/newsfirstlive-kannada/media/media_files/2025/08/12/gill-17-2025-08-12-08-53-40.jpg)
ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಾಸ್ಗಳ ಭಯ ಕಾಡ್ತಿದ್ಯಾ? ಅಭದ್ರತೆ ಆಟಗಾರರನ್ನ ಆವರಿಸಿದ್ಯಾ? ಹೀಗೊಂದು ಪ್ರಶ್ನೆ ಎದ್ದಿದೆ. ಪ್ರಶ್ನೆಯ ಹುಟ್ಟಿಗೆ ಕಾರಣ ಗಿಲ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್ ಹಾಗೂ ಜಿತೇಶ್ ಶರ್ಮಾ!
ಟೀಮ್ ಇಂಡಿಯಾ ಆಟಗಾರರಿಗೆ ‘ಬಾಸ್ಗಳ ಭಯ’!
ಟೀಮ್ ಇಂಡಿಯಾದಲ್ಲಿ ಆಟಗಾರರೇ ಸುಪ್ರೀಂ ಅನ್ನೋ ಕಾಲವೊಂದಿತ್ತು. ಆದ್ರೀಗ ಆ ಕಾಲ ಬದಲಾಗಿದೆ. ಈಗೇನಿದ್ರೂ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಬಿಸಿಸಿಐ ಬಾಸ್ಗಳೇ ಸುಪ್ರೀಂ. ಬಾಸ್ಗಳ ಭಯ, ಸ್ಥಾನ ಕಳೆದುಕೊಳ್ಳುವ ಆತಂಕ ಆಟಗಾರರನ್ನ ಆವರಿಸಿದೆ. ಟೀಮ್ ಇಂಡಿಯಾದ ಕೆಲ ಆಟಗಾರರ ಇತ್ತೀಚಿನ ನಡೆಯೇ ಇದನ್ನ ಸಾರಿ ಸಾರಿ ಹೇಳ್ತಿದೆ.
ಆಪ್ತ ಇಶಾನ್ ಕಿಶನ್ ಘಟನೆಯಿಂದ ಎಚ್ಚೆತ್ತ ಗಿಲ್
ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದ ಕಿಶನ್ ಈಗ ಸೈಡ್ಲೈನ್ ಆಗಿರೋ ಕಥೆ ನಿಮಗೆ ಗೊತ್ತು. ಡೊಮೆಸ್ಟಿಕ್ ಕ್ರಿಕೆಟ್ ಆಡು ಅಂದ್ರೆ ಅನಾರೋಗ್ಯದ ನೆಪ ಕಿಶನ್ಗೆ ದೇಶಿ ಕ್ರಿಕೆಟ್ನಿಂದ ದೂರ ಉಳಿದಿದ್ರು. ಪರಿಣಾಮ ಬಾಸ್ಗಳ ಕೆಂಗಣ್ಣಿಗೆ ಗುರಿಯಾದ ಕಿಶನ್ಗೆ ಟೀಮ್ ಇಂಡಿಯಾ ಡೋರ್ ತೆಗೆದು ವರ್ಷಗಳೇ ಉರುಳಿದ್ವು.
ಇದನ್ನೂ ಓದಿ: ಬ್ರ್ಯಾಂಡ್ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್ಮನ್..?
