/newsfirstlive-kannada/media/media_files/2025/08/13/sanju-samson-2025-08-13-18-46-18.jpg)
ಸಂಜು ಸ್ಯಾಮ್ಸನ್
ಒಂದಲ್ಲ, ಎರಡಲ್ಲ ಸುದೀರ್ಘ 11 ವರ್ಷಗಳ ಪ್ರಯಾಣ. ಸಂಜು ಸ್ಯಾಮ್ಸನ್ ಅಂದ್ರೆ ರಾಜಸ್ಥಾನ್ ರಾಯಲ್ಸ್, ರಾಜಸ್ಥಾನ್ ರಾಯಲ್ಸ್ ಅಂದ್ರೆ ಸಂಜು ಸ್ಯಾಮ್ಸನ್ ಎಂದೇ ಕ್ರಿಕೆಟ್ ಲೋಕ ಗುರುತಿಸಿದೆ. ಕೇರಳದ ಸಂಜು ಸ್ಯಾಮ್ಸನ್ ರಾಜಸ್ಥಾನದ ಮನೆ ಮಗ ಅನಿಸಿಬಿಟ್ಟಿದ್ದಾರೆ. ಇಂತಹ ಸಂಜು ಸ್ಯಾಮ್ಸನ್ ಇದೀಗ ರಾಜಸ್ಥಾನ್ ತಂಡವನ್ನ ತೊರೆಯೋಕೆ ಮುಂದಾಗಿದ್ದಾರೆ. ಇಷ್ಟು ದಿನ ಇದಕ್ಕೆ ಕಾರಣ ಏನು ಅನ್ನೋದು ಯಾರಿಗೂ ಗೊತ್ತಾಗಿರಲಿಲ್ಲ. ಇದೀಗ ರೀಸನ್ ರಿವೀಲ್ ಆಗಿದೆ.
ಕಳೆದ ಸೀಸನ್ನ ಐಪಿಎಲ್ ಟೂರ್ನಿ ಅಂತ್ಯವಾದ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗೆ ಸಂಜು ಸ್ಯಾಮ್ಸನ್ ತಂಡವನ್ನ ತೊರೆಯೋದಾಗಿ ತಿಳಿಸಿದ್ರಂತೆ. ಅದಾದ ಜೂನ್ನಲ್ಲಿ ಸೀಸನ್ನ ರಿವ್ಯೂ ಮೀಟಿಂಗ್ನಲ್ಲಿ ಮ್ಯಾನೇಜ್ಮೆಂಟ್ ಈ ಬಗ್ಗೆ ಚರ್ಚೆ ನಡೆಸಿದೆ. ಫೈನಲ್ ನಿರ್ಧಾರ ತಳೆದಿಲ್ಲ. ಬದಲಾಗಿ ಹೆಡ್ಕೋಚ್ ರಾಹುಲ್ ದ್ರಾವಿಡ್ಗೆ ಸಂಧಾನದ ಹೊರೆ ಹೊರಿಸಿತ್ತು. ಸಂಜು ಸ್ಯಾಮ್ಸನ್ ರಾಜಿಯಾಗೋಕೆ ರೆಡಿಯಿಲ್ಲ. ಮತ್ತೊಮ್ಮೆ ತಮ್ಮನ್ನ ರಿಲೀಸ್ ಮಾಡಿ ಅಥವಾ ಟ್ರೇಡ್ ಮಾಡಿ ಎಂದು ಫ್ರಾಂಚೈಸಿಗೆ ತಿಳಿಸಿದ್ದಾರೆ. ಸಂಜುಗೆ ಈ ಪರಿ ಸಿಟ್ಟು ಬಂದಿರೋದಕ್ಕೆ ಕಾರಣ ಏನ್ ಗೊತ್ತಾ? ರಿಯಾನ್ ಪರಾಗ್.
ಇದನ್ನೂ ಓದಿ: ರೋಹಿತ್ ಶರ್ಮಾರ ಮನೆಗೆ ಹೊಸ ಅತಿಥಿ ಎಂಟ್ರಿ.. ಕಣ್ಣುಕುಕ್ಕಿದ ನಂಬರ್ ಪ್ಲೇಟ್..!
