉದ್ಯೋಗ ಅಥವಾ ವೃತ್ತಿ ಆರಂಭಿಸಲು ಶುಭದಿನ
- ಅನ್ನಪೂರ್ಣೇಶ್ವರಿಯನ್ನು ಆರಾಧನೆ ಮಾಡಿ
ಕಟಕ
- ಚಿಕ್ಕ ಸಮಸ್ಯೆಗಳು ಮನಸ್ಸಿನಲ್ಲಿ ಭಯ ಹುಟ್ಟಿಸಬಹುದು
- ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ವ್ಯಾವಹಾರಿಕವಾದ ಅಡೆತಡೆಗಳು ನಿಮ್ಮ ಮುಂದೆ ಬರಬಹುದು
- ಯಾವುದೋ ತೊಂದರೆಯ ಬಗ್ಗೆ ಮನಸ್ಸಿನಲ್ಲಿ ಭಯ ಕಾಡಬಹುದು
- ವಿನಾಕಾರಣ ಕುಟುಂಬದಲ್ಲಿ ಕಲಹ ಸಾಧ್ಯತೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ:ರಾಖಿ ಕಟ್ಟೋ ಮುನ್ನ ಸಹೋದರಿಯರು ಓದಲೇಬೇಕಾದ ಪ್ರಮುಖ ವಿಚಾರ ಇಲ್ಲಿದೆ..!
ಸಿಂಹ
- ಈ ದಿನ ಹೂ ಬೆಳೆಗಾರರಿಗೆ ನಷ್ಟ ಸಾಧ್ಯತೆ
- ಸಾಯಂಕಾಲ ಶುಭ ಸುದ್ದಿ, ಮನಸ್ಸಿಗೆ ನೆಮ್ಮದಿ ಸಾಧ್ಯತೆ
- ಕೆಲವು ಅನುಮಾನಾಸ್ಪದ ವಾತಾವರಣ ನಿರ್ಮಾಣವಾಗಬಹುದು
- ಕೌಟುಂಬಿಕ ಸಂಬಂಧದಲ್ಲಿ ವಿಶ್ವಾಸವಿರಲಿ
- ಮನೆಯ ಸದಸ್ಯರಿಗೆ ಅಧ್ಯಾತ್ಮದ ವಿಚಾರಗಳ ಬಗ್ಗೆ ತಿಳುವಳಿಕೆ ಹೇಳಿ
- ಪ್ರಾಯೋಗಿಕವಾದ ಕೆಲಸಕ್ಕೆ ಆದ್ಯತೆ ನೀಡಿ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ನಿಮ್ಮ ದೌರ್ಬಲ್ಯ ನಿಮ್ಮ ನಿಯಂತ್ರಣದಲ್ಲಿರಲಿ
- ವೃತ್ತಿ ಮತ್ತು ಕೆಲಸದ ಬಗ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಬಹುದು
- ವಿನಾಕಾರಣ ಬೇರೆಯವರೊಂದಿಗೆ ನಿಷ್ಠೂರ ಬೇಡ
- ನಿರೀಕ್ಷಿಸಿದ ವಿಚಾರಗಳಿಗೆ ಸಂಪೂರ್ಣವಾದ ಸಹಾಯ, ಭರವಸೆ ಸಿಗಬಹುದು
- ದೊಡ್ಡವರ ಸಂಪರ್ಕ ಮತ್ತು ಅವರ ಮಾತು ಸಮಧಾನ ಕೊಡುವ ಸಾಧ್ಯತೆ
