ಒಬ್ಬನಿಗಾಗಿ ಮೂವರ ಬಲಿ ಪಡೆದ ಫ್ರಾಂಚೈಸಿ.. ದ್ರಾವಿಡ್ ತಲೆದಂಡಕ್ಕೆ ಕಾರಣ ರಿವೀಲ್..!

ಮುಂಬರುವ IPL​ ಟೂರ್ನಿಗೂ ಮುನ್ನ RR​ ತಂಡದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್​, ರಾಹುಲ್​ ದ್ರಾವಿಡ್​. ಕ್ಯಾಪ್ಟನ್​​-ಕೋಚ್​ ಇಬ್ಬರೂ ತಂಡದಿಂದ ಹೊರ ಬರುವ ನಿರ್ಧರಿಸಿ ಕೊಟ್ಟಿದ್ದಾರೆ. ತಂಡದ ಅವಿಭಾಜ್ಯ ಅಂಗವಾಗಿದ್ದ ದಿಗ್ಗಜರು ಈ ನಿರ್ಧಾರ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಥೆ.

author-image
Ganesh Kerekuli
Rahul dravid
Advertisment

ಡಿಸೆಂಬರ್​​ನಲ್ಲಿ ನಡೆಯೋ ಮಿನಿ ಆಕ್ಷನ್​ಗೂ ಮುನ್ನ ಐಪಿಎಲ್​​ ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ರಾಜಸ್ಥಾನ್​ ರಾಯಲ್ಸ್​ ಫ್ರಾಂಚೈಸಿಯಲ್ಲಂತೂ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಸಂಜು ಸ್ಯಾಮ್ಸನ್​​​ ತಂಡದಿಂದ ಹೊರ ಬರೋ ನಿರ್ಧಾರ ಮಾಡಿ ಕ್ರಿಕೆಟ್​ ಜಗತ್ತಿಗೆ ಶಾಕ್​ ನೀಡಿದ್ರು. ಇದೀಗ ಹೆಡ್​ಕೋಚ್​ ರಾಹುಲ್​ ದ್ರಾವಿಡ್​​ ಸರ್​​​ಪ್ರೈಸ್​ ಶಾಕ್​ ಕೊಟ್ಟಿದ್ದಾರೆ. ಹೆಡ್​​ಕೋಚ್​ ಪಟ್ಟಕ್ಕೆ ದಿ ವಾಲ್​ ಗುಡ್​ ಬೈ ಹೇಳಿದ್ದಾರೆ.

ದ್ರಾವಿಡ್​​​ ‘ತಲೆದಂಡ’ಕ್ಕೆ ಅಸಲಿ ಕಾರಣ ಏನು?

ರಾಜಸ್ಥಾನ್​ ರಾಯಲ್ಸ್​ ಹೆಡ್​ಕೋಚ್​ ಸ್ಥಾನದಿಂದ ದ್ರಾವಿಡ್​ ಕೆಳಗಿಳೀತಾರೆ ಅಂತಾ ಯಾರೊಬ್ಬರೂ ಊಹೆ ಕೂಡ ಮಾಡಿರಲಿಲ್ಲ. ಸುದೀರ್ಘ ಕಾಲದಿಂದ ಫ್ರಾಂಚೈಸಿ ಜೊತೆಗೆ ದ್ರಾವಿಡ್ ಇದ್ರು. ಫ್ರಾಂಚೈಸಿ ವಲಯದಲ್ಲಿ ದ್ರಾವಿಡ್​​ಗೆ ರೆಸ್ಪೆಕ್ಟ್​ ಹೆಚ್ಚಿತ್ತು. ಆದ್ರೀಗ ಇದ್ದಕ್ಕಿದ್ದಂತೆ ದ್ರಾವಿಡ್​ ಎಕ್ಸಿಟ್​ ಆಗಿದ್ದಾರೆ. ಇದಕ್ಕೆ ಫ್ರಾಂಚೈಸಿ ಕೊಟ್ಟ ಬಿಗ್ಗರ್​ ಪೋಸ್ಟ್​ನ ಆಫರ್​ನ ರಿಜೆಕ್ಟ್​ ಮಾಡಿದ್ದು ಕಾರಣ ಎನ್ನಲಾಗ್ತಿದೆ. ಜೊತೆಗೆ ಕಳೆದ ಸೀಸನ್​​ನ ಕಳಪೆ ಪ್ರದರ್ಶನವೂ ನಿರ್ಧಾರದ ಹಿಂದಿದೆ ಅನ್ನೋ ಸುದ್ದಿಯೂ ಇದೆ. ಆದ್ರೆ ಅಸಲಿ ಕಾರಣ ಬೇರೆಯೇ ಇದೆ.

