ಟಿ20 ವಿಶ್ವಕಪ್ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಫೈಟ್
ಅಮೆರಿಕ ಎದುರು ಸೋತು ಸುಣ್ಣವಾಗಿರುವ ಪಾಕ್
ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಭಾರತ
ಇಂಡೋ ಪಾಕ್ ಮ್ಯಾಚ್ಗೆ ಕೌಂಟ್ಡೌನ್ ಶುರುವಾಗಿದೆ. ಬದ್ಧವೈರಿಗಳ ಮುಖಾಮುಖಿಯಲ್ಲಿ ಯಾರ್ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಮೊದಲ ಪಂದ್ಯ ಸೋತಿರುವ ಪಾಕ್, ಟೀಮ್ ಇಂಡಿಯಾ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಪಾಕ್, ಹೊಸ ಗೇಮ್ ಪ್ಲಾನ್ನೊಂದಿಗೆ ಕಣಕ್ಕಿಳಿಯುತ್ತಿದೆ.
ಭಾರತ, ಪಾಕ್ ನಡುವಿನ ಹೈವೋಲ್ಟೇಜ್ಗೆ ಜಸ್ಟ್ ಒಂದೇ ಒಂದು ದಿನ ಬಾಕಿಯಿದೆ. ಪ್ರತಿಷ್ಠಿತ ಪಂದ್ಯ ಗೆಲ್ಲೋದೇ ಉಭಯ ತಂಡಗಳ ಪರಮ ಗುರಿಯಾಗಿದೆ. ಇದಕ್ಕಾಗಿ ನಾನಾ ತಂತ್ರಗಳನ್ನೇ ಹೆಣೆಯುತ್ತಿವೆ. ಅಮೆರಿಕಾ ಎದುರು ಸೋತಿರುವ ಪಾಕ್, ಈ ವಿಚಾರದಲ್ಲಿ ಒಂದೆಜ್ಜೆ ಮುಂದಿದೆ.
ಇದನ್ನೂ ಓದಿ:ಜೆಡಿಎಸ್ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!
ಹೌದು! ಅಮೆರಿಕಾ ಎದುರು ಮುಗ್ಗರಿಸಿರುವ ಪಾಕ್ಗೆ, ಟೀಮ್ ಇಂಡಿಯಾ ಎದುರಿನ ಪಂದ್ಯ ಡು ಆರ್ ಡೈ ಆಗಿದೆ. ಇದೊಂದು ಪಂದ್ಯ ಸೋತ್ರೇ ಟಿ20 ವಿಶ್ವಕಪ್ನಿಂದ ಬಹುತೇಕ ಹೊರಬೀಳುತ್ತೆ. ಹೀಗಾಗಿ ಶತಯ ಗತಾಯ ಗೆಲ್ಲೋಕೆ ಪಣ ತೊಟ್ಟಿರುವ ಪಾಕ್, ಟೀಮ್ ಇಂಡಿಯಾದ ಓರ್ವ ಬ್ಯಾಟರ್ನ ಟಾರ್ಗೆಟ್ ಮಾಡಲು ಹೊರಟಿದೆ.
ರೋಹಿತ್-ಕೊಹ್ಲಿ ಅಲ್ಲ.. ಸೂರ್ಯನೇ ಟಾರ್ಗೆಟ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಪಾಕ್ ಪಾಲಿಗೆ ಬಿಗ್ ಥ್ರೆಟ್ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, ಪಾಕ್ ದೃಷ್ಟಿ ಮಾತ್ರ ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ ಹೊರತಾಗಿ ಸೂರ್ಯ ಮೇಲೆ ಬಿದ್ದಿದೆ. ಟಿ20 ಸ್ಪೆಷಲಿಸ್ಟ್ ಬಗ್ಗೆನೇ ಕ್ಯಾಪ್ಟನ್ ಬಾಬರ್ ಆ್ಯಂಡ್ ಕೋಚ್ ಗ್ಯಾರಿ ಕಸ್ಟ್ರನ್ ತಲೆ ಕಡೆಸಿಕೊಂಡಿದ್ದಾರೆ. ಇದಕ್ಕಾಗಿ ಟೀಮ್ ಮೀಟಿಂಗ್ನಲ್ಲಿ ಬಿಸಿಬಿಸಿ ಚರ್ಚೆ ನಡೆಸಿರುವ ಪಾಕ್, ಸೂರ್ಯ ಆಟಕ್ಕೆ ಬ್ರೇಕ್ ಹಾಕಲು ಬಾರೀ ರಣತಂತ್ರ ರೂಪಿಪಿಸಿದೆ. ಇದಕ್ಕೆ ಕಾರಣ ಸೂರ್ಯನ ಬ್ಯಾಟಿಂಗ್.
ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. ಇಲ್ಲಿಯೂ ಭಾರತೀಯರದ್ದೇ ದರ್ಬಾರ್..!
ಪಾಕ್ ಪಾಲಿಗೆ ಸೂರ್ಯನೇ ಟಾರ್ಗೆಟ್ ಏಕೆ..?
ಸೂರ್ಯ.. ಟಿ20 ಕ್ರಿಕೆಟ್ನ ಮೋಸ್ಟ್ ಡೇಂಜರಸ್ ಬ್ಯಾಟರ್. ಕ್ರೀಸ್ನ ಇರುವಷ್ಟು ತನಕ ಹೊಡಿಬಡಿ ಆಟಕ್ಕೆ ಮುಂದಾಗುವ ಸೂರ್ಯ, ಎದುರಾಳಿ ಪಾಲಿಗೆ ವಿಲನ್ ಆಗಿ ಕಾಡ್ತಾರೆ. ಬೌಲರ್ಗಳ ಲೆಕ್ಕಚಾರಗಳನ್ನ ಉಲ್ಟಾ ಮಾಡುವ ಸೂರ್ಯ, ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್.. ಹೀಗಾಗಿಯೇ ಸೂರ್ಯಗೆ ಬ್ರೇಕ್ ಹಾಕುವುದೇ ಪಾಕ್ನ ಅಜೆಂಡಾ.
3 ಓವರ್ ಕ್ರೀಸ್ನಲ್ಲಿ ಉಳಿದ್ರೆ 50 ರನ್ ಗಡಿ ದಾಟುತ್ತೆ
ಸೂರ್ಯ ಪಕ್ಕ ಮಾಸ್ ಬ್ಯಾಟರ್. ಜಸ್ಟ್ ಕ್ರೀಸ್ಗೆ ಎಂಟ್ರಿ ನೀಡುತ್ತಿದ್ದಂತೆ ಅಷ್ಟು ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸ್ತಾರೆ. ಜಸ್ಟ್ ಮೂರು ಓವರ್ ಕ್ರೀಸ್ನಲ್ಲಿ ಉಳಿದ್ರೆ ಸಾಕು, 200 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ ಬೌಂಡರಿ, ಸಿಕ್ಸರ್ಗಳ ಸುಮಾಮಿ ಸೃಷ್ಟಿಸಿಬಿಡ್ತಾರೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯಲು ಸೀಕ್ರೆಟ್ ಗೇಮ್ ರೂಪಿಸ್ತಿದೆ.
ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್ಮೆಂಟ್..!
ಗೇಮ್ ಚೇಂಜರ್ ಅಂಡ್ ಫಿನಿಷರ್..!
