ರಾಜಸ್ಥಾನ್ ಡಿಮ್ಯಾಂಡ್​ಗೆ ಹೆದರಿದ ಚೆನ್ನೈ.. ಸಂಜು ಟ್ರೇಡ್​ ಡೀಲ್​​ಗೆ ಹೊಸ ತಿರುವು..!

ಸಂಜು ಸ್ಯಾಮ್ಸನ್ ಚೆನ್ನೈಗೆ ಹಾರುವ ಕನಸು ಈಡೇರುತ್ತಾ? ಟ್ರೇಡ್​ ಮೂಲಕ ಚೆನ್ನೈ ನೋ ಎಂದಿದೆ. ಹಾಗಿದ್ದರೆ ಸಂಜುಗೆ ದಾರಿ ಯಾವುದು? ಈ ವಿಕೆಟ್ ಕೀಪರ್ ಮೇಲೆ ಯಾರೆಲ್ಲಾ ಕಣ್ಣೀಟ್ಟಿದ್ದಾರೆ ಅನ್ನೋ ವಿವರ ಇಲ್ಲಿದೆ.

author-image
Ganesh Kerekuli
SANJU_SAMSON (1)
Advertisment
  • ಸಿಎಸ್​​ಕೆ ತಂಡಕ್ಕೆ ರಾಜಸ್ಥಾನ್ ರಾಯಲ್ಸ್​​ ಡಿಮ್ಯಾಂಡ್​!
  • ಆರ್​ಆರ್​ ಡಿಮ್ಯಾಂಡ್​ಗೆ ನೋ ಎಂದ ಚೆನ್ನೈ ಕಿಂಗ್ಸ್​..!
  • ಆರ್​ಆರ್​ ಕ್ಯಾಪ್ಟನ್​​ಗಾಗಿ ಮುಗಿಬಿದ್ದ ಫ್ರಾಂಚೈಸಿಗಳು..!

ಐಪಿಎಲ್​ ಅಖಾಡದ ಟಾಕ್ ಆಫ್ ದಿ ಟೌನ್ ಸಂಜು ಸ್ಯಾಮ್ಸನ್. 18ರ ಮಿಡ್ ಸೀಸನ್​​ನಿಂದ ಇದುವರೆಗೆ ಸಂಜು ಸ್ಯಾಮ್ಸನ್​​ರದ್ದೇ ಚರ್ಚೆ. ಯಾವ ತಂಡಕ್ಕೆ ಹೋಗ್ತಾರೆ ಅನ್ನೋದು. ಇದೀಗ ಸಂಜು ಟ್ರೇಡಿಂಗ್​ ಬಗ್ಗೆ ಮತ್ತೊಂದು ಅಪ್​ಡೇಟ್ ಸಿಕ್ಕಿದೆ. ಚೆನ್ನೈ ನೋ ಎಂದಾಕ್ಷಣ ಸಂಜು​ಗಾಗಿ ಫ್ರಾಂಚೈಸಿಗಳು ಮುಗಿ ಬಿದ್ದಿವೆ.

ರಾಜಸ್ಥಾನ್ ರಾಯಲ್ಸ್​​ ಡಿಮ್ಯಾಂಡ್!

ಸೀಸನ್​​-18ರಿಂದಲೂ ಸಂಜು ಚೆನ್ನೈ ಸೇರ್ತಾರೆ. ಯೆಲ್ಲೋ ಆರ್ಮಿ ನಾಯಕರಾಗ್ತಾರೆ ಎಂಬ ಸುದ್ದಿ ಇತ್ತು. ಸಂಜು ಆರ್​ಆರ್​​ಗೆ ಯಾವಾಗ ಟ್ರೇಡ್ ಮಾಡಿ ಅಂಡ್ ರಿಲೀಸ್ ಮಾಡಿ ಎಂದರೋ ಆಗಲೇ 100 ಪರ್ಸೆಟ್ ಇವರು ಚೆನ್ನೈ ಸೇರ್ತಾರೆ ಅನ್ನೋದು ಗ್ಯಾರಂಟಿ ಎನ್ನಲಾಗ್ತಿತ್ತು. ಆದ್ರೀಗ ಸಂಜು ಸ್ಯಾಮ್ಸನ್ ಕನಸಿಗೆ ಅಲ್ಪ ವಿರಾಮ ಬಿದ್ದಿದೆ. ಇದಕ್ಕೆ ಕಾರಣ ಆರ್​ಆರ್​ ಡಿಮ್ಯಾಂಡ್​.

