/newsfirstlive-kannada/media/post_attachments/wp-content/uploads/2023/08/BUS-1.jpg)
ಕೋಲಾರ: ಡ್ರೈವರ್ನ ಸಮಯ ಪ್ರಜ್ಞೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಂಗಳೂರಿನಿಂದ ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ವೇಳೆ, ಮಾರ್ಗ ಮಧ್ಯೆ ಬಸ್ ಡ್ರೈವರ್ ಮಂಜುನಾಥ್ಗೆ ಲಘು ಹೃದಯಾಘಾತವಾಗಿದೆ.
ತಕ್ಷಣವೇ ಮಂಜುನಾಥ್ ತಮ್ಮ ಸಮಯ ಪ್ರಜ್ಞೆಯಿಂದ ಬಸ್ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರೇ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಡ್ರೈವರ್ನ ಈ ಸಮಯ ಪ್ರಜ್ಞೆಯಿಂದ 65 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದ್ದು, ಡ್ರೈವರ್ನ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