ಹೇಳೋದೊಂದು, ಮಾಡೋದೊಂದು.. ಗಂಭೀರ್ ಮುಖವಾಡ ಕಳಚಿದೆ..!

ಹೇಳೋದೊಂದು ಮಾಡೋದೊಂದು. ಬೆಸ್ಟ್​ ಎಕ್ಸಾಂಪಲ್​ ಗೌತಮ್ ಗಂಭೀರ್ ಅನ್ನೋದ್ರಲ್ಲಿ ಡೌಟಿಲ್ಲ. ಇದಕ್ಕೆ ಕಾರಣ ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ತೆಗೆದುಕೊಂಡ ನಿಲುವು. ಅಷ್ಟಕ್ಕೂ ಗಂಭೀರ್ ನಿಲುವಿಗೂ ಜೈಸ್ವಾಲ್​ಗೂ ಏನ್​ ಸಂಬಂಧ?

author-image
Ganesh Kerekuli
‘ನಿವೃತ್ತಿ ಅವರಿಗೆ ಬಿಟ್ಟದ್ದು, ನನಗೆ ಸಂಬಂಧ ಇಲ್ಲ’.. ರೋಹಿತ್, ಕೊಹ್ಲಿ ಭವಿಷ್ಯದ ಬಗ್ಗೆ ಗಂಭೀರ್ ಮಾತು
Advertisment

ಹೇಳೋದೊಂದು ಮಾಡೋದೊಂದು. ಬೆಸ್ಟ್​ ಎಕ್ಸಾಂಪಲ್​ ಗೌತಮ್ ಗಂಭೀರ್ ಅನ್ನೋದ್ರಲ್ಲಿ ಡೌಟಿಲ್ಲ. ಇದಕ್ಕೆ ಕಾರಣ ಯಶಸ್ವಿ ಜೈಸ್ವಾಲ್ ವಿಚಾರದಲ್ಲಿ ತೆಗೆದುಕೊಂಡ ನಿಲುವು. ಅಷ್ಟಕ್ಕೂ ಗಂಭೀರ್ ನಿಲುವಿಗೂ ಜೈಸ್ವಾಲ್​ಗೂ ಏನ್​ ಸಂಬಂಧ?

ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಈ ಮಿನಿ ಸಮರಕ್ಕೆ ಆಟಗಾರರು ಅಭ್ಯಾಸದ ಅಖಾಡಕ್ಕಿಳಿದಿದ್ದಾರೆ. ತಂಡ ಪ್ರಕಟವಾಗಿ ವಾರ ಕಳೆದ್ರೂ ಆಯ್ಕೆಯಲ್ಲಾದ ಪ್ರಮಾದಗಳ ಟಾಕ್ ನಿಂತಿಲ್ಲ. ಪ್ರಮುಖವಾಗಿ ಜೈಸ್ವಾಲ್ ವಿಷ್ಯದಲ್ಲಿ ತೆಗೆದುಕೊಂಡ ನಿಲುವು. ಇವತ್ತಿಗೂ ಪ್ರಶ್ನಾರ್ಥಕವೇ ಆಗಿದೆ. ಇದೇ ನಿಲುವು ಹೆಡ್ ಕೋಚ್ ಗೌತಮ್ ಗಂಭೀರ್​ ಅವರ ಇಬ್ಬಗೆ ನೀತಿಯನ್ನ ಬಟಾಬಯಲು ಮಾಡಿದೆ. ಇದಕ್ಕೆ ಕಾರಣ ಹಿಂದೆ ಗಂಭೀರ್ ನೀಡಿದ್ದ ಒಂದೇ ಒಂದು ಹೇಳಿಕೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ ಹಾದಿಯಲ್ಲೇ ಹಾರ್ದಿಕ್ ಪಾಂಡ್ಯ.. ಏನದು?

