ಗೆದ್ದ ಪದಕಗಳನ್ನ ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ!

author-image
admin
Updated On
ಗೆದ್ದ ಪದಕಗಳನ್ನ ಗಂಗಾ ನದಿಗೆ ಎಸೆಯಲು ಕುಸ್ತಿಪಟುಗಳ ನಿರ್ಧಾರ!
Advertisment
  • ಬ್ರಿಜ್ ಭೂಷಣ್ ಸಿಂಗ್​ ಅವರನ್ನು ಬಂಧಿಸಲು ಆಗ್ರಹ
  • ನ್ಯಾಯ ಸಿಗದೇ ಹೋದರೆ ಪದಕವನ್ನು ನದಿಗೆ ಎಸೆಯಲು ಕುಸ್ತಿಪಟುಗಳ ತೀರ್ಮಾನ
  • ಗಂಗಾ ನದಿಗೆ ಗೆದ್ದ ಪದಗಳನ್ನು ಎಸೆಯಲು ಮುಂದಾಗಿರುವ ಕುಸ್ತಿಪಟುಗಳು

ಡಬ್ಲ್ಯೂಎಫ್​ಐ (Wrestling Federation of India) ಅಧ್ಯಕ್ಷ ಬ್ರಿಜ್ ಭೂಷಣ್ ಅವರನ್ನು ಬಂಧಿಸಿ, ನಮಗೆ ಆಗಿರುವ ಲೈಂಗಿಕ ಕಿರುಕುಳಕ್ಕೆ ನ್ಯಾಯ ಕೊಡಿಸಿ ಎಂದು ಕುಸ್ತಿಪಟುಗಳು ಗೋಗರೆದು ಪ್ರತಿಭಟನೆ ಮಾಡಿದರು ಸಹ ಅವರ ಕೂಗಿಗೆ ಯಾರು ಪ್ರತಿಕ್ರಿಯಿಸುತ್ತಿಲ್ಲ. ಮತ್ತೊಂದೆಡೆ ಪೊಲೀಸರೇ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದರಿಂದ ಬೇಸತ್ತು ಕುಸ್ತಿಪಟುಗಳು ಹೊಸದೊಂದು ನಿರ್ಧಾರಕ್ಕೆ ಬಂದಿದ್ದಾರೆ. ಒಲಿಂಪಿಕ್, ಕಾಮನ್ ವೆಲ್ತ್ ಗೇಮ್ಸ್ ಪದಕಗಳನ್ನು ಗಂಗಾ ನದಿಗೆ ಎಸೆಯಲು ಮುಂದಾಗಿದ್ದಾರೆ

ಇಂದು ಸಂಜೆ ‌ 6 ಗಂಟೆಗೆ ಹರಿದ್ವಾರದ ಗಂಗಾ ನದಿಗೆ ಪದಕ ಎಸೆಯಲು ಕುಸ್ತಿಪಟುಗಳ ನಿರ್ಧಾರಿಸಿದ್ದಾರೆ. ಭಜರಂಗ ಪೂನಿಯಾ ಪದಕಗಳನ್ನು ನದಿಗೆ ಎಸೆಯುವ ‌ತೀರ್ಮಾನವನ್ನು ಪ್ರಕಟಿಸಿದ್ದಾರೆ.

ಕುಸ್ತಿಪಟುಗಳ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ ಮೇಲೆ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ಮಾಡಿ ಬಂಧಿಸಿ ಎಂದು ಒತ್ತಾಯಿಸಿದರು ನ್ಯಾಯ ಸಿಗದ ಹಿನ್ನಲೆ, ಭಜರಂಗ ಪೂನಿಯಾ, ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ರಿಂದ ಪದಕ ಎಸೆಯುವ ತೀರ್ಮಾನಕ್ಕೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment