/newsfirstlive-kannada/media/media_files/2025/09/03/ms-dhoni-1-2025-09-03-17-31-12.jpg)
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. 2026ರ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಇಟ್ಟುಕೊಂಡೇ ತೆರೆ ಹಿಂದೆ ಕಾರ್ಯ ನಿರ್ವಹಿಸ್ತಿರುವ ಬಿಸಿಸಿಐ ಬಿಗ್ಬಾಸ್ಗಳು, ಮತ್ತೊಮ್ಮೆ ಧೋನಿಯನ್ನ ಮೆಂಟರ್ ಆಗಿ ಕರೆತರಲು ಚಿಂತಿಸಿದ್ದಾರೆ. ಮತ್ತೊಂದ್ಕಡೆ ಧೋನಿಯ ಆಪ್ತರು ಹೊಸ ಇನ್ನಿಂಗ್ಸ್ ಶುರು ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.
ಪ್ರತಿಷ್ಠೆಯ ವಿಶ್ವಕಪ್ ಗೆಲ್ಲಲು ಪ್ಲಾನ್
ಏಷ್ಯಾಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ದುಬೈ ಹಾರಲು ಸಜ್ಜಾಗಿದೆ. ಬಿಸಿಸಿಐ ಮಾತ್ರ 2026ರಲ್ಲಿ ನಡೆಯೋ ಟಿ20 ವಿಶ್ವಕಪ್ ಸಿದ್ಧತೆಯಲ್ಲಿ ಬ್ಯುಸಿಯಾಗಿದೆ. ಟಿ20 ಚಾಂಪಿಯನ್ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದು ಪ್ರತಿಷ್ಠೆಯಾಗಿದೆ. ಇದೇ ಕಾರಣಕ್ಕೆ ಮಾಸ್ಟರ್ ಪ್ಲಾನ್ ರೂಪಿಸ್ತಿರುವ ಬಿಸಿಸಿಐ ಬಾಸ್ಗಳು, ಮಿಸ್ಟರ್ ಕೂಲ್ ಮಾಹಿಗೆ ತಂಡಕ್ಕೆ ಕರೆತರಲು ಮುಂದಾಗಿದ್ದಾರೆ. ಆಟಗಾರನಾಗಿ ಅಲ್ಲ ಮೆಂಟರ್ ಆಗಿ.
ಇದನ್ನೂ ಓದಿ:ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್ಫ್ರೆಂಡ್ ಎಂಟ್ರಿ.. ಯಾರು ಈ ಸುಂದರಿ?
2024ರ ಟಿ20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾ 17 ವರ್ಷಗಳ ಬಳಿಕ 2ನೇ ಬಾರಿಗೆ ಟಿ20 ಚಾಂಪಿಯನ್ ಆಗಿ ಮೆರೆದಾಡಿತ್ತು. ಈ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವುದು ಬಿಗ್ಬಾಸ್ಗಳಿಗೆ ಪ್ರತಿಷ್ಠೆಯ ಕಣವಾಗಿದೆ. ತವರಿನಲ್ಲೇ ಟಿ20 ವಿಶ್ವಕಪ್ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಶತಯಾ-ಗತಾಯ ಗೆಲ್ಲೋಕೆ ಪಣ ತೊಟ್ಟಿದೆ. ಈ ನಿಟ್ಟಿನಲ್ಲೇ ಬಿಸಿಸಿಐ, ಮಿಸ್ಟರ್ ಕೂಲ್ ಮಾಹಿಗೆ ಆಫರ್ ನೀಡಿದ್ದಾರೆ. ಟಿ20 ವಿಶ್ವಕಪ್ ವೇಳೆ ತಂಡದ ಮೆಂಟರ್ ಆಗುವಂತೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಟಿ20 ತಂಡಕ್ಕೆ ಬೇಕಿದೆ ಮಾರ್ಗದರ್ಶನ
2024ರ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಒಂದಾದ್ರೆ, ಮತ್ತೊಂದ್ಕಡೆ 2016ರ ನಂತರ ಟಿ20 ವಿಶ್ವಕಪ್ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೀತಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಎಕ್ಸೈಟ್ಮೆಂಟ್ ಹೆಚ್ಚಿಸಿದೆ. ಹೀಗಾಗಿ 2007ರಲ್ಲಿ ಧೋನಿ ನೇತೃತ್ವದ ಟೀಮ್ ಇಂಡಿಯಾ ಜಯಿಸಿದಂತೆ, ಇಂದು ಸೂರ್ಯ ನಾಯಕತ್ವದ ಪಡೆ ಗೆದ್ದು ಬೀಗುತ್ತೆ ಎಂಬ ನಿರೀಕ್ಷೆ ಫ್ಯಾನ್ಸ್ದ್ದಾಗಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಪರಿಹಾರವಾಗಿಯೇ ಬಿಗ್ಬಾಸ್ಗಳು ಮೆಂಟರ್ ಆಗಿ ಧೋನಿ ನೇಮಿಸಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್ಗೆ ಹೇಳಿದ್ದೇನು?