ಓಪನರ್ ಜೈಸ್ವಾಲ್, ಕ್ಯಾಪ್ಟನ್​​ ಗಿಲ್ ಸಿಡಿಲಬ್ಬರದ ಶತಕ..​ ಬೃಹತ್​ ಮೊತ್ತದತ್ತ ಟೀಮ್ ಇಂಡಿಯಾ

ಯಶಸ್ವಿ ಜೈಸ್ವಾಲ್​​​ ಟಿ20 ತಂಡದಲ್ಲಿ ಇರಬೇಕು ಎಂದು ನಂಬುತ್ತೇನೆ. ಕೇವಲ ಒಂದು ಟೂರ್ನಮೆಂಟ್‌ಗೆ ಅಲ್ಲ. ಮುಂದಿನ ವಿಶ್ವಕಪ್‌ಗೂ ಸಹ ಇರಬೇಕು. ಜೈಸ್ವಾಲ್​ ಮೂರು ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾಕ್ಕೆ ಆಡಬೇಕು

ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್

ಇಷ್ಟಕ್ಕೆ ಸುಮ್ಮನಾಗದ ಗೌತಮ್ ಗಂಭೀರ್, 2024ರ ಟಿ20 ವಿಶ್ವಕಪ್ ಆಯ್ಕೆ ಕುರಿತಾಗಿಯೇ ಸ್ವಾಗತ ಮಾಡಿದ್ರು. ಕೇವಲ ಒಂದು ಟೂರ್ನಿಯಲ್ಲ. ಮುಂದೇನು ಆಡಬೇಕು ಅಂತಾನೇ ಆರ್ಡರ್​ ಮಾಡಿದ್ರು. ಆದ್ರೀಗ ಇದೇ ಹೆಡ್ ಕೋಚ್ ಗಂಭೀರ್​ ಮುಖವಾಡ ಕಳಚುವಂತೆ ಮಾಡಿದೆ.

ಇವತ್ತು ಏನಾಯ್ತು?

2024ರ ಟಿ20 ವಿಶ್ವಕಪ್​ನಲ್ಲಿ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದರು. ಹೀಗಾಗಿ ಏಷ್ಯಾಕಪ್​ನಲ್ಲಿ ಮುಂಬೈಕರ್​ಗೆ ಸುಲಭಕ್ಕೆ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಸ್ಥಾನದ ಜೊತೆಗೆ ಡಬಲ್ ಗುಡ್​ನ್ಯೂಸ್ ಸಿಕ್ಕಿದ್ದು ಗಿಲ್​ಗೆ ಆಗಿತ್ತು. 2024ರ ವಿಶ್ವಕಪ್​ನಲ್ಲಿ ಸ್ಥಾನವನ್ನೇ ಪಡೆಯದ ಶುಭ್​ಮನ್, ಜೈಸ್ವಾಲ್​​ನ ಓವರ್ ಟೇಕ್ ಮಾಡೋದು ಅಷ್ಟು ಸುಲಭದ್ದಲ್ಲ. ಸೆಲೆಕ್ಷನ್ ಕಮಿಟಿ ಜೈಸ್ವಾಲ್​ಗೆ ಕೊಕ್ ನೀಡಿ ಶುಭ್​ಮನ್​ಗೆ ಅಸ್ತು ಎಂದಿದೆ. ಇದೀಗ ಇದೇ ಹೆಡ್​ ಕೋಚ್​ ಗೌತಮ್ ಗಂಭೀರ್, ವಿಶ್ವಕಪ್​ ಅಲ್ಲ.. ಏಷ್ಯಾಕಪ್​​ನಲ್ಲೇ ಸ್ಥಾನ ನೀಡದೆ ಅನ್ಯಾಯ ಮಾಡಿದೆ. ಓಪನರ್ ಸ್ಲಾಟ್​​ಗೆ ಸ್ಟ್ರಾಂಗ್ ಕಂಟೆಂಡರ್ ಆಗಿದ್ದ ಜೈಸ್ವಾಲ್​​ಗೆ ಯಾಕಿಲ್ಲಾ ಸ್ಥಾನ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ:ರಾಜಸ್ಥಾನ್ ರಾಯಲ್ಸ್​​ಗೆ ದ್ರಾವಿಡ್​ ಶಾಕ್; ಕೋಚ್​ ಹುದ್ದೆಗೆ ದಿಢೀರ್ ರಾಜೀನಾಮೆ..!