ಇದೀಗ ಗಿಲ್ಗೆ ದುಲೀಪ್ ಟ್ರೋಫಿ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ನಾರ್ಥ್ ಝೋನ್ ತಂಡಕ್ಕೆ ನಾಯಕನನ್ನಾಗಿಯೂ ಮಾಡಲಾಗಿದೆ. ಗಿಲ್ಗೆ ಅನಾರೋಗ್ಯದ ಸಮಸ್ಯೆ ಎದುರಾಗಿದೆ. ಗಿಲ್ ದುಲೀಪ್ ಟ್ರೋಫಿ ಆಡೋಕೆ ರೆಡಿಯಾಗಿದ್ದಾರೆ. ಎಲ್ಲಿ ಗೆಳೆಯನಿಗೆ ಆದ ಸ್ಥಿತಿ ನನಗೆ ಎದುರಾಗಿಬಿಡುತ್ತೋ ಅನ್ನೋ ಭಯವೇ ಇದಕ್ಕೆ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ,
ವಿಪರೀತ ಜ್ವರ ಇದ್ರೂ ಆಟ ಬಿಡ್ತಿಲ್ಲ ಸಂಜು
ಆಡಿದ ಕೊನೆಯ 10 ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 3 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಹಾಗಿದ್ರೂ ಏಷ್ಯಾಕಪ್ ತಂಡಕ್ಕೆ ಗಿಲ್ ಕಮ್ಬ್ಯಾಕ್ ಮಾಡಿದ ಬಳಿಕ ಸಂಜುಗೆ ಓಪನರ್ ಸ್ಥಾನದಿಂದ ಕೊಕ್ ಕೊಡಲಾಗಿದೆ. ರಿಷಭ್ ಪಂತ್ ಇಂಜುರಿಗೆ ತುತ್ತಾಗಿರೋದ್ರಿಂದ ವಿಕೆಟ್ ಕೀಪರ್ ಆಗಿ ಸ್ಥಾನ ಸಿಕ್ಕಿದೆ. ಪಂತ್ ವಾಪಾಸ್ಸಾದ ಮೇಲೆ ಸ್ಥಾನ ಉಳಿಯಬೇಕಂದ್ರೆ, ಏಷ್ಯಾಕಪ್ನಲ್ಲಿ ಅಬ್ಬರಿಸಬೇಕಿದೆ. ಇದಕ್ಕಾಗಿ ಎಂತಾ ಕಠಿಣ ಹೋರಾಟಕ್ಕೂ ರೆಡಿಯಾಗಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ
ಸಂಜು ಸ್ಯಾಮ್ಸನ್ ಕೇರಳ ಪ್ರೀಮಿಯರ್ ಲೀಗ್ ಆಡ್ತಿದ್ದಾರೆ. ಏಷ್ಯಾಕಪ್ಗೆ ಸಿದ್ಧತೆಯ ದೃಷ್ಟಿಯಿಂದ ಈ ಲೀಗ್ ಅನ್ನ ಸಂಜು ಸ್ಯಾಮ್ಸನ್ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಜ್ವರದ ನಡುವೆಯೂ ಪಂದ್ಯವನ್ನಾಡ್ತಿದ್ದಾರೆ. ಅದಾನಿ ತ್ರಿವೇಂದ್ರಮ್ ವಿರುದ್ಧದ ಪಂದ್ಯಕ್ಕೂ ಮುನ್ನ ಜ್ವರದಿಂದಾಗಿ ಸಂಜು ಸ್ಯಾಮ್ಸನ್ ಆಸ್ಪತ್ರೆಗೆ ಸೇರಿದ್ರು. ಆಸ್ಪತ್ರೆಗೆ ಬಂದು ಪಂದ್ಯವನ್ನಾಡಿದ ಸಂಜು, ಪಂದ್ಯದ ಅಂತ್ಯದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಲ್ಲರಿಗಿಂತ ಮೊದಲೆ ದುಬೈಗೆ ಹಾರಿದ ಜಿತೇಶ್
ಆರ್ಸಿಬಿಯ ವಿಕೆಟ್ ಕೀಪರ್ ಜಿತೇಶ್ ಶರ್ಮಾಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ಐಪಿಎಲ್ನಲ್ಲಿ ಅಬ್ಬರಿಸಿ ತಂಡಕ್ಕೆ ಎಂಟ್ರಿ ನೀಡಿರೋ ಜಿತೇಶ್ ಶರ್ಮಾ, ಏಷ್ಯಾಕಪ್ ಅಖಾಡದಲ್ಲಿ ಸಾಮರ್ಥ್ಯ ನಿರೂಪಿಸಬೇಕಿದೆ. ಸ್ಥಾನ ಉಳಿಸಿಕೊಳ್ಳೋ ಸರ್ಕಸ್ಗೆ ಬಿದ್ದಿರೋ ಜಿತೇಶ್ ಶರ್ಮಾ ಎಲ್ಲರಿಗಿಂತ ಮುನ್ನವೇ ದುಬೈಗೆ ಹಾರಿದ್ದಾರೆ. ಅಲ್ಲಿನ ಪ್ಲೇಯಿಂಗ್ ಕಂಡೀಷನ್ಸ್ಗೆ ಹೊಂದಿಕೊಂಡು ಅಭ್ಯಾಸ ನಡೆಸಿ ಟೂರ್ನಿಗೆ ಸಿದ್ಧವಾಗೋದು ಜಿತೇಶ್ ಶರ್ಮಾ ಪ್ಲಾನ್.!
