/newsfirstlive-kannada/media/post_attachments/wp-content/uploads/2025/03/HARDIK-PANDYA.jpg)
ಸೀಸನ್-17ರಲ್ಲಿ ಛಿದ್ರ ಛಿದ್ರವಾಗಿದ್ದ ಮುಂಬೈನಲ್ಲಿ ಈಗ ಎಲ್ಲವೂ ಸರಿಯಾಗಿದೆ. ಮೆನಿ ಫ್ಯಾಮಿಲಿಯಾಗಿದ್ದ ಮುಂಬೈ ಫ್ರಾಂಚೈಸಿ ಮತ್ತೆ ಒನ್ ಫ್ಯಾಮಿಲಿಯಾಗಿದೆ ಅಂತಾ ಎಲ್ಲರೂ ಅಂದುಕೊಂಡಿದ್ರು. ಆದರೆ ಗುಜರಾತ್ ಎದುರಿನ ಒಂದೇ ಒಂದು ಸೋಲು, ಮುಂಬೈ ಇಂಡಿಯನ್ಸ್ನಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ.
ಕಳೆದ ಶನಿವಾರ ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ಗೆ 197 ರನ್ಗಳ ಗುರಿಯನ್ನು ನೀಡಿತ್ತು. ಬೆನ್ನು ಹತ್ತಿದ್ದ ಮುಂಬೈ, 6 ವಿಕೆಟ್ ಕಳೆದುಕೊಂಡು 160 ರನ್ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ: ಮುಂಬೈ ತಂಡದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ.. ಮೊನ್ನೆ ಸೂರ್ಯ-ಪಾಂಡ್ಯ ಮಧ್ಯೆ ಆಗಿದ್ದೇನು?
36 ರನ್ಗಳ ಅಂತರದಿಂದ ಸೋತ ಬಳಿಕ ಹಾರ್ದಿಕ್ ಪಾಂಡ್ಯ ಟಾಪ್ ಆರ್ಡರ್ ಬ್ಯಾಟರ್ಗಳ ಮೇಲೆ ಬೇಸರ ವ್ಯಕ್ತಪಡಿಸಿದರು. ಇದೀಗ ಪಾಂಡ್ಯ ಆಡಿದ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.
ಏನಂದ್ರು ಪಾಂಡ್ಯ..?
ಬ್ಯಾಟಿಂಗ್, ಬೌಲಿಂಗ್ನಲ್ಲಿ ಎರಡೂ ಕಡೆ 15-20 ರನ್ಗಳ ಕೊರತೆ ಇತ್ತು ಎಂದು ಭಾವಿಸುತ್ತೇನೆ. ನಾವು ಮೈದಾನದಲ್ಲಿ ವೃತ್ತಿಪರರಾಗಿರಲಿಲ್ಲ, ನಾವು ಬೇಸಿಕ್ ತಪ್ಪುಗಳನ್ನು ಮಾಡಿದ್ದೇವೆ. ಅದರಿಂದ ನಾವು 20-25 ರನ್ಗಳಷ್ಟು ಬೆಲೆ ತೆತ್ತಿದ್ದೇವೆ. ಟಿ20 ಗೇಮ್ನಲ್ಲಿ ಅದು ಭಾರೀ ಪರಿಣಾಮ ಬೀರುತ್ತೆ. ಟಾಪ್ ಆರ್ಡರ್ ಬಗ್ಗೆ ಕಳವಳವೇನಿಲ್ಲ. ನಾವೆಲ್ಲರೂ ಈ ಸಮಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದೆ. ಇದು ಆರಂಭಿಕ ಹಂತ. ಬ್ಯಾಟರ್ಗಳು ಜವಾಬ್ದಾರಿ ಹೊರಬೇಕಿದೆ. ಶೀಘ್ರದಲ್ಲೇ ಜವಾಬ್ದಾರಿ ತೆಗೆದುಕೊಳ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ನಾಯಕ ಪಾಂಡ್ಯ ಮುಂಬೈ ಸೋಲಿಗೆ ಪರೋಕ್ಷ ಟಾಪ್ ಆರ್ಡರ್ ಬ್ಯಾಟರ್ಗಳನ್ನೇ ಹೊಣೆಯಾಗಿಸಿದ್ರು. ಈ ಮಾತುಗಳೇ ಇದೀಗ ಮುಂಬೈ ಇಂಡಿಯನ್ಸ್ ಕ್ಯಾಂಪ್ನಲ್ಲಿ ಎಲ್ಲವೂ ಸರಿ ಇಲ್ವಾ ಎಂಬ ಅನುಮಾನವನ್ನ ಹುಟ್ಟು ಹಾಕಿದೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಇಲ್ಲಿಯವರೆಗೆ ಒಟ್ಟು ಮೂರು ಪಂದ್ಯಗಳನ್ನ ಆಡಿದ್ದು, ಮೂರರಲ್ಲೂ ಸೋಲನ್ನು ಕಂಡಿದೆ.
ಇದನ್ನೂ ಓದಿ: ರಾತ್ರೋರಾತ್ರಿ CSK ಈ ಅಭಿಮಾನಿ ಫೇಮಸ್.. ಧೋನಿ ಔಟ್ ಆಗ್ತಿದ್ದಂತೆ ಕೋಪಿಸಿಕೊಂಡಿದ್ದು ಯಾರ ಮೇಲೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್