- ನಿಮ್ಮ ಜವಾಬ್ದಾರಿಯುತ ಕೆಲಸಕ್ಕೆ ಮುಂಗಡ ಹಣ ಸಿಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ:ಹೆಬ್ಬಾಳ ಪ್ಲೈ ಓವರ್ನ ಲೂಪ್ ರಾಂಪ್ ನಿರ್ಮಾಣ ಪೂರ್ಣ, ಈ ತಿಂಗಳಲ್ಲೇ ವಾಹನ ಸಂಚಾರಕ್ಕೆ ಮುಕ್ತ
ತುಲಾ
- ಇಂದು ದಾಂಪತ್ಯ ವಿಚಾರದಲ್ಲಿ ವಿರಸ ಸಾಧ್ಯತೆ
- ಬಡ್ಡಿ ವ್ಯವಹಾರ ಮಾಡುವವರಿಗೆ ಇಂದು ಹಿನ್ನಡೆ ಸಾಧ್ಯತೆ
- ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲ್ಪಡುವ ದಿನ
- ಮನೆಯ ಅಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ಹಣ ಖರ್ಚಾಗುವ ಸಾಧ್ಯತೆ
- ವೃತ್ತಿಪರರಿಗೆ ಹೆಚ್ಚು ಅನುಕೂಲ ಇರುವ ದಿನ
- ಆರ್ಥಿಕ ಸಂಕಷ್ಟ ಕಾಡುವ ಸಾಧ್ಯತೆ
- ಐಕ್ಯಮತ್ಯ ಮಂತ್ರ ಜಪಿಸಿ
ಇದನ್ನೂ ಓದಿ: ವಿಧಿ ಎಂಥ ಕ್ರೂರ ನೋಡಿ.. ಕಣ್ಮುಚ್ಚಿದ ಅಮ್ಮ, ಒಂದು ದಿನದ ಕಂದಮ್ಮ ಈಗ ತಬ್ಬಲಿ
ವೃಶ್ಚಿಕ
- ಸ್ವಲ್ಪ ಸಂತೋಷ, ಸ್ವಲ್ಪ ಬೇಸರ ಇರುವ ದಿನ
- ದೂರ ಪ್ರಯಾಣದ ವಿಚಾರವಾಗಿ ಮಾತುಕತೆ ನಡೆಯಬಹುದು
- ಇಂದು ನಿಮ್ಮ ಆಹಾರದ ಬಗ್ಗೆ ಜಾಗ್ರತೆವಹಿಸಿ
- ನಿಮ್ಮ ಅಭಿಪ್ರಾಯಗಳಿಗೆ ಮನ್ನಣೆ ಸಿಗುವ ದಿನ
- ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಾನುಕೂಲ ಸಾಧ್ಯತೆ
- ಅಧಿಕ ಖರ್ಚಿರುತ್ತೆ ಆದರೆ ಖರ್ಚನ್ನು ನಿಭಾಯಿಸುವ ಶಕ್ತಿ ಕೂಡ ಇರುತ್ತದೆ
- ಸರಸ್ವತಿ ಆರಾಧನೆ ಮಾಡಿ
ಧನುಸ್
- ಜವಾಬ್ದಾರಿಗಳನ್ನು ಪೂರೈಸುವುದರಿಂದ ಮನಸ್ಸಿಗೆ ಸಮಾಧಾನ ಸಾಧ್ಯತೆ
- ನೌಕರಿ ಅಥವಾ ವೃತ್ತಿಯಲ್ಲಿ ಗೌರವ ಹೆಚ್ಚಾಗಬಹುದು
- ಮಾತಿನಿಂದ ಜನಾಕರ್ಷಣೆ ಸಾಧ್ಯತೆ
- ನವ ವಿವಾಹಿತರಿಗೆ ಶುಭ ದಿನ
- ವಿದೇಶದಿಂದ ಬರುವ ಶುಭ ವಿಚಾರವೊಂದು ಮನಸ್ಸಿಗೆ ಸಂತೋಷ ನೀಡುತ್ತದೆ
- ವ್ಯಾಪಾರದಲ್ಲಿ ಸವಾಲುಗಳು ಎದುರಾಗಬಹುದು