ಟಿ20 ವಿಶ್ವಕಪ್ ಭಾರತದಲ್ಲೇ ನಡೀತಾ ಇರೋದು ತಂಡಕ್ಕೆ ಅಡ್ವಾಂಟೇಜ್. ಸೂರ್ಯ ನಾಯಕತ್ವದ ಟೀಮ್ ಇಂಡಿಯಾ, ಯುವಕರ ಪಡೆಯಿಂದಲೇ ತುಂಬಿದೆ. ಬಹುತೇಕ ಆಟಗಾರರು ಐಸಿಸಿ ಟೂರ್ನಿಗಳಲ್ಲಿ ಆಡಿಲ್ಲ. ಹೀಗಾಗಿ ಹಾರ್ಡ್ ವರ್ಕ್, ಎಫರ್ಟ್ ಜೊತೆಗೆ ಸ್ಮಾರ್ಟ್ ಗೇಮ್ ಸೇರಿದ್ರೆ, ಟ್ರೋಫಿ ಗೆಲುವು ಸುಲಭ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಧೋನಿಯನ್ನು ವಿರೋಧಿಸುವ ಹೆಡ್ ಕೋಚ್ ಗಂಭೀರ್, ಗ್ರೀನ್ ಸಿಗ್ನಿಲ್ ನೀಡುವುದು ಕಷ್ಟ ಸಾಧ್ಯ.
ಧೋನಿ ಬಂಟ ಸುರೇಶ್ ರೈನಾ ಚಿತ್ತ
ಒಂದ್ಕಡೆ ಧೋನಿ ಮೆಂಟರ್ ಆಗ್ತಾರೆ ಎಂಬ ಸುದ್ದಿ ಹರಿದಾಡ್ತಿದ್ರೆ ಮತ್ತೊಂದ್ಕಡೆ ಧೋನಿ ಆಪ್ತರಾಗಿರುವ ಸುರೇಶ್ ರೈನಾ, ಅಶ್ವಿನ್, ಹೊಸ ಇನ್ನಿಂಗ್ಸ್ ಆರಂಭಿಸುವತ್ತ ದೃಷ್ಟಿ ನೆಟ್ಟಿದ್ದಾರೆ. ಪ್ರಮುಖವಾಗಿ ಸುರೇಶ್ ರೈನಾ, ಸೀಸನ್-19 ಐಪಿಎಲ್ನಲ್ಲಿ ಕೋಚಿಂಗ್ ಹುದ್ದೆ ವಹಿಸಿಕೊಳ್ತಾರೆ ಎನ್ನಲಾಗ್ತಿದೆ. ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಆಗ್ತಾರೆ ಎಂಬ ಗುಸುಗುಸು ಐಪಿಎಲ್ ವಲಯದಲ್ಲಿ ಓಡಾಡ್ತಿದೆ.
ಪ್ಲೇಯರ್ ಕಮ್ ಕೋಚ್ ಆಗಲು ಆರ್.ಅಶ್ವಿನ್ ರೆಡಿ!