ಇದನ್ನೂ ಓದಿ:ಕಿಂಗ್ ಕೊಹ್ಲಿನ ಫಾಲೋ ಮಾಡ್ತಿರೋ ಯಂಗ್ ಪ್ಲೇಯರ್​.. ಈಗ ಸ್ಟೈಲೀಶ್ ಸ್ಟಾರ್..!

Sanju Samson
ಸಂಜು ಸ್ಯಾಮ್ಸನ್

ಪರಾಗ್​ ಮೇಲೆ ಮಾಲೀಕರಿಗೆ ವಿಪರೀತ ವ್ಯಾಮೋಹ

ರಾಜಸ್ಥಾನ್​ ರಾಯಲ್ಸ್​ ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿರೋದಕ್ಕೆ ಮುಖ್ಯ ಕಾರಣವೇ ರಿಯಾನ್​ ಪರಾಗ್​. ಅದೇನೋ ಗೊತ್ತಿಲ್ಲ.. ಈ ಪರಾಗ್​​ ಮೇಲೆ ಫ್ರಾಂಚೈಸಿ ಮಾಲೀಕರಿಗೆ ವಿಪರೀತವಾದ ವ್ಯಾಮೋಹ. 2019ರಿಂದ ತಂಡದಲ್ಲಿರೋ ರಿಯಾನ್​ ಪರಾಗ್​ 2024ರ ಸೀಸನ್​ ಒಂದು ಬಿಟ್ರೆ ಉಳಿದ್ಯಾವ ಸೀಸನ್​ನಲ್ಲೂ ಅದ್ಭುತ ಅನ್ನುವಂತಹ ಪರ್ಫಾಮೆನ್ಸ್​ ನೀಡಿಲ್ಲ.  ಈತನಿಗೆ ತಂಡದಲ್ಲಿ ಸ್ಥಾನ ಮಾತ್ರ ಮಿಸ್​ ಆಗಿಲ್ಲ. ಇದೀಗ ಈ ಪರಾಗ್​ನ ರಾಜಸ್ಥಾನದ ನೂತನ ರಾಜನನ್ನಾಗಿ ಮಾಡೋಕೆ ಕೂಡ ಫ್ರಾಂಚೈಸಿ ಹೊರಟಿದೆ. ಈ ನಿರ್ಧಾರವೇ ನೋಡಿ ಅಲ್ಲೋಲ ಕಲ್ಲೋಲಕ್ಕೆ ಕಾರಣ. 