ಸೂರ್ಯ ಅಂದ್ರೆನೇ ಟಿ20 ಫಾರ್ಮೆಟ್ನ ಬಾಪ್. ಕ್ಷಣಾರ್ಧದಲ್ಲೇ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸೂರ್ಯ, ಕ್ರೀಸ್ನಲ್ಲಿ ಇದ್ದಷ್ಟು ಹೊತ್ತು ಮೋಸ್ಟ್ ಡೇಂಜರಸ್. ಅಷ್ಟೇ ಅಲ್ಲ.! ಮ್ಯಾಚ್ ಗೆಲ್ಲಿಸಿಕೊಡೋದ್ರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ ಫಿನಿಷರ್ ಸೂರ್ಯನ ಆಟಕ್ಕೆ ಬ್ರೇಕ್ ಹಾಕಿದ್ರೆ, ಪಾಕ್ ಗೆಲುವಿನ ಹಾದಿ ಸುಲಭವಾಗುತ್ತೆ. ಇದೇ ಕಾರಣಕ್ಕೆ ಸೂರ್ಯಗೆ ಬ್ರೇಕ್ ಹಾಕಲು ಟೊಂಕಕಟ್ಟಿ ನಿಂತಿದೆ.
ಪಾಕ್ ಬೌಲಿಂಗ್ ದಾಳಿ ಧ್ವಂಸ ಗ್ಯಾರಂಟಿ..!
ಅಟ್ಯಾಕಿಂಗ್ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಸೂರ್ಯ, ಘಟಾನುಘಟಿ ಬೌಲರ್ಗಳ ಪಾಲಿನ ವಿಲನ್. ಎಂಥಹ ಬೌಲರ್ ಆಗಿರಲಿ, ಸುಲಲಿತವಾಗಿ ಬ್ಯಾಟ್ ಬೀಸ್ತಾರೆ. ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸ್ತಾರೆ. ಈತ ಬ್ಯಾಟಿಂಗ್ ನಡೆಸಿದ್ರೆ, ಮುಗೀತು ಬೌಲರ್ ಮೈಂಡ್ ಬ್ಲಾಕ್ ಆಗುತ್ತೆ. ಕ್ಯಾಪ್ಟನ್ ಫೀಲ್ಡಿಂಗ್ ಸೆಟ್ ಮಾಡಬೇಕಾದ್ರೆ, ಹರಸಾಹಸವನ್ನೇ ಮಾಡಬೇಕಾಗುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯೋದೇ ಪಾಕ್ ಟಾರ್ಗೆಟ್.
ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
ಸೂರ್ಯ ಇದ್ದಷ್ಟು ಹೊತ್ತು ಇತರರಿಗೆ ಫ್ರೀ ಹ್ಯಾಂಡ್..!
ಸೂರ್ಯ ಕ್ರೀಸ್ನಲ್ಲಿದ್ರೆ, ಎದುರಾಳಿಗೆ ಟೆನ್ಶನ್. ಇತರೆ ಬ್ಯಾಟರ್ಗಳಿಗೆ ಟೆನ್ಶನ್ ಫ್ರೀ. ಯಾಕಂದ್ರೆ, ಸೂರ್ಯನ ರೌದ್ರವತಾರದ ಬ್ಯಾಟಿಂಗ್ ಆ ಮಟ್ಟಕ್ಕಿರುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆದು, ಇತರೆ ಬ್ಯಾಟರ್ಗಳ ಮೇಲೆ ಒತ್ತಡ ಹೇರುವುದೇ ಪಾಕ್ನ ಮೊದಲ ಧ್ಯೇಯವಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.
ವಿಶೇಷ ವರದಿ: ಸಂತೋಷ್
ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟಿ20 ವಿಶ್ವಕಪ್ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಫೈಟ್
ಅಮೆರಿಕ ಎದುರು ಸೋತು ಸುಣ್ಣವಾಗಿರುವ ಪಾಕ್
ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಭಾರತ
ಇಂಡೋ ಪಾಕ್ ಮ್ಯಾಚ್ಗೆ ಕೌಂಟ್ಡೌನ್ ಶುರುವಾಗಿದೆ. ಬದ್ಧವೈರಿಗಳ ಮುಖಾಮುಖಿಯಲ್ಲಿ ಯಾರ್ ಗೆಲ್ತಾರೆ ಎಂಬ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಮೊದಲ ಪಂದ್ಯ ಸೋತಿರುವ ಪಾಕ್, ಟೀಮ್ ಇಂಡಿಯಾ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕಾಗಿ ಪಾಕ್, ಹೊಸ ಗೇಮ್ ಪ್ಲಾನ್ನೊಂದಿಗೆ ಕಣಕ್ಕಿಳಿಯುತ್ತಿದೆ.
