/newsfirstlive-kannada/media/post_attachments/wp-content/uploads/2023/07/DELHI_MAN.jpg)
ನವದೆಹಲಿ: ತಾಜ್ ಮಹಲ್ ನೋಡಲು ಬಂದ ಪ್ರವಾಸಿಗನೊಬ್ಬನಿಗೆ ಯುವಕರ ಗುಂಪು ದೊಣ್ಣೆ, ರಾಡ್ನಿಂದ ಮನಬಂದಂತೆ ಹೊಡೆದಿರುವ ಘಟನೆ ಆಗ್ರಾದ ತಾಜ್ಗಂಜ್ ಬಳಿಯ ಬಸೈ ಚೌಕಿಯಲ್ಲಿ ನಡೆದಿದೆ. ಸದ್ಯ ಪ್ರವಾಸಿಗನಿಗೆ ಥಳಿಸಿರುವ ಭೀಕರ ದೃಶ್ಯ ಸಿಸಿಟಿಬಿಯಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ದೆಹಲಿಯಿಂದ ಬಂದಿದ್ದ ಪ್ರವಾಸಿಗನಿಗೆ ಥಳಿಸಿರುವ ಯುವಕರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ಈ ವೇಳೆ ಪ್ರವಾಸಿಗನ ಕಾರು ಅವರಲ್ಲಿ ಒಬ್ಬರಿಗೆ ಟಚ್ ಆಗಿದೆ. ಇದರಿಂದ ಕೆರಳಿದ ಗುಂಪು ದೊಣ್ಣೆ, ರಾಡ್ ಅನ್ನು ಹಿಡಿದುಕೊಂಡು ಬಂದು ಮನಬಂದಂತೆ ಥಳಿಸುತ್ತಿರುತ್ತಾರೆ. ಆಗ ಪ್ರವಾಸಿಗ ತಪ್ಪಿಸಿಕೊಂಡು ಬೇಕರಿಯೊಳಗೆ ಹೋಗುತ್ತಾರೆ. ಅಲ್ಲಿಯು ಬಿಡದ ದುಷ್ಕರ್ಮಿಗಳು ರಾಡ್ನಿಂದ ಹೊಡೆಯುತ್ತಿರುತ್ತಾರೆ. ತಪ್ಪಾಯಿತು ಎಂದು ಕ್ಷಮೆ ಕೇಳುತ್ತಿದ್ರೂ ಯುವಕರ ಗುಂಪು ಇನ್ನು ಹೆಚ್ಚಿಗೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು.
ಈ ಹಲ್ಲೆ ಮಾಡಿದ ದೃಶ್ಯವು ಬೇಕರಿಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಂತರ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ತಾಜ್ಗಂಜ್ ಠಾಣಾ ಪೊಲೀಸರು ಕ್ರಮ ಕೈಗೊಳ್ಳುವಂತೆ ಟ್ವಿಟರ್ನಲ್ಲಿ ಆಗ್ರಹಿಸಲಾಗಿತ್ತು. ಸದ್ಯ ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರನ್ನು ಜೈಲಿಗೆ ಹಾಕಲಾಗಿದ್ದು, ಆರೋಪಿಗಳು ಜೈಲಿನಲ್ಲಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಗ್ರದಲ್ಲಿರುವ ತಾಜ್ ಮಹಲ್ ನೋಡಬೇಕೆಂದು ದೆಹಲಿಗೆ ಬಂದಿದ್ದ ಪ್ರವಾಸಿಗನ ಮೇಲೆ ಯುವಕರ ಗ್ಯಾಂಗ್ವೊಂದು ಅಟ್ಯಾಕ್ ಮಾಡಿ ಮನಬಂದಂತೆ ಥಳಿಸಿದ್ದಾರೆ. #Newsfirstlive#Delhi#NewsFirstKannada#KannadaNews#Tourismpic.twitter.com/Rb2tZyf4iX
— NewsFirst Kannada (@NewsFirstKan) July 18, 2023
पर्यटक के साथ मारपीट से संबंधित वायरल वीडियो का स्वत: संज्ञान लेकर, #थाना_ताजगंज पुलिस द्वारा तत्काल अभियोग पंजीकृत कर, 03 टीमों का गठन करते हुए, 05 आरोपियों को हिरासत में लिया गया है व अन्य आरोपियों की गिरफ्तारी हेतु लगातार प्रयास किया जा रहा है। pic.twitter.com/yoyjGb6J3d
— POLICE COMMISSIONERATE AGRA (@agrapolice) July 17, 2023