/newsfirstlive-kannada/media/post_attachments/wp-content/uploads/2023/06/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲಪಕ್ಷ, ದ್ವಾದಶಿ ತಿಥಿ, ವಿಶಾಖ ನಕ್ಷತ್ರ ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4:30 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ವ್ಯವಹಾರದಲ್ಲಿ ಅನುಕೂಲವಿದೆ
- ಅಧಿಕವಾದ ಒತ್ತಡ ಇರಲಿದೆ
- ಶತ್ರುಬಾಧೆಯಿಂದ ಸಮಸ್ಯೆ ಆಗಬಹುದು
- ದೂರದ ಆಲೋಚನೆಯನ್ನು ಇಟ್ಟುಕೊಂಡು ಕೆಲಸ ಮಾಡಿ
- ಮಕ್ಕಳಿಗೆ ಸಹಕಾರವನ್ನು ನೀಡಿ
- ಇಂದು ಆರ್ಥಿಕವಾಗಿ ತೊಂದರೆಯಿಲ್ಲ
- ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ವೃಷಭ
- ಸಾಂಸಾರಿಕವಾಗಿ ಉತ್ತಮವಾದ ನಿರ್ಧಾರ ಮಾಡುತ್ತೀರಿ
- ಮಕ್ಕಳಿಂದ ಪರಿಪೂರ್ಣವಾದ ಸಹಾಯ, ಸಹಕಾರ ಸಿಗಲಿದೆ
- ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತೀರಿ
- ಹಲವರಿಗೆ ಸಹಾಯ ಮಾಡುತ್ತೀರಿ
- ಸಮಾಜದಲ್ಲಿ ನಿಮ್ಮ ಹೆಸರು,ಕೀರ್ತಿ ರಾರಾಜಿಸಲಿದೆ
- ತಾಯಿಯವರಿಗೆ ತೊಂದರೆಯ ಸೂಚನೆ ಇದೆ ಎಚ್ಚರಿಕೆವಹಿಸಿ
- ನವಗ್ರಹರ ಆರಾಧನೆ ಮಾಡಿ
ಮಿಥುನ
- ಆರೋಗ್ಯ ಸುಧಾರಣೆಯಾಗುವ ಸೂಚನೆ ಇದೆ
- ಸ್ಥಿರಾಸ್ತಿಯ ಲಾಭ ಆಗಲಿದೆ
- ಮಕ್ಕಳ ಬಗ್ಗೆ ಚಿಂತೆ ಪಡುತ್ತೀರಿ
- ದಾಯಾದಿಗಳಿಂದ ಅವಮಾನ ಆಗಬಹುದು
- ಸ್ತ್ರೀಯರಿಗೆ ಹಣದ ನಷ್ಟ ಆಗಲಿದೆ
- ಮನಸ್ತಾಪಗಳು ಹೆಚ್ಚಾಗಬಹುದು
- ಕುಲದೇವತಾ ಆರಾಧನೆ ಮಾಡಿ
ಕಟಕ
- ನೀವು ಅಂದುಕೊಂಡ ಕೆಲಸ ಆಗಲಿದೆ
- ಮನೆಯಲ್ಲಿ, ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು
- ಅನಗತ್ಯವಾದ ಸಲಹೆಯಿಂದ ಬೇಸರ ಆಗಲಿದೆ
- ಬಂಧುಗಳಲ್ಲಿ ವಿರಸ ಆಗಲಿದೆ
- ಮಕ್ಕಳ ಜೊತೆ ಮುಕ್ತವಾದ ಚರ್ಚೆ ಮಾಡಿ
- ಇಂದು ಗೃಹೋಪಯೋಗಿ ವಸ್ತು ನಷ್ಟ ಆಗಬಹುದು
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
- ಕೌಟುಂಬಿಕವಾದ ಸಮಸ್ಯೆ ಉಂಟಾಗಬಹುದು
ಸಿಂಹ
- ತಾಯಿಯವರ ಜೊತೆ ಜಗಳ ಆಗಬಹುದು
- ಅನಿರೀಕ್ಷಿತವಾಗಿ ಧನ ಸಹಾಯ ಆಗಲಿದೆ
- ಸಾಲದ ವಿಚಾರಕ್ಕೆ ಬೇಸರ ಉಂಟಾಗಬಹುದು
- ಸ್ನೇಹಿತರಲ್ಲಿ ಮನಸ್ತಾಪ ಇರಲಿದೆ
- ಮನೆಯವರ ಮಾತಿನಿಂದ ಸಮಾಧಾನ ಆಗಲಿದೆ
- ರಾತ್ರಿ ವೇಳೆಗೆ ಸಿಹಿ ಸುದ್ದಿಯನ್ನು ಕೇಳುತ್ತೀರಿ
- ಪಾರಿಜಾತ ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವ್ಯವಹಾರದ ಚಿಂತೆ ಕಾಡಬಹುದು
- ಆಲೋಚನೆ ಮಾಡದೇ ಮಾಡುವ ಕೆಲಸದಿಂದ ತೊಂದರೆ ಉಂಟಾಗಬಹುದು
- ದಂಡ ಕಟ್ಟುವ ಪರಿಸ್ಥಿತಿ ಬರಬಹುದು
- ಮಾನಸಿಕ ಅಸಮಾಧಾನ ಕಾಡಬಹುದು
