/newsfirstlive-kannada/media/media_files/2025/08/15/suryakumar_sanju-2025-08-15-15-08-49.jpg)
ಬಹು ನಿರೀಕ್ಷಿತ ಏಷ್ಯಾಕಪ್ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ಮಹತ್ವದ ಟೂರ್ನಿಗಾಗಿ ತಂಡಗಳನ್ನು ಪ್ರಕಟಿಸಿರುವ ಪಾಕ್, ಅಫ್ಘಾನ್, ಬಾಂಗ್ಲಾ ಅಭ್ಯಾಸದ ಅಖಾಡಕ್ಕೂ ಇಳಿದಿವೆ. ಈ ನಡುವೆ ಏಷ್ಯಾಕಪ್ನ ಟೀಮ್ ಇಂಡಿಯಾದಲ್ಲಿ ಯಾರೆಲ್ಲಾ ಇರ್ತಾರೆ. ಯಾರಿಗೆ ಶಾಕ್ ಕೊಡ್ತಾರೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆ ಕ್ಯೂರಿಯಾಸಿಟಿ ಅಂತ್ಯವಾಡಲು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸನ್ನದ್ಧರಾಗಿದ್ದಾರೆ. ಇಂದು 1.30ಕ್ಕೆ ಬಿಸಿಸಿಐ ಆಯ್ಕೆ ಸಮಿತಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದೆ.
ಇದನ್ನೂ ಓದಿ: ಕ್ರಿಕೆಟರ್ಸ್ ಪ್ರಸಿದ್ಧ ಮಹಾಕಾಳೇಶ್ವರನ ಮೊರೆ ಹೋಗುವುದು ಯಾಕೆ..?
/filters:format(webp)/newsfirstlive-kannada/media/media_files/2025/08/12/shubman-gill-captain-2025-08-12-17-22-12.jpg)
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾದ ಓಪನರ್ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಾಂಗ್ಲಾ, ಸೌತ್ ಆಫ್ರಿಕಾ ಸರಣಿಯ ಗೆಲುವಿನ ರೂವಾರಿಗಳಾಗಿದ್ದ ಇವರಿಬ್ಬರ ಆಟಕ್ಕೆ ಫಿದಾ ಆಗಿರುವ ಸೆಲೆಕ್ಟರ್ಸ್, ಸಂಜು ಹಾಗೂ ಅಭಿಷೇಕ್ ಶರ್ಮಾರನ್ನೇ ಆರಂಭಿಕರನ್ನಾಗಿ ಪರಿಗಣಿಸಲು ಮುಂದಾಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸಾಲಿಡ್ ಆಟವಾಡಿದ್ದ ಟೆಸ್ಟ್ ಕ್ಯಾಪ್ಟನ್ ಶುಬ್ಮನ್ ಕಮ್ಬ್ಯಾಕ್ ಕನಸು ನುಚ್ಚುನೂರಾಗಲಿದೆ.
ಜೈಸ್ವಾಲ್ ಸ್ಟ್ರಾಂಗ್ ಪ್ಲೇಯರ್
2025ರಿಂದ ಟಿ20ಯಲ್ಲಿ ಕಾಣಿಸಿಕೊಳ್ಳದ ಗಿಲ್ಗೆ ಕೊಕ್ ನೀಡಲು ಮುಂದಾಗಿರುವ ಸೆಲೆಕ್ಷನ್ ಕಮಿಟಿ, ಬದಲಿಯಾಗಿ ಜೈಸ್ವಾಲ್ಗೆ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಅಳೆದು ತೂಗಿ ಲೆಕ್ಕಾಚಾರ ಹಾಕಿಯೇ ಬಂದಿರುವ ಸೆಲೆಕ್ಟರ್ಸ್, ಬ್ಯಾಕ್ ಆಪ್ ಓಪನರ್ ಆಗಿ ಯಶಸ್ವಿ ಜೈಸ್ವಾಲ್ಗೆ ಮಣೆಹಾಕ್ತಿದೆ ಎನ್ನಲಾಗ್ತಿದೆ. ಇದಕ್ಕೆ ಕಾರಣ ಗಿಲ್ ಸ್ಟ್ರೈಕ್ರೇಟ್. 129ರ ಸ್ಟ್ರೈಕ್ರೇಟ್ ಹೊಂದಿರುವ ಶುಬ್ಮನ್, ಟಿ20 ಫಾರ್ಮೆಟ್ಗೆ ಬೇಡ ಅನ್ನೋದು ಸೆಲೆಕ್ಟರ್ಸ್ಗಳ ಲೆಕ್ಕಾಚಾರ. ಹೀಗಾಗಿ ಬ್ಯಾಕ್ ಆಫ್ ಓಪನರ್ ಸ್ಥಾನಕ್ಕೆ ಜೈಸ್ವಾಲ್ ಸ್ಟ್ರಾಂಗ್ ಕಂಟೆಂಡರ್ ಆಗಿ ಕಾಣಿಸಿಕೊಂಡಿದ್ದಾರೆ.
