/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲಪಕ್ಷ, ಪೂರ್ಣಿಮಾ ತಿಥಿ, ಶತಭಿಷಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಲಿದೆ
- ಮಾಂತ್ರಿಕವಾಗಿ ದೋಷವಿರಬಹುದು ಎಂಬ ಅನುಮಾನ ಕಾಡಬಹುದು
- ಸಾಲ ಮಾಡಬೇಕಾದ ಸಂದರ್ಭ ಬರಬಹುದು
- ಬಂಧುಗಳಲ್ಲಿ ವಿರಸ ಆಗಲಿದೆ
- ಸಾಂಸಾರಿಕವಾಗಿ ಹೊಂದಿಕೊಂಡು ಹೋದರು ನೆಮ್ಮದಿ ಇಲ್ಲ
- ಯಾವ ಕೆಲಸವೂ ಕೈ ಹತ್ತುವುದಿಲ್ಲ
- ಋಣಮೋಚನ ಮಂಗಳ ಸೋತ್ರವನ್ನು ಪಠಣೆ ಮಾಡಿ
ವೃಷಭ
- ಇಂದು ಧನಾಗಮ ಆಗಲಿದೆ
- ಭಾವನೆಗೆ ಧಕ್ಕೆಯಾಗಬಹುದು
- ಹಿಂದಿನ ತಪ್ಪುಗಳು ಕಾಡಲಿದೆ
- ಕುಟುಂಬದವರ ಜೊತೆ ವಾಗ್ವಾದ ಮಾಡುತ್ತೀರಿ
- ಪ್ರಯಾಣದಲ್ಲಿ ಸ್ವಲ್ಪ ಕಿರಿಕಿರಿ ಆಗಲಿದೆ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
- ದುರ್ಗಾರಾಧನೆ ಮಾಡಿ
ಮಿಥುನ
- ಆರ್ಥಿಕವಾದ ಬೆಳವಣಿಗೆಯಾಗಲಿದೆ
- ನೆಮ್ಮದಿಗೆ ಭಂಗ ಬರಬಹುದು
- ಆಸ್ತಿಯ ವಿಚಾರದಲ್ಲಿ ಭಯ
- ಆರೋಗ್ಯದ ಸಮಸ್ಯೆ ಕಾಡಬಹುದು
- ಸ್ವಯಂಕೃತ ಅಪರಾಧಗಳು ನಿಮಗೆ ತೊಂದರೆಯನ್ನು ಮಾಡಲಿದೆ
- ಚಿಂತೆಯಲ್ಲೇ ದಿನವನ್ನು ಕಳೆಯುತ್ತೀರಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಕಟಕ
- ಅಧಿಕ ಖರ್ಚು ಅಗುವುದರಿಂದ ಮನಸ್ಸಿಗೆ ಬೇಸರ ಆಗಲಿದೆ
- ಸೋಲು ನಷ್ಟ ನಿರಾಸೆಗಳು ಸಾಲು ಸಾಲಾಗಿ ನಿಮ್ಮ ಪಾಲಿಗೆ ಇರಲಿದೆ
- ಆಂತರಿಕ ವಿಚಾರಗಳಿಂದ ಬೇಸರ ಆಗಲಿದೆ
- ಆತ್ಮೀಯರ ಜೊತೆಯಲ್ಲಿ ವಿರಸ ಹೊಂದುತ್ತೀರಿ
- ಸಿಟ್ಟು ಮತ್ತು ಮಾತಿನಿಂದ ಸಮಸ್ಯೆಯಾಗಲಿದೆ
- ತಾಳ್ಮೆ ಇದ್ದರೆ ಒಳ್ಳೆಯದಾಗಲಿದೆ
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಆಘಾತ ಆಗಬಹುದು
- ಗುಪ್ತ ಧನಾಗಮ ಆಗಲಿದೆ
- ನಿರೀಕ್ಷೆಗೂ ಮೀರಿದ ಗೌರವ ಸನ್ಮಾನಕ್ಕೆ ಅವಕಾಶವಿದೆ
- ಸಾಧಕರ ಮಾರ್ಗದರ್ಶನ ಆಗಲಿದೆ
- ಸಹೋದರರಿಂದ ಕಿರುಕುಳ ಆಗುತ್ತದೆ
- ಮಾನಸಿಕವಾಗಿ ಇನ್ನೂ ಗಟ್ಟಿಯಾಗಲು ಇದು ಸಕಾಲ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಮಿತ್ರರಿಂದ ದೂರ ಉಳಿಯುತ್ತೀರಿ
- ಸ್ವಯಂ ತಪ್ಪಿನಿಂದ ತೊಂದರೆಯಾಗಬಹುದು
- ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ
- ಪ್ರಯಾಣಕ್ಕೆ ಅಡ್ಡಿಯಾಗಬಹುದು
- ಮನೆಯಲ್ಲಿ ಹೊಂದಾಣಿಕೆಯ ಕೊರತೆ
- ಒಟ್ಟಾರೆ ಕೃತಕವಾದ ಜೀವನ ಅನಿಸಬಹುದು
- ಕುಲದೇವತಾ ಆರಾಧನೆ ಮಾಡಿ
ತುಲಾ
- ಆಸ್ತಿ ಸಮಸ್ಯೆ ಬಗೆ ಹರಿಯಲಿದೆ
- ಆರ್ಥಿಕವಾಗಿ ಕೆಲವು ಸವಾಲುಗಳು ಬರಲಿದೆ
- ಅಣ್ಣ ತಮ್ಮಂದಿರ ಸಹಕಾರ ಸಿಗಲಿದೆ