ಸಂಜು ಸ್ಯಾಮ್ಸನ್ ಸಿಟ್ಟಿನ ಸೀಕ್ರೆಟ್ ರಿವೀಲ್
ಕಳೆದ ಸೀಸನ್ನಲ್ಲಿ ಇಂಜುರಿಗೆ ತುತ್ತಾಗಿದ್ದ ಸಂಜು ಸ್ಯಾಮ್ಸನ್ ಕೆಲ ಪಂದ್ಯಗಳಿಂದ ದೂರ ಉಳಿದಿದ್ರು. ಈ ವೇಳೆ ಹಂಗಾಮಿ ನಾಯಕನಾಗಿ ರಿಯಾನ್ ಪರಾಗ್ ನಾಯಕತ್ವವನ್ನ ನಿಭಾಯಿಸಿದ್ರು. ರಿಯಾನ್ ಪರಾಗ್ ಕ್ಯಾಪ್ಟೆನ್ಸಿ ಅಂತಹ ಅದ್ಭುತವಾಗಿರಲಿಲ್ಲ. ಫ್ರಾಂಚೈಸಿಗೆ ರಿಯಾನ್ ಪರಾಗ್ ನಾಯಕತ್ವ ಇಷ್ಟವಾಗಿದ್ಯಂತೆ. ತನ್ನನ್ನ ಸೈಡ್ಲೈನ್ ಮಾಡಿ, ಪರಾಗ್ಗೆ ಫ್ರಾಂಚೈಸಿ ಹೆಚ್ಚು ಮನ್ನಣೆ ನೀಡಿದ್ದು ಸಂಜು ಸಿಟ್ಟಿಗೆ ಕಾರಣವಾಗಿದೆ. ನಾವಲ್ಲ.. ಮಾಜಿ ಕ್ರಿಕೆಟಿಗ ಎಸ್, ಬದ್ರಿನಾಥ್ ರಿವೀಲ್ ಮಾಡಿರೋ ಸತ್ಯವಿದು.
ಒಂದೇ ಒಂದು ನಿಮಿಷ. ಇದಕ್ಕೆ ಕಾರಣ ರಿಯಾನ್ ಪರಾಗ್. ನೀವು ಆತನನ್ನ ನಾಯಕತ್ವಕ್ಕೆ ಪರಿಗಣಿಸಿದ್ರೆ ಯಾರು ಹೇಗೆ ಇರೋಕೆ ಸಾಧ್ಯ. ಸಂಜು ಸ್ಯಾಮ್ಸನ್ ದೊಡ್ಡ ಆಟಗಾರ. ಒಳ್ಳೆಯ ಆಟಗಾರ
ಬದ್ರಿನಾಥ್, ಮಾಜಿ ಕ್ರಿಕೆಟಿಗ
ಗುರುವಿನ ಮೇಲೂ ಸಂಜು ಸ್ಯಾಮ್ಸನ್ಗೆ ಸಿಟ್ಟು
ಹೆಡ್ಕೋಚ್, ಗುರು ರಾಹುಲ್ ದ್ರಾವಿಡ್ ಸಂಜು ಸ್ಯಾಮ್ಸನ್ ಸಿಟ್ಟಾಗಿದ್ದಾರೆ. ಕಳೆದ ಐಪಿಎಲ್ನಲ್ಲಾದ ಘಟನೆಗಳು ಇದಕ್ಕೆ ಕಾರಣ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಟೈ ಆಗಿದ್ದು ನಿಮಗೆ ಇದ್ಯಾ? ಆ ಪಂದ್ಯ ಟೈ ಆದ ಬಳಿಕ ರಾಜಸ್ಥಾನ್ ರಾಯಲ್ಸ್ ಡಗೌಟ್ ಬಳಿ ಒಂದು ಮೀಟಿಂಗ್ ನಡೀತು. ಆ ಮೀಟಿಂಗ್ನ ಮಾಡಿದ್ದು ರಾಹುಲ್ ದ್ರಾವಿಡ್. ಈ ಸಭೆಯ ವೇಳೆ ಸಂಜು ಸ್ಯಾಮ್ಸನ್ನ ಕಡೆಗಣಿಸಲಾಗಿಯ್ತು.
ಇದನ್ನೂ ಓದಿ: ಫಿಲ್ ಸಾಲ್ಟ್ರನ್ನ ಬಿಟ್ಟುಕೊಡುತ್ತಾ RCB? ಕೆಕೆಆರ್ ಜೊತೆ ಆರ್ಸಿಬಿ ಬಿಗ್ ಡೀಲ್..?