- ನಿಮ್ಮ ಅನುಭವ ನಿಮಗೆ ಜಯ ತಂದು ಕೊಡುತ್ತದೆ
- ಹಿರಿಯರ ಆರ್ಶೀವಾದ ಪಡೆಯಿರಿ
ಮಕರ
- ಕುಟುಂಬದವರೊಂದಿಗೆ ಸಾಯಂಕಾಲ ಉತ್ತಮ ವಾತಾವರಣ ಇರುತ್ತದೆ
- ಮಂಗಳಕಾರ್ಯ ಅಥವಾ ಶುಭ ಕಾರ್ಯದ ಬಗ್ಗೆ ಚಿಂತನೆ ಸಾಧ್ಯತೆ
- ನಿಮ್ಮ ಪರಿಶ್ರಮದಿಂದ ಹಲವರಿಗೆ ಲಾಭ ಸಾಧ್ಯತೆ
- ದಿನದ ಆರಂಭದಲ್ಲಿ ಕೆಲಸದಲ್ಲಿ ಉದಾಸೀನತೆ, ತಾತ್ಸಾರ, ಆಲಸ್ಯ ಕಾಣಬಹುದು
- ಸಹೋದ್ಯೋಗಿಗಳಿಗೆ ನಿಮ್ಮಿಂದ ಸಹಾಯ ಸಾಧ್ಯತೆ
- ಅಣ್ಣತಮ್ಮಂದಿರಲ್ಲಿ ಜಗಳ ಆಗುವ ಸಾಧ್ಯತೆ
- ದುರ್ಗಾರಾಧನೆ ಮಾಡಿ
ಕುಂಭ
- ಇಂದು ನೀವು ಮನೆಯಿಂದ ಹೊರಗಿದ್ದಾಗ ಖುಷಿಯಾಗಿರುತ್ತೀರಿ
ಮನೋರಂಜನೆಯ ದಿನವಾದರೂ ಸಂತೋಷ ಕಡಿಮೆ - ಸ್ನೇಹಿತರ ಜೊತೆ ವಿವಾದಗಳು ಉಂಟಾಗಬಹುದು
- ಈ ದಿನದ ಪ್ರಯಾಣವು ನಿಮಗೆ ಇಷ್ಟವಾಗಲಿದೆ
- ದಾಂಪತ್ಯದಲ್ಲಿ ಹೊಂದಾಣಿಕೆ ಇದ್ದರೆ ಒಳ್ಳೆಯದು
- ಅನೇಕ ಯೋಚನೆಗಳು ಒಟ್ಟಿಗೆ ಬರುವುದರಿಂದ ಕೆಲಸ ಹಾಳಾಗಬಹುದು
- ಕುಲದೇವತಾ ಪ್ರಾರ್ಥನೆ ಮಾಡಿ
ಮೀನ
- ಮೂಳೆಗೆ ಸಂಬಂಧಿಸಿದ ತೊಂದರೆ ಕಾಣಬಹುದು ತಾತ್ಸಾರ ಮಾಡಬೇಡಿ
- ಜನರ ಪರ ಕೆಲಸ ಮಾಡುವುದರಿಂದ ಹೊಗಳಿಕೆ ಸಾಧ್ಯತೆ
- ಮಕ್ಕಳ ವಿಚಾರದಲ್ಲಿ ಸಮಸ್ಯೆ, ತೊಂದರೆಯಾಗಬಹುದು ಎಚ್ಚರಿಕೆ ಇರಲಿ
- ಹಿರಿಯರ ಅಭಿಪ್ರಾಯ, ಮಾರ್ಗದರ್ಶನವನ್ನ ನಿರ್ಲಕ್ಷ್ಯ ಮಾಡಬೇಡಿ
- ಇಂದು ಯಾವುದೇ ಹೊಸ ಕೆಲಸ ಆರಂಭಿಸುವುದು ಬೇಡ
- ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಆಗಬಹುದು
- ಕುಟುಂಬದಲ್ಲಿ ಸಂತೋಷ ಇರುತ್ತದೆ ಅದನ್ನ ಹಾಗೆ ಕಾಪಾಡಿಕೊಳ್ಳಿ
- ಧನ್ವಂತರಿಯನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