ಟೀಂ ಇಂಡಿಯಾದಲ್ಲಿ ದೊಡ್ಡ ವಿವಾದ.. ಅಗರ್ಕರ್ ವಿರುದ್ಧ ಭುಗಿಲೆದ್ದ ಆಕ್ರೋಶ..

ಉತ್ತಮ ಪ್ರದರ್ಶನ ನೀಡಲಿಲ್ವಾ ಜೈಸ್ವಾಲ್?

ಓಪನರ್​​ ಸ್ಲಾಟ್​​ಗೆ ಬೆಸ್ಟ್​ ಅಂಡ್ ಪರ್ಫೆಕ್ಟ್​ ಚಾಯ್ಸ್​. ಯಾರಂದ್ರೆ ಜೈಸ್ವಾಲ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಜೈಸ್ವಾಲ್ ಆಯ್ಕೆಗೆ ಐಪಿಎಲ್​ ಪ್ರದರ್ಶನ ಹಿನ್ನಡೆ ಆಯ್ತಾ ಅಂದ್ರೆ ನಿಜಕ್ಕೂ ಇಲ್ಲ. ಕಳೆದ ಐಪಿಎಲ್ ಸೀಸನ್​​ಗಳಿಂದಲೂ ಜೈಸ್ವಾಲ್ ರನ್ ಹೊಳೆಯನ್ನೇ ಹರಿಸಿದ್ದಾರೆ. 

ಇದನ್ನೂ ಓದಿ: ಬಿಸಿಸಿಐನ ಈ ನಡವಳಿಕೆ ಸರಿಯಿಲ್ಲ.. ದಿಗ್ಗಜರಿಗೆ ಕನಿಷ್ಠ ಗೌರವವೂ ಇಲ್ಲದಾಯಿತೇ..?

Gautam gambhir
ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯಕೋಚ್

2023ರ ಐಪಿಎಲ್​​ನಲ್ಲಿ 14 ಪಂದ್ಯಗಳನ್ನಾಡಿದ್ದ ಯಶಸ್ವಿ ಜೈಸ್ವಾಲ್‌, 163.61ರ ಸ್ಟ್ರೈಕ್‌ ರೇಟ್‌ನಲ್ಲಿ 625 ರನ್‌ ಸಿಡಿಸಿದ್ರೆ, 2024ರ ಐಪಿಎಲ್​ನಲ್ಲಿ 16 ಪಂದ್ಯಗಳನ್ನಾಡಿದ್ದ ಜೈಸ್ವಾಲ್, 155.9ರ ಸ್ಟ್ರೈಕ್​ರೇಟ್​​ನಲ್ಲಿ 435 ರನ್ ಕೊಳ್ಳೆ ಹೊಡೆದಿದ್ದರು. 2025ರ ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಿಂದ 559 ರನ್ ಗಳಿಸಿದ ಜೈಸ್ವಾಲ್, 159.71ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಝಳಪಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಇದೇ ಫಿಯರ್ ಲೆಸ್ ಬ್ಯಾಟಿಂಗ್​ನಿಂದಲೇ ಸದ್ದು ಮಾಡಿದ್ದಾರೆ.

ಟಿ20ಯಲ್ಲಿ ಯಶಸ್ವಿ ಜೈಸ್ವಾಲ್

ಟೀಮ್ ಇಂಡಿಯಾ ಪರ 23 ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್, 36.15ರ ಬ್ಯಾಟಿಂಗ್ ಅವರೇಜ್​ನಲ್ಲಿ 723 ರನ್ ಗಳಿಸಿದ್ದಾರೆ. 164.31ರ ಸ್ಟ್ರೈಕ್​​ರೇಟ್ ಹೊಂದಿದ್ದಾರೆ. ಸ್ಥಾನ ಸಿಗದಿರುವುದು ನಿಜಕ್ಕೂ ವಿಪರ್ಯಾಸ.