- ಬಂಧುಗಳಿಂದ ಅಪಹಾಸ್ಯಕ್ಕೆ ಒಳಗಾಗಬಹುದು
- ಅನಗತ್ಯ ದುಂದು ವೆಚ್ಚ ಮಾಡಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನ ಶ್ರವಣ ಮಾಡಿ
ತುಲಾ
- ಮನಸ್ಸಿಗೆ ಹಿತಕರವಾದ ಕೆಲಸ ಮಾಡಬಹುದು
- ಎಲ್ಲ ಕಡೆಯಿಂದ ಗೌರವ, ಮಾನ್ಯತೆ ಸಿಗಬಹುದು
- ಸಾಧು ಸಂತರ ಭೇಟಿ ಮಾಡುವ ಅವಕಾಶ ಸಿಗಬಹುದು
- ಆತ್ಮೋಧಾರಕ್ಕೆ ಬೇಕಾಗಿರುವ ಎಲ್ಲ ಮಾಹಿತಿ ಸಿಗಬಹುದು
- ವಿರೋಧಿಗಳ ಸಮ್ಮುಖದಲ್ಲಿ ಗೌರವ, ಸನ್ಮಾನ ಸಿಗಬಹುದು
- ಎಲ್ಲರನ್ನೂ ಒಟ್ಟು ಗೂಡಿಸುವ ಸಾಮರ್ಥ್ಯ ತೋರುವಿರಿ
- ಗಣಪತಿಯನ್ನ ಆರಾಧನೆ ಮಾಡಿ
ವೃಶ್ಚಿಕ
- ಸ್ವಂತ ಉದ್ಯೋಗ ಮಾಡುವ ಆಸೆ ಆದರೆ ನೆರವೇರುವುದಿಲ್ಲ
- ಅಕ್ಕಪಕ್ಕದವರ ಕಿರಿಕಿರಿ ಉಂಟಾಗಬಹುದು
- ಇಂದು ಆಭರಣ ಪ್ರಾಪ್ತಿ ಆಗಬಹುದು
- ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಪ್ರಯಾಣದ ವಿಳಂಬ ಅದರಿಂದ ನಷ್ಟವಾಗಬಹುದು
- ದೊಡ್ಡವರ ಮಾರ್ಗದರ್ಶನ ಸಿಗಬಹುದು
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ಧನುಸ್ಸು
- ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ತಾತ್ಸಾರ ಬೇಡ
- ಇಂದು ಹಳೆಯ ಹಣ ಬರಬಹುದು
- ಮಕ್ಕಳಿಂದ ಸಹಾಯ ಸಿಗಬಹುದು
- ದಿನ ಚೆನ್ನಾಗಿದೆ ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಿ
- ಯಾರೊಂದಿಗೂ ಮನಸ್ತಾಪ ಬೇಡ
- ಅಪರಿಚಿತರನ್ನು ಯಾವುದೇ ಕಾರಣಕ್ಕೂ ನಂಬಬೇಡಿ
- ಈಶ್ವರರಾಧನೆ ಮಾಡಿ
ಮಕರ
- ಬಂಧುಗಳಿಂದ ವ್ಯವಹಾರದಲ್ಲಿ ಲಾಭ ಸಿಗಬಹುದು
- ವಿರೋಧಿಗಳಿಂದ ದೂರ ಉಳಿದುಕೊಳ್ಳಿ
- ನಿಮ್ಮ ಅಭಿವೃದ್ಧಿಯನ್ನು ಸಹಿಸದವರು ಇರುತ್ತಾರೆ ಎಚ್ಚರ
- ವಂಚಕರಿಂದ ತೊಂದರೆ ಆಗಬಹುದು
- ನೀವು ಸಮಾಜಕ್ಕೆ ಹೊಂದಿಕೊಳ್ಳಬೇಕಾಗುತ್ತೆ
- ಮಕ್ಕಳ ವಿಚಾರದಲ್ಲಿ ತುಂಬಾ ಆಲೋಚಿಸಿ ನಿರ್ಧಾರ ಮಾಡಿ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ಕುಂಭ
- ಮನೆಯಲ್ಲಿ ದುರಸ್ಥಿ ಕಾರ್ಯ ಅದರಿಂದ ಹಣ ಖರ್ಚಾಗಬಹುದು
- ಕಾರ್ಯ ಹಿನ್ನಡೆಯಿಂದ ಬೇಸರ ಉಂಟಾಗಬಹುದು
- ಹೆಂಗಸರಿಗೆ ಅನುಕೂಲಕರ ದಿನ
- ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯ ಸೂಚನೆ
- ಕಬ್ಬಿಣ ವ್ಯಾಪಾರಿಗಳಿಗೆ ಅನುಕೂಲವಾಗಬಹುದು
- ನರಸಿಂಹನನ್ನು ಆರಾಧನೆ ಮಾಡಿ
ಮೀನಾ
- ಮಾನಸಿಕವಾಗಿ ತುಂಬಾ ಸಂತೋಷ ಪಡಬಹುದು
- ಎಲ್ಲರ ಸಹಕಾರ ಸಿಗಬಹುದು
- ಭೂ ಸಂಬಂಧಿ ಶುಭಯೋಗವಿದೆ
- ವಾಹನದಿಂದ ತೊಂದರೆ ಉಂಟಾಗಬಹುದು
- ತಾಯಿಯವರ ಪ್ರೀತಿ, ಹಣ ಸಿಗಬಹುದು
- ಸಹೋದರ ಮಧ್ಯ ಜಗಳ ಸಂಭವವಿದೆ ಎಚ್ಚರ
- ಇಷ್ಟದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