ಪರಾಗ್​ಗೆ ನಾಯಕತ್ವ ನೀಡಲು ದ್ರಾವಿಡ್​​ ವಿರೋಧ

ಮುಂದಿನ ಸೀಸನ್​ಗೂ ಮುನ್ನ ರಿಯಾನ್​ ಪರಾಗ್​ಗೆ ಪಟ್ಟಾಭಿಷೇಕ ಮಾಡೋದು ಫ್ರಾಂಚೈಸಿ ಪ್ಲಾನ್​ ಆಗಿತ್ತು. ದ್ರಾವಿಡ್ ಇದಕ್ಕೆ ಸುತಾರಂ ಒಪ್ಪಿರಲಿಲ್ಲ. ರಿಯಾನ್​ ಪರಾಗ್​ ಬದಲಾಗಿ ಯುವ ಆಟಗಾರ ಯಶಸ್ವಿ ಜೈಸ್ವಾಲ್​ ಮೇಲೆ ದ್ರಾವಿಡ್​​ಗೆ ಒಲವಿತ್ತು. ದ್ರಾವಿಡ್​ ಅಭಿಪ್ರಾಯ ಫ್ರಾಂಚೈಸಿ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಇದ್ರಿಂದ ಬೇಸರಗೊಂಡೇ ದ್ರಾವಿಡ್​ ತಂಡದಿಂದ ಹೊರಬರುವ ನಿರ್ಧಾರ ಮಾಡಿದ್ರು.  

ಇದನ್ನೂ ಓದಿ:ಐಪಿಎಲ್​ ಆಡ್ಲಿಲ್ಲ, ವಿಶ್ವಕಪ್​ನಲ್ಲೂ ಇಲ್ಲ.. ಎಲ್ಲಿಗೆ ಹೋದ್ರು ಕನ್ನಡತಿ..?

ರಿಯಾನ್​ ಪರಾಗ್​ಗೆ ಒಲಿದ ನಾಯಕನ ಪಟ್ಟ.. 5 ಒನ್​ಡೇ ಮ್ಯಾಚ್​ ಸರಣಿಗೆ ಟೀಮ್ ರೆಡಿ!

ಸ್ಯಾಮ್ಸನ್​ಗೆ ಮ್ಯಾನೇಜ್​ಮೆಂಟ್​​ ಮೇಲೆ ಬೇಸರ

ಸಂಜು ಸ್ಯಾಮ್ಸನ್​ ಅಂದ್ರೆ ರಾಜಸ್ಥಾನ್​ ರಾಯಲ್ಸ್​. ರಾಜಸ್ಥಾನ್​​ ರಾಯಲ್ಸ್​ ಅಂದ್ರೆ ಸಂಜು ಸ್ಯಾಮ್ಸನ್​ ಅನ್ನೋ ಮಾತಿತ್ತು. ಸುದೀರ್ಘ ಕಾಲದಿಂದ ಫ್ರಾಂಚೈಸಿ ಜೊತೆಗೆ ಅವಿನಾಭಾವ ನಂಟು ಹೊಂದಿದ್ದ ಸಂಜು ಸ್ಯಾಮ್ಸನ್​ ಇದ್ದಕ್ಕಿದ್ದಂತೆ ತಂಡದಿಂದ ಹೊರ ಬರೋ ನಿರ್ಧಾರ ಮಾಡಿದ್ದಕ್ಕೂ ಇದೇ ಪರಾಗ್​ ಕಾರಣ. ಪರಾಗ್​ಗೆ ಪಟ್ಟ ಕಟ್ಟಲು ಮ್ಯಾನೇಜ್​​ಮೆಂಟ್​​ನ ನಿರ್ಧರಿಸಿದ್ದು ಸಂಜುಗೆ ಬೇಸರ ತರಿಸಿತ್ತು. ಆ ಬಳಿಕವೇ ನನ್ನನ್ನ ತಂಡದಿಂದ ರಿಲೀಸ್​ ಮಾಡಿ ಅಥವಾ ಟ್ರೇಡ್​ ಮಾಡಿ ಎಂದು ಫ್ರಾಂಚೈಸಿಗೆ ಸಂಜು ಮನವಿ ಮಾಡಿದ್ದು.  