ಮತ್ಯಾಕೆ ಅನ್ಯಾಯ?

ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ರನ್ ಗಳಿಸಿದ್ದಾರೆ. ಇಂಪ್ಯಾಕ್ಟ್​ ಫುಲ್​​ ಸ್ಟ್ರೈಕ್​ರೇಟ್ ಇದೆ. ಆರಂಭದಿಂದಲೇ ಹೊಡಿಬಡಿ ಆಟವಾಡುವ ಜೈಸ್ವಾಲ್, ಟಿ20ಗೆ ಫಸ್ಟ್ ಚಾಯ್ಸ್​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾದ್ರೂ ಆಯ್ಕೆ ಮಾಡದಿರುವುದು ಟೀಮ್ ಇಂಡಿಯಾಕ್ಕಾದ ನಷ್ಟ. ಏಷ್ಯಾಕಪ್​ನಲ್ಲೇ ಜೈಸ್ವಾಲ್​ಗೆ ಸ್ಥಾನ ನೀಡದಿರುವುದು ಹೊಸ ಪ್ರಶ್ನೆ ಹುಟ್ಟುಹಾಕಿದೆ. ಅದೇ 2026ರ ಟಿ20 ವಿಶ್ವಕಪ್​​​​​​​​​​​​​​​​​.

ಇದನ್ನೂ ಓದಿ:ಶ್ರೀಶಾಂತ್​ಗೆ ಭಜ್ಜಿ ಹೊಡೆದಿದ್ದ ವಿಡಿಯೋ ರಿವೀಲ್ ಮಾಡಿದ ಲಲಿತ್ ಮೋದಿ VIDEO

2026ರ ಟಿ20 ವಿಶ್ವಕಪ್​ಗೆ ಜಸ್ಟ್ 6 ತಿಂಗಳಷ್ಟೇ ಇದೆ. ಈ ಏಷ್ಯಾಕಪ್​, 2026ರ ವಿಶ್ವಕಪ್​​​​ ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರಕಟಿಸಲಾಗಿದೆ. ಜೈಸ್ವಾಲ್​ಗೆ ಸ್ಥಾನ ಸಿಗದಿರುವುದು, ಟಿ20 ವಿಶ್ವಕಪ್​ ಪ್ಲಾನ್​ನಲ್ಲಿ ಜೈಸ್ವಾಲ್​ ಇಲ್ಲ ಎಂಬುವುದರ ಸಂದೇಶವಲ್ದೇ ಮತ್ತೇನು? ಕೋಚ್ ಅಲ್ದಿದ್ದಾಗ ಜೈಸ್ವಾಲ್​​​​​​ ಟಿ20 ಆಡಬೇಕು. ಟಿ20 ವಿಶ್ವಕಪ್ ಆಡಬೇಕು ಅಂತಿದ್ದ ಗಂಭೀರ್​​​​​​​​​​​​, ಈಗ ಆ ಜೈಸ್ವಾಲ್​ರನ್ನೇ ಮರೆತಿರುವುದು ನಿಜಕ್ಕೂ ಬೇಸರದ ಸಂಗತಿ.

ಇದನ್ನೂ ಓದಿ: ಕೊಹ್ಲಿ ನಿವೃತ್ತಿಯಿಂದ ಕೋಟಿ ಕೋಟಿ ಲಾಸ್​.. ಮತ್ತೊಬ್ಬ ಸ್ಟಾರ್​​ಗೆ ಪಟ್ಟಾಭಿಷೇಕ ಮಾಡಲು BCCI ಪ್ಲಾನ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yashasvi Jaiswal love Jaiswal, Iyer Yashasvi Jaiswal Gautam Gambhir Jaiswal and Gambhir
Advertisment