- ಉದ್ಯೋಗದಲ್ಲಿ ಕೆಲವು ಬದಲಾವಣೆಯಾಗಲಿದೆ
- ದೂರದ ಊರಿನ ಪ್ರಯಾಣವನ್ನು ಮಾಡಬೇಕಾಗುತ್ತದೆ
- ಮಾನಸಿಕವಾಗಿ ಸಮಾಧಾನ ಕಾಣಬಹುದು
- ಶಿವಾರಾಧನೆ ಮಾಡಿ
ವೃಶ್ಚಿಕ
- ವಿದ್ಯಾಭ್ಯಾಸದ ವಿಚಾರದಲ್ಲಿ ಗೊಂದಲ ಆಗಿ ಬೇಸರ ಆಗಲಿದೆ
- ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
- ಅನಿರೀಕ್ಷಿತವಾದ ಅವಕಾಶಕ್ಕೆ ಮನಸ್ಸು ಇರುವುದಿಲ್ಲ
- ಭರವಸೆಗೆ ಕಟ್ಟು ಬಿದ್ದು ಹಿನ್ನಡೆಯಾಗಬಹುದು
- ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ
- ಮನೆಯ ವಾತಾವರಣ ಸಮಾಧಾನಕರವಾಗಿಲ್ಲ
- ಸುದರ್ಶನ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸಾಂಸಾರಿಕವಾಗಿ ಸಮಾಧಾನ ಇರುವುದಿಲ್ಲ
- ಇಲ್ಲದಿರುವ ಹಠಕ್ಕೆ ಬಿದ್ದು ಹಿನ್ನಡೆಯನ್ನು ಅನುಭವಿಸುತ್ತೀರ
- ಉದ್ಯೋಗವನ್ನು ಕಳೆದುಕೊಳ್ಳುವ ವಾತಾವರಣ ಇರಲಿದೆ
- ಅನಿರೀಕ್ಷಿತವಾದ ನಷ್ಟ ನಿರಾಸೆಗೆ ಕಾರಣವಾಗಲಿದೆ
- ಯಾರಿಗೊ ಸಹಾಯ ಮಾಡಲು ಹೋಗಿ ನೀವು ತೊಂದರೆಯನ್ನು ಅನುಭವಿಸುತ್ತೀರಿ
- ಬೇರೆಯವರ ವಿಷಯಾಸಕ್ತಿ ನಿಮಗೆ ಸಮಾಧಾನ ಕೊಡುವುದಿಲ್ಲ
- ಲಲಿತ ಪರಮೇಶ್ವರಿಯನ್ನು ಉಪಾಸನೆ ಮಾಡಿ
ಮಕರ
- ಉತ್ಸಾಹದಿಂದ ಮಾಡುವ ಕಾರ್ಯಕ್ಕೆ ಅಡ್ಡಿಯಾಗಬಹುದು
- ಯೋಜಿಸಿದ ಕೆಲಸಗಳಲ್ಲಿ ಅಪಜಯ ಆಗಲಿದೆ
- ಬೇರೆಯವರ ನಿಂದನೆಯಿಂದ ನಿಮಗೆ ಅವಮಾನ ಆಗಲಿದೆ
- ಯಾರಿಂದ ಸಹಾಯ ಪಡೆದಿದ್ದರೊ ಅವರ ಜೊತೆಯಲ್ಲಿ ವಿರಸ ಹೊಂದುತ್ತೀರಿ
- ಮಾನಸಿಕವಾದ ನೆಮ್ಮದಿಯ ಕೊರತೆ ನಿಮ್ಮನ್ನು ಕಾಡಲಿದೆ
- ಭಯದ ಜೊತೆಗೆ ಹುಚ್ಚು ಧೈರ್ಯದಿಂದ ಸಮಸ್ಯೆಯಾಗಲಿದೆ
- ಗುರು ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ
ಕುಂಭ
- ಇಂದು ಮಕ್ಕಳಿಂದ ಅನುಕೂಲವಿದೆ
- ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು
- ಇಂದು ಆಕಸ್ಮಿಕ ಲಾಭ ಆಗಲಿದೆ
- ದಾಂಪತ್ಯದಲ್ಲಿ ಇಲ್ಲ ಸಲ್ಲದ ಮಾತು ಬರಲಿದೆ
- ಅನಾರೋಗ್ಯಕ್ಕೆ ಮದ್ದು ಸಮಾಧಾನ
- ತಾಳ್ಮೆಯಿಂದ ಆಲೋಚಿಸಿ ಒಳ್ಳೆಯದಾಗಲಿದೆ
- ಶರಭೇಶ್ವರನನ್ನು ಪ್ರಾರ್ಥನೆ ಮಾಡಿ
ಮೀನ
- ಗಂಡ-ಹೆಂಡತಿಯ ಮಧ್ಯೆ ಜಗಳ ಆಗಬಹುದು
- ಬೇಜವಾಬ್ದಾರಿತನದಿಂದ ಅವಮಾನಕ್ಕೆ ಕಾರಣ ಆಗಲಿದೆ
- ಕರ್ತವ್ಯಕ್ಕೆ ಲೋಪವಾಗತ್ತೆ ಎಚ್ಚರಿಕೆ ಇರಲಿ
- ಸ್ತಿರಾಸ್ಥಿಯ ಬಗ್ಗೆ ಚರ್ಚೆ ಮಾಡುತ್ತೀರಿ ನಷ್ಟದ ಸೂಚನೆ ಇದೆ
- ವಾಹನ ಚಾಲನೆಯಲ್ಲಿ ತೊಂದರೆಯಾಗಬಹುದು
- ಅಂದುಕೊಂಡ ಕೆಲಸದಲ್ಲಿ ವ್ಯತ್ಯಾಸ ಆಗಿ ಕೋಪ ಬರಬಹುದು
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