ಇದನ್ನೂ ಓದಿ:Asia Cup T20; ಕ್ಯಾಪ್ಟನ್ ಸೂರ್ಯಕುಮಾರ್ ಕೈಯಲ್ಲಿ ಬಲಿಷ್ಠ ತಂಡದ ಆಯ್ಕೆ..!

Sanju Samson (1)

ಆರ್​ಆರ್​ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಚೆನ್ನೈಗೆ ಟ್ರೇಡ್ ಆಗ್ತಾರೆ ಎನ್ನಲಾಗಿತ್ತು. ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್​ ಜೊತೆ ಮಾತುಕತೆಯೂ ನಡೆಸಿರುವ ರಾಜಸ್ಥಾನ್ ರಾಯಲ್ಸ್, ಬಿಗ್ ಮ್ಯಾಚ್​​ ವಿನ್ನರ್​​ಗಳ ಡಿಮ್ಯಾಂಡ್ ಇಟ್ಟಿದೆ. ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಋತುರಾಜ್ ಗಾಯಕ್ವಾಡ್​​​​, ಆಲ್​ರೌಂಡರ್ ರವೀಂದ್ರ ಜಡೇಜಾ ಅಥವಾ ಶಿವಂ ದುಬೆ ಪೈಕಿ ಒಬ್ಬರನ್ನು ಬಿಟ್ಟುಕೊಡುವಂತೆ ಒತ್ತಾಯಿಸಿದೆ. ಮ್ಯಾಚ್ ವಿನ್ನರ್​​ಗಳನ್ನ ಬಿಟ್ಟು ಕೊಡಲು ನೋ ಎಂದಿರುವ ಚೆನ್ನೈ, ಆರ್​​ಆರ್​ ಆಫರ್ ತಿರಸ್ಕರಿಸಿದೆ.

ಕ್ಯಾಪ್ಟನ್​​ಗಾಗಿ ಮುಗಿಬಿದ್ದ ಫ್ರಾಂಚೈಸಿಗಳು

ಅತ್ತ ಚೆನ್ನೈ, ಆರ್​ಆರ್ ಟ್ರೇಡ್​ ವಿಫಲವಾಗಿದ್ದೆ ತಡ ಇತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಸಂಜು ಸ್ಯಾಮ್ಸನ್​​ಗಾಗಿ ಆಫರ್ ನೀಡಿದೆ. ಆಲ್​ರೌಂಡರ್ ವೆಂಕಟೇಶ್ ಅಯ್ಯರ್​​​​​​​​​​​​ ಕೊಟ್ಟು, ಸಂಜು ಸ್ಯಾಮ್ಸನ್​​ನ ಪಡೆಯುವ ಆಫರ್ ನೀಡಿದೆ. ಆ ಮೂಲಕ ವಿಕೆಟ್ ಕೀಪರ್, ಬ್ಯಾಟ್ಸಮನ್ ಅಂಡ್ ಕ್ಯಾಪ್ಟನ್​​​ಗೆ ಗಾಳ ಹಾಕಲು ಮುಂದಾಗಿದೆ. ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಪ್ಲಾನ್​​ನಲ್ಲಿದೆ. 

ಇದನ್ನೂ ಓದಿ:ಸಾರಾಗೆ ಕೈ ಕೊಟ್ರಾ ಕ್ಯಾಪ್ಟನ್ ಗಿಲ್..? ಮುಂಬೈನಲ್ಲಿ ಹೊಸ ಬೆಡಗಿ ಜೊತೆ ಶುಭ್​ಮನ್ ಸುತ್ತಾಟ!