ಭಾರತ, ಪಾಕ್ ನಡುವಿನ ಹೈವೋಲ್ಟೇಜ್ಗೆ ಜಸ್ಟ್ ಒಂದೇ ಒಂದು ದಿನ ಬಾಕಿಯಿದೆ. ಪ್ರತಿಷ್ಠಿತ ಪಂದ್ಯ ಗೆಲ್ಲೋದೇ ಉಭಯ ತಂಡಗಳ ಪರಮ ಗುರಿಯಾಗಿದೆ. ಇದಕ್ಕಾಗಿ ನಾನಾ ತಂತ್ರಗಳನ್ನೇ ಹೆಣೆಯುತ್ತಿವೆ. ಅಮೆರಿಕಾ ಎದುರು ಸೋತಿರುವ ಪಾಕ್, ಈ ವಿಚಾರದಲ್ಲಿ ಒಂದೆಜ್ಜೆ ಮುಂದಿದೆ.
ಇದನ್ನೂ ಓದಿ:ಜೆಡಿಎಸ್ಗೆ ಸಿಕ್ಕೇಬಿಟ್ರು ಮುಂದಿನ ಉತ್ತರಾಧಿಕಾರಿ..? ಚುನಾವಣಾ ಫಲಿತಾಂಶ ಬೆನ್ನಲ್ಲೇ ಮಹತ್ವದ ಬೆಳವಣಿಗೆ..!
ಹೌದು! ಅಮೆರಿಕಾ ಎದುರು ಮುಗ್ಗರಿಸಿರುವ ಪಾಕ್ಗೆ, ಟೀಮ್ ಇಂಡಿಯಾ ಎದುರಿನ ಪಂದ್ಯ ಡು ಆರ್ ಡೈ ಆಗಿದೆ. ಇದೊಂದು ಪಂದ್ಯ ಸೋತ್ರೇ ಟಿ20 ವಿಶ್ವಕಪ್ನಿಂದ ಬಹುತೇಕ ಹೊರಬೀಳುತ್ತೆ. ಹೀಗಾಗಿ ಶತಯ ಗತಾಯ ಗೆಲ್ಲೋಕೆ ಪಣ ತೊಟ್ಟಿರುವ ಪಾಕ್, ಟೀಮ್ ಇಂಡಿಯಾದ ಓರ್ವ ಬ್ಯಾಟರ್ನ ಟಾರ್ಗೆಟ್ ಮಾಡಲು ಹೊರಟಿದೆ.
ರೋಹಿತ್-ಕೊಹ್ಲಿ ಅಲ್ಲ.. ಸೂರ್ಯನೇ ಟಾರ್ಗೆಟ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಪಾಕ್ ಪಾಲಿಗೆ ಬಿಗ್ ಥ್ರೆಟ್ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆ. ಆದ್ರೆ, ಪಾಕ್ ದೃಷ್ಟಿ ಮಾತ್ರ ರೋಹಿತ್ ಶರ್ಮಾ ಆ್ಯಂಡ್ ವಿರಾಟ್ ಕೊಹ್ಲಿ ಹೊರತಾಗಿ ಸೂರ್ಯ ಮೇಲೆ ಬಿದ್ದಿದೆ. ಟಿ20 ಸ್ಪೆಷಲಿಸ್ಟ್ ಬಗ್ಗೆನೇ ಕ್ಯಾಪ್ಟನ್ ಬಾಬರ್ ಆ್ಯಂಡ್ ಕೋಚ್ ಗ್ಯಾರಿ ಕಸ್ಟ್ರನ್ ತಲೆ ಕಡೆಸಿಕೊಂಡಿದ್ದಾರೆ. ಇದಕ್ಕಾಗಿ ಟೀಮ್ ಮೀಟಿಂಗ್ನಲ್ಲಿ ಬಿಸಿಬಿಸಿ ಚರ್ಚೆ ನಡೆಸಿರುವ ಪಾಕ್, ಸೂರ್ಯ ಆಟಕ್ಕೆ ಬ್ರೇಕ್ ಹಾಕಲು ಬಾರೀ ರಣತಂತ್ರ ರೂಪಿಪಿಸಿದೆ. ಇದಕ್ಕೆ ಕಾರಣ ಸೂರ್ಯನ ಬ್ಯಾಟಿಂಗ್.
ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. ಇಲ್ಲಿಯೂ ಭಾರತೀಯರದ್ದೇ ದರ್ಬಾರ್..!
ಪಾಕ್ ಪಾಲಿಗೆ ಸೂರ್ಯನೇ ಟಾರ್ಗೆಟ್ ಏಕೆ..?
ಸೂರ್ಯ.. ಟಿ20 ಕ್ರಿಕೆಟ್ನ ಮೋಸ್ಟ್ ಡೇಂಜರಸ್ ಬ್ಯಾಟರ್. ಕ್ರೀಸ್ನ ಇರುವಷ್ಟು ತನಕ ಹೊಡಿಬಡಿ ಆಟಕ್ಕೆ ಮುಂದಾಗುವ ಸೂರ್ಯ, ಎದುರಾಳಿ ಪಾಲಿಗೆ ವಿಲನ್ ಆಗಿ ಕಾಡ್ತಾರೆ. ಬೌಲರ್ಗಳ ಲೆಕ್ಕಚಾರಗಳನ್ನ ಉಲ್ಟಾ ಮಾಡುವ ಸೂರ್ಯ, ಟೀಮ್ ಇಂಡಿಯಾದ ಬಿಗ್ ಮ್ಯಾಚ್ ವಿನ್ನರ್.. ಹೀಗಾಗಿಯೇ ಸೂರ್ಯಗೆ ಬ್ರೇಕ್ ಹಾಕುವುದೇ ಪಾಕ್ನ ಅಜೆಂಡಾ.
3 ಓವರ್ ಕ್ರೀಸ್ನಲ್ಲಿ ಉಳಿದ್ರೆ 50 ರನ್ ಗಡಿ ದಾಟುತ್ತೆ
ಸೂರ್ಯ ಪಕ್ಕ ಮಾಸ್ ಬ್ಯಾಟರ್. ಜಸ್ಟ್ ಕ್ರೀಸ್ಗೆ ಎಂಟ್ರಿ ನೀಡುತ್ತಿದ್ದಂತೆ ಅಷ್ಟು ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸ್ತಾರೆ. ಜಸ್ಟ್ ಮೂರು ಓವರ್ ಕ್ರೀಸ್ನಲ್ಲಿ ಉಳಿದ್ರೆ ಸಾಕು, 200 ಪ್ಲಸ್ ಸ್ಟ್ರೈಕ್ರೇಟ್ನಲ್ಲಿ ಬೌಂಡರಿ, ಸಿಕ್ಸರ್ಗಳ ಸುಮಾಮಿ ಸೃಷ್ಟಿಸಿಬಿಡ್ತಾರೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯಲು ಸೀಕ್ರೆಟ್ ಗೇಮ್ ರೂಪಿಸ್ತಿದೆ.
ಇದನ್ನೂ ಓದಿ:ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ BCCI.. ನಿರೀಕ್ಷೆಗಳ ತಲೆಕೆಳಗಾಗಿಸಿದ ಟೀಮ್ ಮ್ಯಾನೇಜ್ಮೆಂಟ್..!
ಗೇಮ್ ಚೇಂಜರ್ ಅಂಡ್ ಫಿನಿಷರ್..!
