IND vs SA ಫೈನಲ್.. ಟೀಂ ಇಂಡಿಯಾಗೆ ಸ್ಟಾರ್​ ಬೌಲರ್​ ಕಂಬ್ಯಾಕ್​..!

ಇಂದು ಕ್ರಿಕೆಟ್ ಅಭಿಮಾನಿಗಳಿಗೆ ಗುಡ್​ ಫ್ರೈಡೆ.! ಯಾಕಂದ್ರೆ, ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ, ಟಿ-20 ಹಬ್ಬ ನಡೆಯಲಿದೆ. ಟೀಮ್ ಇಂಡಿಯಾಕ್ಕೆ ಈ ಪಂದ್ಯ ಪ್ರತಿಷ್ಟೆ. ಈ ಪಂದ್ಯ ಗೆದ್ದು ಸರಣಿ ಗೆಲ್ಲೋದೇ ಸೂರ್ಯಕುಮಾರ್ ಯಾದವ್ ಪಡೆಗೆ ಸವಾಲು.

author-image
Ganesh Kerekuli
SURYA_KUMAR (1)
Advertisment
  • ಇವತ್ತು ಯಾವ ತಂಡಕ್ಕೆ ಗುಡ್​ ಫ್ರೈಡೆ..?
  • ಸರಣಿ ಗೆಲ್ಲೋದೇ ಟೀಮ್ ಇಂಡಿಯಾ ಗುರಿ..!
  • ತಂಡಕ್ಕೆ ವೇಗಿ ಜಸ್ಪ್ರೀತ್ ಬೂಮ್ರಾ ಕಮ್​ಬ್ಯಾಕ್..!

ಇಂಡೋ-ಆಫ್ರಿಕಾ ಫೈನಲ್ ಟಿ-20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಹ್ಮದಾಬಾದ್​ನಲ್ಲಿ ನಡೆಯಲಿರೋ ಅಂತಿಮ ಟಿ-20 ಪಂದ್ಯ, ಸಿಕ್ಕಾಪಟ್ಟೆ ಮಹತ್ವ ಪಡೆದುಕೊಂಡಿದೆ. ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ, ಸರಣಿ ಗೆಲ್ಲುವ ತವಕದಲ್ಲಿದೆ. ಮತ್ತೊಂದೆಡೆ ಫೈನಲ್ ಟಿ-20 ಪಂದ್ಯವನ್ನ ಗೆದ್ದು ಆಫ್ರಿಕಾ, ಭಾರತ ಪ್ರವಾಸಕ್ಕೆ ಗುಡ್​​ಬೈ ಹೇಳುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಆಫ್ರಿಕನ್ನರೂ ಈ ಪಂದ್ಯವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪಂದ್ಯ ಗೆದ್ರೆ ಸರಣಿ ಸಮಬಲ, ಸೋತ್ರೆ ಸರಣಿ ಸೋಲು. ಹಾಗಾಗಿ ಇಂದು, ಎರಡು ಬಲಿಷ್ಟ ತಂಡಗಳ ನಡುವೆ ಗೆಲುವಿಗಾಗಿ ಬಿಗ್ ಫೈಟ್ ನಡೆಯಲಿದೆ. ಕ್ರಿಕೆಟ್ ಫ್ಯಾನ್ಸ್​ಗೆ ಫುಲ್ ಎಂಟರ್​ಟೈನ್ಮೆಂಟ್ ಸಿಗಲಿದೆ. 

ಇದನ್ನೂ ಓದಿ: ಈ ಐದು ಆಟಗಾರರಿಗೆ ಮತ್ತೆ ಮರುಜೀವ ಕೊಟ್ಟ IPL; ಇದೇ ಲಾಸ್ಟ್ ಚಾನ್ಸ್..!

ಶುಭ್ಮನ್ ಗಿಲ್ ಬದಲು ಸಂಜು ಸ್ಯಾಮ್ಸನ್?

ಅಹ್ಮದಾಬಾದ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಒಂದೆರಡು ಬದಲಾವಣೆ ಪಕ್ಕಾ. ಗಾಯಗೊಂಡಿರುವ ಶುಭ್ಮನ್ ಗಿಲ್, ಈ ಪಂದ್ಯ ಆಡೋದು ಅನುಮಾನ ಎನ್ನಲಾಗ್ತಿದೆ. ಆದ್ರೆ ಪಂದ್ಯಕ್ಕೂ ಮುನ್ನ ಗಿಲ್ ಲಭ್ಯತೆ ಬಗ್ಗೆ ಚರ್ಚಿಸಲಾಗುವುದು. ಒಂದು ವೇಳೆ ಗಿಲ್ ಪಂದ್ಯದಿಂದ ಔಟ್ ಆದ್ರೆ, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್, ಗಿಲ್ ಸ್ಥಾನವನ್ನ ತುಂಬಲಿದ್ದಾರೆ.