ಕೆಲ ದಿನಗಳ ಹಿಂದಷ್ಟೇ ಐಪಿಎಲ್ಗೆ ಗುಡ್ ಬೈ ಹೇಳಿರುವ ಅಶ್ವಿನ್, ಕೋಚಿಂಗ್ ಕಡೆಗೆ ಒಲವು ಹೊಂದಿದ್ದಾರೆ. ಹೀಗಾಗಿ ವಿದೇಶಿ ಲೀಗ್ಗಳಲ್ಲಿ ಪ್ಲಯರ್ ಕಮ್ ಕೋಚ್ ಆಗಲು ಉತ್ಸುಕ ತೋರಿದ್ದಾರೆ. ದಿ ಹಂಡ್ರೆಡ್ ಲೀಗ್, ಮೇಜರ್ ಕ್ರಿಕೆಟ್ ಲೀಗ್, ಸೌತ್ ಆಫ್ರಿಕಾ ಟಿ20ಯಂಥ ವಿದೇಶಿ ಲೀಗ್ಗಳಲ್ಲಿ ಹೊಸ ರೋಲ್ ಪ್ಲೇ ಮಾಡೋ ಚಾನ್ಸ್ ದಟ್ಟವಾಗಿದೆ. ಈಗಾಗಲೇ ದಿನೇಶ್ ಕಾರ್ತಿಕ್, ಕಿರನ್ ಪೊಲಾರ್ಡ್, ಐಪಿಎಲ್ನಲ್ಲಿ ಕೋಚ್ಗಳಾಗಿ ಕಾರ್ಯ ನಿರ್ವಹಿಸಿ, ವಿದೇಶಿ ಆಟಗಾರನಾಗಿ ಆಡ್ತಿದ್ದಾರೆ. ಇದೇ ರೀತಿ ಅಶ್ವಿನ್, ಮಾಡಿದ್ರೂ ಅಚ್ಚರಿ ಇಲ್ಲ.
ಇದನ್ನೂ ಓದಿ:IPLಗೆ ಗುಡ್ ಬೈ ಹೇಳಿದ ಬೆನ್ನಲ್ಲೇ ಪ್ರತಿಷ್ಠಿತ ಬಿಬಿಎಲ್ನಲ್ಲಿ ಕಾಣಿಸಿಕೊಳ್ತಾರಾ ಲೆಜೆಂಡರಿ ಪ್ಲೇಯರ್?
ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸ್ತಾರಾ ಪೂಜಾರ?
ಸುರೇಶ್ ರೈನಾ, ಆರ್.ಅಶ್ವಿನ್ ಮಾತ್ರವೇ ಅಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಸಹ ಹೊಸ ಇನ್ನಿಂಗ್ಸ್ ಆರಂಭಿಸುವುದು ಫಿಕ್ಸ್. ಈಗಷ್ಟೇ ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ಪೂಜಾರ, ಸದ್ಯ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಟಿಕ್ನಿಕಲಿ ನಾಲೆಡ್ಜ್ ಹೊಂದಿರುವ ಪೂಜಾರ, ಐಪಿಎಲ್ಗಿಂತ ದೇಶಿ ಕ್ರಿಕೆಟ್ನಲ್ಲಿ ಅಗ್ನಿಪರೀಕ್ಷೆಗೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಶೀಘ್ರದಲ್ಲೇ ದೇಶಿ ಟೂರ್ನಿಗಳು ಆರಂಭವಾಗಲಿದ್ದು, ಯಾವ ರಾಜ್ಯದ ಪರ ಕೋಚ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸ್ತಾರೆ ಅನ್ನೋದು ಕಾದುನೋಡಬೇಕಿದೆ.
ಇದನ್ನೂ ಓದಿ:ಒಬ್ಬನಿಗಾಗಿ ಮೂವರ ಬಲಿ ಪಡೆದ ಫ್ರಾಂಚೈಸಿ.. ದ್ರಾವಿಡ್ ತಲೆದಂಡಕ್ಕೆ ಕಾರಣ ರಿವೀಲ್..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