ಸೂರ್ಯ ಅಂದ್ರೆನೇ ಟಿ20 ಫಾರ್ಮೆಟ್ನ ಬಾಪ್. ಕ್ಷಣಾರ್ಧದಲ್ಲೇ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸೂರ್ಯ, ಕ್ರೀಸ್ನಲ್ಲಿ ಇದ್ದಷ್ಟು ಹೊತ್ತು ಮೋಸ್ಟ್ ಡೇಂಜರಸ್. ಅಷ್ಟೇ ಅಲ್ಲ.! ಮ್ಯಾಚ್ ಗೆಲ್ಲಿಸಿಕೊಡೋದ್ರಲ್ಲಿ ಎರಡು ಮಾತೇ ಇಲ್ಲ. ಹೀಗಾಗಿ ಫಿನಿಷರ್ ಸೂರ್ಯನ ಆಟಕ್ಕೆ ಬ್ರೇಕ್ ಹಾಕಿದ್ರೆ, ಪಾಕ್ ಗೆಲುವಿನ ಹಾದಿ ಸುಲಭವಾಗುತ್ತೆ. ಇದೇ ಕಾರಣಕ್ಕೆ ಸೂರ್ಯಗೆ ಬ್ರೇಕ್ ಹಾಕಲು ಟೊಂಕಕಟ್ಟಿ ನಿಂತಿದೆ.
ಪಾಕ್ ಬೌಲಿಂಗ್ ದಾಳಿ ಧ್ವಂಸ ಗ್ಯಾರಂಟಿ..!
ಅಟ್ಯಾಕಿಂಗ್ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಸೂರ್ಯ, ಘಟಾನುಘಟಿ ಬೌಲರ್ಗಳ ಪಾಲಿನ ವಿಲನ್. ಎಂಥಹ ಬೌಲರ್ ಆಗಿರಲಿ, ಸುಲಲಿತವಾಗಿ ಬ್ಯಾಟ್ ಬೀಸ್ತಾರೆ. ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸ್ತಾರೆ. ಈತ ಬ್ಯಾಟಿಂಗ್ ನಡೆಸಿದ್ರೆ, ಮುಗೀತು ಬೌಲರ್ ಮೈಂಡ್ ಬ್ಲಾಕ್ ಆಗುತ್ತೆ. ಕ್ಯಾಪ್ಟನ್ ಫೀಲ್ಡಿಂಗ್ ಸೆಟ್ ಮಾಡಬೇಕಾದ್ರೆ, ಹರಸಾಹಸವನ್ನೇ ಮಾಡಬೇಕಾಗುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆಯೋದೇ ಪಾಕ್ ಟಾರ್ಗೆಟ್.
ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
ಸೂರ್ಯ ಇದ್ದಷ್ಟು ಹೊತ್ತು ಇತರರಿಗೆ ಫ್ರೀ ಹ್ಯಾಂಡ್..!
ಸೂರ್ಯ ಕ್ರೀಸ್ನಲ್ಲಿದ್ರೆ, ಎದುರಾಳಿಗೆ ಟೆನ್ಶನ್. ಇತರೆ ಬ್ಯಾಟರ್ಗಳಿಗೆ ಟೆನ್ಶನ್ ಫ್ರೀ. ಯಾಕಂದ್ರೆ, ಸೂರ್ಯನ ರೌದ್ರವತಾರದ ಬ್ಯಾಟಿಂಗ್ ಆ ಮಟ್ಟಕ್ಕಿರುತ್ತೆ. ಹೀಗಾಗಿ ಸೂರ್ಯ ವಿಕೆಟ್ ಪಡೆದು, ಇತರೆ ಬ್ಯಾಟರ್ಗಳ ಮೇಲೆ ಒತ್ತಡ ಹೇರುವುದೇ ಪಾಕ್ನ ಮೊದಲ ಧ್ಯೇಯವಾಗಿದೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.
ವಿಶೇಷ ವರದಿ: ಸಂತೋಷ್
ಇದನ್ನೂ ಓದಿ:IND vs PAK .. ನಸ್ಸೌ ಸ್ಟೇಡಿಯಂ ಕಂಡೀಷನ್ ಯಾವ ತಂಡಕ್ಕೆ ಹೆಚ್ಚು ವರ ಆಗಿದೆ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್