SANJU_SAMSON_New

ಕೊಲ್ಕತ್ತಾ ಮಾತ್ರವಲ್ಲ, ಮುಂಬೈ ಇಂಡಿಯನ್ಸ್​ ಸಹ ಸಂಜು ಸ್ಯಾಮ್ಸನ್ ಕಣ್ಣಿಟ್ಟಿದೆ. ಈಗಾಗಲೇ ಓಪನರ್ ರೋಹಿತ್, ತರೆಮರೆಗೆ ಸರಿಯುವ ಕಾಲ ಸನ್ನಿತವಾಗಿದೆ. ಆಫ್ರಿಕಾದ ರಿಕಲ್ಟನ್ ಬಿಟ್ಟರೆ ಸೂಕ್ತ ವಿಕೆಟ್ ಕೀಪರ್​ ಇಲ್ಲ. ಹೀಗಾಗಿ ಸಂಜು ಅವರನ್ನು ಸೆಳೆದ್ರೆ, ಮುಂಬೈ ಬಲ ಹೆಚ್ಚುತ್ತೆ ಅನ್ನೋದು ಮುಂಬೈ  ಥಿಂಕ್ ಟ್ಯಾಕ್​ಗಳ ಲೆಕ್ಕಾಚಾರ. ಮುಂಬೈ ಯಾರನ್ನು ಬಿಡುತ್ತೆ ಅನ್ನೋದೇ ಪ್ರಶ್ನೆ.

ಇದನ್ನೂ ಓದಿ:ಕನ್ನಡಿಗನ ಕನಸು ಬಹು ದೊಡ್ಡದು.. ಅದೊಂದು ಆಸೆ ಈಡೇರುತ್ತಾ..?

Sanju Samson
ಸಂಜು ಸ್ಯಾಮ್ಸನ್

ಒಂದ್ಕಡೆ ಚೆನ್ನೈ, ಆರ್​ಆರ್​ ಟ್ರೇಡ್ ಡಿಮ್ಯಾಂಡ್​​ಗೆ ನೋ ಎಂದಿದೆ. ಇದರೊಂದಿಗೆ ಶಾರೂಖ್ ಒಡೆತನದ ಕೊಲ್ಕತ್ತಾ, ಮುಂಬೈ ಅಖಾಡಕ್ಕಿಳಿದಿದೆ. ಇದಕ್ಕೆ ಆರ್​ಆರ್ ಅಥವಾ ಸಂಜು ಸ್ಯಾಮ್ಸನ್​​​ ನೋ ಅಂದ್ರೆ ಸಂಜು ಸ್ಯಾಮ್ಸನ್ ಮುಂದಿನ ದಾರಿ ಯಾವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಒಂದೇ ಅನ್ಸರ್​ ರಿಲೀಸ್.

ಮಿನಿ ಹರಾಜಿನಲ್ಲಿ ಚೆನ್ನೈ ಟಾರ್ಗೆಟ್​

ಈಗಾಗಲೇ ಸಂಜು ಡ್ರೇಡ್ ಮಾಡಿ ಇಲ್ಲ ರಿಲೀಸ್ ಮಾಡಿ ಎಂದಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ 100 ಪರ್ಸೆಂಟ್ ರಿಲೀಸ್ ಮಾಡುತ್ತೆ. ಇದರೊಂದಿಗೆ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಂಜುಗೆ ಬರುತ್ತೆ. ಈ ಮಿನಿ ಹರಾಜಿನಲ್ಲಿ ಒಂದೊಳ್ಳೆ ಟೀಮ್​ ಕಟ್ಟಲು, ಚೆನ್ನೈ ಸೂಪರ್ ಕಿಂಗ್ಸ್​ ಸಹ ಸನ್ನದ್ಧವಾಗಿದೆ. ಹೀಗಾಗಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ಟ್ರೇಡ್​ ವಿಂಡೋದಲ್ಲಿ ಸಿಗದಿದ್ದರೇನು. ಮಿನಿ ಹರಾಜಿನಲ್ಲಿ ಸಿಗ್ತಾನೆ ಎಂದು ಚೆನ್ನೈ ಖರೀದಿಸುವಲ್ಲಿ ಅನುಮಾನ ಇಲ್ಲ. ಅಕಸ್ಮಾತ್ ಬೇರೆ ಫ್ರಾಂಚೈಸಿಗಳು, ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ರೆ ಇಬ್ಬರಿಗೂ ನಿರಾಸೆ ತಪ್ಪಿದಲ್ಲ.

ಇದನ್ನೂ ಓದಿ: ಏಷ್ಯಾಕಪ್​ ಸಮರದಲ್ಲಿ ಅಗ್ನಿಪರೀಕ್ಷೆ.. ವರ್ಲ್ಡ್​​​ಕಪ್​ಗಾಗಿ ಸೂರ್ಯ, ಗಿಲ್, ಸಂಜು ಗೆಲ್ಲಲೇಬೇಕಿದೆ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Cricket news in Kannada Sanju Samson
Advertisment