ಮೀಟಿಂಗ್ ವೇಳೆ ಪಕ್ಕದಲ್ಲೇ ಓಡಾಡ್ತಿದ್ದ ನಾಯಕ ಸಂಜು ಸ್ಯಾಮ್ಸನ್ ನೋಡಿಯೂ ನೋಡದಂತೆ ಅಲ್ಲೆ ಓಡಾಡ್ತಿದ್ರು. ಆ ವೇಳೆ ತಂಡದ ಸಹ ಆಟಗಾರ ಯಧುವೀರ್ ಸಿಂಗ್, ಟೀಮ್ ಮೀಟಿಂಗ್ಗೆ ಬರುವಂತೆ ಸಂಜುಗೆ ಸನ್ನೆ ಮಾಡಿದ್ರು. ಇದಕ್ಕೆ ಸನ್ನೆಯಲ್ಲೇ ಉತ್ತರ ನೀಡಿದ್ದ ಸಂಜು, ಮೀಟಿಂಗ್ನಿಂದ ದೂರ ಉಳಿದಿದ್ರು. ದ್ರಾವಿಡ್-ಸಂಜುವಿನ ನಡುವೆ ಈತರ ಹಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ವು ಎನ್ನಲಾಗ್ತಿದೆ.
ಫ್ರಾಂಚೈಸಿ ಮೇಲೂ ಸ್ಯಾಮ್ಸನ್ಗೆ ಅಸಮಾಧಾನ
ಸುದೀರ್ಘ 11 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ತಂಡವನ್ನ ಸಂಜು ಪ್ರತಿನಿಧಿಸಿದ್ದಾರೆ. ಇಂದು ಸಂಜು ಏನೇ ಆಗಿದ್ರೂ ಅದಕ್ಕೆ ಫ್ರಾಂಚೈಸಿ ನೀಡಿದ ಬೆಂಬಲ, ಸಹಕಾರದ್ದು ಪ್ರಮುಖ ಪಾತ್ರವಿದೆ. ಇಂತಹ ಫ್ರಾಂಚೈಸಿಯನ್ನ ಸಂಜು ಸ್ಯಾಮ್ಸನ್ ತೊರೆಯಲು ಮುಂದಾಗಿರೋದಕ್ಕೆ ಆಂತರಿಕ ಭಿನ್ನಾಭಿಪ್ರಾಯವೂ ಒಂದು ಕಾರಣ ಎನ್ನಲಾಗ್ತಿದೆ. ಆಟಗಾರರ ಖರೀದಿ, ಪ್ಲೇಯಿಂಗ್ ಇಲೆವೆನ್ ಆಯ್ಕೆ, ಗೇಮ್ಪ್ಲಾನ್ ಈ ವಿಚಾರಗಳಲ್ಲಿ ಸಂಜು ಮಾತಿಗೆ ಹೆಚ್ಚಿನ ಮನ್ನಣೆ ಸಿಕ್ಕಿಲ್ಲ. ಇದೇ ಕಾರಣಕ್ಕೆ ಸಂಜು ತಂಡ ಬಿಡೋ ನಿರ್ಧಾರ ಮಾಡಿದ್ದಾರೆ ಅನ್ನೋ ಸುದ್ದಿಯಿದೆ.
ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ, ಇನ್ಯಾರಿಗೋ ಶಿಕ್ಷೆ.. ಬೆಂಗಳೂರಿಗೆ ಆಗ್ತಿರುವ ನಷ್ಟಗಳು ಏನೇನು..?
ಒಟ್ಟಿನಲ್ಲಿ ಹಲವು ಕಾರಣಗಳಿಂದ ಸಿಟ್ಟಾಗಿರೋ ಸಂಜು ಸ್ಯಾಮ್ಸನ್ ಸುದೀರ್ಘ 11 ವರ್ಷಗಳ ಜರ್ನಿಗೆ ಫುಲ್ಸ್ಟಾಪ್ ಇಡೋಕೆ ಮುಂದಾಗಿದ್ದಾರೆ. ಸಂಜು ಸ್ಯಾಮ್ಸನ್ ತಮ್ಮ ನಿರ್ಧಾರ ತಿಳಿಸಿದ್ದಾರೆ. ಕನ್ವಿನ್ಸ್ ಮಾಡೋಕೆ ಫ್ರಾಂಚೈಸಿಗೆ ನವೆಂಬರ್ ಅಂತ್ಯವರೆಗೆ ಟೈಮ್ ಇದೆ. ಸಂಜುನ ಫ್ರಾಂಚೈಸಿ ಮನವೊಲಿಸಿ ತಂಡದಲ್ಲಿ ಉಳಿಸಿಕೊಳ್ಳುತ್ತಾ.? ಇಲ್ಲಾ ಅನಿವಾರ್ಯವಾಗಿ ರಿಲೀಸ್ ಮಾಡುತ್ತಾ.? ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ:ಧೋನಿಯ 100 ಕೋಟಿ ಕೇಸ್ಗೆ 12 ವರ್ಷಗಳ ಬಳಿಕ ಬಿಗ್ ಟ್ವಿಸ್ಟ್.. ಏನಿದು ಪ್ರಕರಣ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