ರಿಂಕು ಸಿಂಗ್ಗೂ ಶುರುವಾಗಿದೆ ನಡುಕ
ಏಷ್ಯಾಕಪ್ಗೆ ಜಿತೇಶ್ ಶರ್ಮಾ ಎಂಟ್ರಿ ರಿಂಕು ಸಿಂಗ್ ಟೆನ್ಶನ್ ಹೆಚ್ಚಿಸಿದೆ. ಇಷ್ಟು ದಿನ ಖಾಯಂ ಸ್ಥಾನಿಯಾಗಿದ್ದ ರಿಂಕು ಸಿಂಗ್ಗೆ ಇದೀಗ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳೋ ಆತಂಕ ಆವರಿಸಿದೆ. ಕಳೆದ ಕೆಲ ಪಂದ್ಯಗಳಲ್ಲಿ ನೀಡಿದ ಇನ್ಕನ್ಸಿಸ್ಟೆಂಟ್ ಪ್ರದರ್ಶನ, ಐಪಿಎಲ್ನ ವೈಫಲ್ಯದಿಂದ ಹೊರಬರೋಕೆ ರಿಂಕು ಸಿಂಗ್ ಸರ್ಕಸ್ ಮಾಡ್ತಿದ್ದಾರೆ. ಯುಪಿ ಟಿ20 ಲೀಗ್ನಲ್ಲಿ ಆಡ್ತಿರೋ ರಿಂಕು ಕಠಿಣ ಪರಿಶ್ರಮ ಪಡ್ತಿದ್ದಾರೆ. ಸ್ಫೋಟಕ ಸೆಂಚುರಿ ಸಿಡಿಸಿ ಮ್ಯಾನೇಜ್ಮೆಂಟ್ಗೆ ಪರೋಕ್ಷವಾಗಿ ಮತ್ತೊಂದು ಚಾನ್ಸ್ ಕೊಡಿ ಎಂಬ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಕಠಿಣ ಪ್ರಾಕ್ಟೀಸ್.. ಮುಂದಿನ ಅಗ್ನಿಪರೀಕ್ಷೆಗೆ ವಿರಾಟ್ ರಣತಂತ್ರ ಹೇಗಿದೆ?
ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾಗೆ ಹಲವು ಆಟಗಾರರು ಬಂದಿದ್ದಾರೆ. ಹೋಗಿದ್ದಾರೆ. ಯಾರ ಸ್ಥಾನವೂ ಭದ್ರವಾಗಿಲ್ಲ. ಈ ಸ್ಥಾನದ ಅಭದ್ರತೆಯೇ ಆಟಗಾರರ ಟೆನ್ಶನ್ಗೆ ಕಾರಣವಾಗಿದ್ದು, ಅದಕ್ಕಾಗಿ ಇಷ್ಟೆಲ್ಲಾ ಸರ್ಕಸ್ ಮಾಡ್ತಿದ್ದಾರೆ. ಈ ಸರ್ಕಸ್ಗೆ ಸಕ್ಸಸ್ ಸಿಗುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪೂಜಾರ ಗುಡ್ಬೈ..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