ಇದನ್ನೂ ಓದಿ:S ಶ್ರೀಶಾಂತ್​ಗೆ ಇಂಜುರಿ ಆದ್ರೆ.. ಈ IPL ಫ್ರಾಂಚೈಸಿನ ಸುಪ್ರೀಂ ಕೋರ್ಟ್​ಗೆ ಎಳೆದ ಇನ್ಶುರೆನ್ಸ್ ಕಂಪನಿ

Rahul dravid (1)

ಜೋಸ್​ ಬಟ್ಲರ್​​​ಗೆ ಮೋಸ

2018ರಿಂದ ಜೋಸ್​ ಬಟ್ಲರ್​​​ ರಾಜಸ್ಥಾನ್​ ರಾಯಲ್ಸ್​ ತಂಡದ ಅವಿಭಾಜ್ಯ ಅಂಗವಾಗಿದ್ರು. ಪ್ರತಿ ಸೀಸನ್​ನಲ್ಲೂ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ್ರು. 2025 ಮೆಗಾ ಆಕ್ಷನ್​ಗೂ ಮುನ್ನ ಫ್ರಾಂಚೈಸಿ ಬಟ್ಲರ್​ನ ರಿಲೀಸ್​ ಮಾಡ್ತು. ಬಟ್ಲರ್​​ನ ಬಿಟ್ಟು ಪರಾಗ್​ನ ಉಳಿಸಿಕೊಂಡಿದ್ದು, ಸಂಜು ಸ್ಯಾಮ್ಸನ್​ ಹಾಗೂ ರಾಹುಲ್​ ದ್ರಾವಿಡ್​​ ಇಬ್ಬರಲ್ಲೂ ಬೇಸರ ತರಿಸಿತ್ತು. ಅಲ್ಲಿಂದ ಆರಂಭವಾದ ಬೇಸರ ಇದೀಗ ಇವರಿಬ್ಬರೇ  ತಂಡದಿಂದ ಹೊರ ಬರೋದ್ರಿಂದಿಗೆ ಅಂತ್ಯವಾಗಿದೆ. 

ರಾಹುಲ್​ ದ್ರಾವಿಡ್​​ರ​ ಮುಂದಿನ ನಡೆ ಏನು?

ರಾಜಸ್ಥಾನ್​ ರಾಯಲ್ಸ್​​ಗೆ ಗುಡ್​​ ಬೈ ಹೇಳಿದ ರಾಹುಲ್​ ದ್ರಾವಿಡ್​​​ರ ಮುಂದಿನ ನಡೆ ಏನು ಅನ್ನೋದು ಕ್ರಿಕೆಟ್​​ ವಲಯದ ಕುತೂಹಲದ ಪ್ರಶ್ನೆಯಾಗಿದೆ. ಹೊಸ ಕೋಚ್​ ಹುಡುಕಾಟದಲ್ಲಿರೋ 2 ಬಾರಿಯ ಚಾಂಪಿಯನ್​ ತಂಡ ಕೊಲ್ಕತ್ತಾ ನೈಟ್​ ರೈಡರ್ಸ್​​​ ದ್ರಾವಿಡ್​​ನ ಅಪ್ರೋಚ್​ ಮಾಡಿದೆ. ದ್ರಾವಿಡ್​ ಫೈನಲ್​ ನಿರ್ಧಾರ ತಿಳಿಸಿಲ್ಲ. ಇದ್ರ ನಡುವೆ ಸಂಜು ಸ್ಯಾಮ್ಸನ್​ಗೂ ಕೆಕೆಆರ್​ ಗಾಳ ಹಾಕ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಕೆಕೆಆರ್​ ತಂಡದಲ್ಲಿ ಮತ್ತೊಮ್ಮೆ ಗುರು-ಶಿಷ್ಯರ ಸಮಾಗಮವಾಗಲಿದೆ. 

ಇದನ್ನೂ ಓದಿ:ಮಿಡಿದ RCB.. ಸ್ಥಳೀಯರಿಗೆ ಉದ್ಯೋಗ, ಸ್ಮಾರಕ ಸೇರಿ ಕೆಲ ಯೋಜನೆಗೆ ಬಿಗ್ ಪ್ಲಾನ್!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Indian cricket team news Sanju Samson Rahul Dravid resigns
Advertisment