ದುಬೆ, ಸುಂದರ್ ನಡುವೆ ಟಫ್ ಕಾಂಪಿಟೇಷನ್
ಸೂರ್ಯಕುಮಾರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಸ್ಥಾನ ಕನ್ಫರ್ಮ್. ಆಲ್ರೌಂಡರ್ ಕೋಟಾದ ಒಂದು ಸ್ಥಾನಕ್ಕಾಗಿ ಶಿವಂ ದುಬೆ ಹಾಗೂ ವಾಷಿಗ್ಟಂನ್ ಸುಂದರ್ ನಡುವೆ ಮೆಗಾ ಫೈಟ್ ನಡೀತಿದೆ. ಇಬ್ಬರಲ್ಲಿ ಯಾರಿಗೆ ಮಣೆಹಾಕುವುದು ಅನ್ನೋ ತಲೆನೋವು ಬಿಸಿಸಿಐ ಮುಂದಿದೆ. ಯುಎಇ ಪಿಚ್ಗಳಲ್ಲಿ ಸ್ಪಿನ್ ಆಲ್ರೌಂಡರ್ ಬೆಟರ್ ಚಾಯ್ಸ್. ಹೀಗಾಗಿ ವಾಷಿಂಗ್ಟನ್ ಸುಂದರ್ ಕೈ ಮೇಲಾಗುವುದರಲ್ಲಿ ಎರಡು ಮಾತಿಲ್ಲ. ಅಂತಿಮವಾಗಿ ಯಾರಿಗೆ ಮಣೆ ಹಾಕುತ್ತೆ ಅನ್ನೋದೇ ಡೌಟ್.
ಇದನ್ನೂ ಓದಿ: ಬಾಬರ್ ಅಜಮ್, ರಿಜ್ವಾನ್ಗೆ ಭಾರೀ ಅವಮಾನ.. ಏಷ್ಯಾ ಕಪ್ಗೆ ಪಾಕ್ ಆಟಗಾರರ ಹೆಸರು ಘೋಷಣೆ
ಜಿತೇಶ್ ಶರ್ಮಾ ಬ್ಯಾಕ್ ಅಪ್ ಕೀಪರ್!
ಸೀಸನ್-18ರ ಐಪಿಎಲ್ನಲ್ಲಿ ಸಾಲಿಡ್ ಆಟವಾಡಿದ್ದ ಜಿತೇಶ್ ಶರ್ಮಾ, ಏಷ್ಯಾಕಪ್ನಲ್ಲಿ ಸ್ಥಾನ ಪಡೆಯುವುದು ಬಹುತೇಕ ಫಿಕ್ಸ್. ಆರ್ಸಿಬಿ ಪರ ಮ್ಯಾಚ್ ಫಿನಿಷರ್ ಆಗಿ, ಲೋವರ್ ಆರ್ಡರ್ನಲ್ಲಿ ಇಂಪ್ಯಾಕ್ಟ್ ಮೂಡಿಸಿದ್ದ ಜಿತೇಶ್, ಬ್ಯಾಕ್ ಆಫ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ದೃವ್ ಜುರೇಲ್, ರಾಹುಲ್ ಕನಸು ಬಹುತೇಕ ಭಗ್ನ. ಪಾಕೆಟ್ ಮಿಸೈಲ್ ಆಗಿರುವ ಜಿತೇಶ್, ಮುಂದೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.
ಸಿರಾಜ್ ಔಟ್..?
ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ಸಿರಾಜ್, ಓರ್ವ ಫೈಟರ್ನಂತೆ ಹೋರಾಡಿದ್ದರು. ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ್ದ ಸಿರಾಜ್, ಐಪಿಎಲ್ನಲ್ಲೂ ಉತ್ತಮ ಸಾಧನೆ ತೋರಿದ್ರು. ಹೀಗಾಗಿ ಸಿರಾಜ್ಗೆ ಏಷ್ಯಾಕಪ್ ಡೋರ್ ಓಪನ್ ಆಗುತ್ತೆ ಎಂಬ ನಿರೀಕ್ಷೆ ಇತ್ತು. ಆ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಒಂದೇ ಒಂದು ಲೈಕ್, ಬಿಗ್ ಮೆಸೇಜ್ ಕೊಟ್ಟ ವಿರಾಟ್!
ಫಸ್ಟ್ ಚಾಯ್ಸ್ ಪೇಸರ್ಗಳಾಗಿ ಬೂಮ್ರಾ, ಆರ್ಷ್ದೀಪ್ ಸಿಂಗ್ ಕಾಣಿಸಿಕೊಳ್ಳುವುದು ಕನ್ಫರ್ಮ್. ಉಳಿದಿರುವ ಬ್ಯಾಕ್ ಅಪ್ ಪೇಸರ್ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ನಡುವೆ ಬಿಗ್ ಫೈಟ್ ನಡೀತಿದೆ. ಒಂದ್ಕಡೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಸಿದ್ಧ್ ಸ್ಥಾನದ ಕನಸಿನಲ್ಲಿದ್ದರೆ, ಮತೊದ್ಕಡೆ ಗಂಭೀರ್ ಆಪ್ತ ಹರ್ಷಿತ್ ರಾಣಾ ರೇಸ್ನಲ್ಲಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರ ಮೇಲೆ ಸೆಲೆಕ್ಷನ್ ಕಮಿಟಿ ಕೃಪೆ ತೋರುತ್ತೆ ಅನ್ನೋದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ:Asia Cupನಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶನಾ..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