ಇದನ್ನೂ ಓದಿ: 28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?

team india (12)

ವೈಯಕ್ತಿಕ ಕಾರಣದಿಂದ ಧರ್ಮಶಾಲಾ ಪಂದ್ಯಕ್ಕೆ ಅಲಭ್ಯರಾಗಿದ್ದ ವೇಗಿ ಜಸ್ಪ್ರೀತ್ ಬೂಮ್ರಾ, ಕೊನೆಯ ಟಿ-20 ಪಂದ್ಯಕ್ಕೆ, ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಬೂಮ್ರಾ ಎಂಟ್ರಿಯಿಂದ ಹರ್ಷಿತ್ ರಾಣಾ ಸ್ಥಾನ ಕಳೆದುಕೊಳ್ಳೋದು ಬಹುತೇಕ ಖಚಿತ. ಆದ್ರೆ ಕೋಚ್ ಗಂಭೀರ್​, ರಾಣಾರನ್ನ ಉಳಿಸಿಕೊಳ್ಳಲು ಯಾರಿಗೆ ಕೊಕ್ ನೀಡ್ತಾರೆ ಅನ್ನೋದೇ, ಗೊತ್ತಾಗ್ತಿಲ್ಲ.

ಈ ವರ್ಷ ಟೀಮ್ ಇಂಡಿಯಾ ಆಡೋ ಕೊನೆಯ ಟಿ-20 ಪಂದ್ಯ ಇದಾಗಲಿದೆ. ವರ್ಷ ಇಡೀ ಕಳಪೆ ಫಾರ್ಮ್​ಗೆ ಸಿಲುಕಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಾಯಕ ಸೂರ್ಯಕುಮಾರ್ ಯಾದವ್, ಅಟ್ಲೀಸ್ಟ್ ಇವತ್ತಾದ್ರೂ ಒಂದೊಳ್ಳೆ ಇನ್ನಿಂಗ್ಸ್ ಆಡಬೇಕಿದೆ. 2026 ಜನವರಿ ಮೊದಲ ವಾರದಲ್ಲಿ ನ್ಯೂಜಿಲೆಂಡ್ ಟಿ-20 ಸರಣಿ ಮತ್ತು ಟಿ-20 ವಿಶ್ವಕಪ್​​ಗೆ ತಂಡ ಪ್ರಕಟಿಸುವ ಸಾಧ್ಯತೆ ಇರೋದ್ರಿಂದ ಸ್ಕೈ ಇಂದು ಪರ್ಫಾಮ್ ಮಾಡಲೇಬೇಕಿದೆ.

ಇದನ್ನೂ ಓದಿ: ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!'

ಕ್ರಿಕೆಟ್ ಅಭಿಮಾನಿಗಳಿಗೆ ಬುಮ್ರಾ ಶಾಕ್.. ಅಚ್ಚರಿಯ ನಿರ್ಧಾರಕ್ಕೆ ಮುಂದಾದ್ರಾ..?

ಅಹ್ಮದಾಬಾದ್​​​​​​​ ಪಂದ್ಯದಲ್ಲಿ, ಟಾಸ್ ಗೆದ್ದೋರೇ ಬಾಸ್. ಈ ಪಂದ್ಯದಲ್ಲಿ  ಟಾಸ್ ಅತ್ಯಂತ ಪ್ರಮುಖ ಪಾತ್ರವಹಿಸಿಲಿದೆ. ನೈಟ್ ಗೇಮ್ ಆಗಿರೋದ್ರಿಂದ ಟಾಸ್ ಗೆದ್ದು ಬ್ಯಾಟಿಂಗ್ ಮಾಡೋದೇ ಸೂಕ್ತ ನಿರ್ಧಾರ. ಈ ವರ್ಷ ಈ ಮೈದಾನದಲ್ಲಿ 7 ನೈಟ್​​ಗೇಮ್ಸ್ ಆಗಿದೆ. ಅದ್ರಲ್ಲಿ 6 ಬಾರಿ ತಂಡ ಸ್ಕೋರ್ ಡಿಫೆಂಡ್ ಮಾಡಿಕೊಂಡಿದೆ. ಉತ್ತಮ ಟಾರ್ಗೆಟ್ ಸೆಟ್ ಮಾಡೋ ತಂಡ ಗೆಲ್ಲೋದು ಫಿಕ್ಸ್.

ಸರಣಿ ಗೆಲ್ಲೋದೇ ಟೀಮ್ ಇಂಡಿಯಾ ಗುರಿ

ಟೆಸ್ಟ್ ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನ ಗೆದ್ದು ಮಾನ ಉಳಿಸಿಕೊಂಡಿತ್ತು. ಇದೀಗ ಟಿ-20 ಸರಣಿಯನ್ನ ಗೆಲುವಿನ ಮೂಲಕ ಟೀಮ್ ಇಂಡಿಯಾ, ವರ್ಷಕ್ಕೆ ಗುಡ್​ಬೈ ಹೇಳಲು ಹೊರಟಿದೆ. ಅತ್ತ ಆಫ್ರಿಕಾ ಭಾರತ ಪ್ರವಾಸವನ್ನ ಅವಿಸ್ಮರಣಿಯವನ್ನಾಗಿಸಿಕೊಳ್ಳಲು ಈ ಪಂದ್ಯವನ್ನ ಗೆಲ್ಲಲೇಬೇಕಿದೆ. ಒಟ್ನಲ್ಲಿ, ಎರಡೂ ತಂಡಗಳಿಗೆ ಗೆಲುವು ಎಷ್ಟು ಇಂಪಾರ್ಟೆಂಟ್ ಅನ್ನೋದು ಗೊತ್ತಿದೆ. ಹಾಗಾಗಿ ಇವತ್ತು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಫೆಂಟಾಸ್ಟಿಕ್ ಫ್ರೈಡೆ ಆಗೋದ್ರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ:ಕರ್ನಾಟಕ ತಂಡಕ್ಕೆ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಕಂಬ್ಯಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs South Africa
Advertisment