/newsfirstlive-kannada/media/media_files/2025/09/29/asia-cup-trophy-narendra-modi-2025-09-29-07-59-38.jpg)
ಕ್ರಿಕೆಟ್​ ವಾರ್​ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಸದೆಬಡಿದ ಭಾರತ, 9ನೇ ಬಾರಿ ಏಷ್ಯಾ ಕಪ್​ ಚಾಂಪಿಯನ್ಸ್​ ಪಟ್ಟವನ್ನು ಅಲಂಕರಿಸಿದೆ. ಕ್ರಿಕೆಟ್​ ಮೈದಾನದಲ್ಲಿ ಸುಮ್ಮನಿರಲಾದೇ ಭಾರತವನ್ನು ಕೆಣಕಿದ ಪಾಕಿಗೆ ಭಾರತ ಅದೇ ರೀತಿ ಉತ್ತರ ನೀಡಿದೆ. ಪಾಕ್​ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಇಡೀ ದೇಶವೇ ಸಂಭ್ರಮಸಿದೆ. ಭಾರತ ಗೆದ್ದರೂ, ಏಷ್ಯಾ ಕಪ್ ಟ್ರೋಫಿ ತಂಡದ ಕೈ ಸೇರಿಲ್ಲ.
ಭಾರತಕ್ಕೆ ಶರಣಾದ ಶತ್ರು ಪಾಕಿಸ್ತಾನ
ಏಷ್ಯಾ ಕಪ್​ 2025 ಟೂರ್ನಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಕ್ರಿಕೆಟ್​ ಪಂದ್ಯಕ್ಕಿಂತದಲ್ಲೂ ಭಾರೀ ಗಮನ ಸೆಳೆದಿದ್ದು, ಆಪರೇಷನ್​ ಸಿಂಧೂರ. ಕ್ರಿಕೆಟ್​ ಮೈದಾನದಲ್ಲಿ ಸುಮ್ಮನಿರಲಾದೇ ಭಾರತವನ್ನು ಕೆಣಕಿದ ಪಾಕಿಗೆ ಭಾರತ ಅದೇ ರೀತಿ ಉತ್ತರ ನೀಡಿದೆ. ಫೈನಲ್​ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 146 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನ ನೀಡಿದ 147 ರನ್​ಗಳ ಟಾರ್ಗೆಟ್​​ ಅನ್ನು ಭಾರತಕ್ಕೆ ನೀಡಿತ್ತು. ಆರಂಭಿಕ ಆಘಾತ ಅನುಭವಿಸಿದ ಭಾರತಕ್ಕೆ ಎಸ್​ 400 ರಕ್ಷಾ ಕವಚದ ಮಾದರಿಯಲ್ಲಿ ಬ್ಯಾಟರ್​ ತಿಲಕ್​ ವರ್ಮಾ, ಕೊನೆವರೆಗೂ ತಂಡದ ರಕ್ಷಣೆಗೆ ನಿಂತು ಆಡಿದರು. ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ರು.
ಇದನ್ನೂ ಓದಿ: ಟ್ರೋಫಿ ಗೆದ್ದರೂ ಪ್ರಶಸ್ತಿ ಸ್ವೀಕರಿಸದ ಭಾರತ.. ಪಾಕ್​​ಗೆ ಸೋಲಿಗಿಂತ ದೊಡ್ಡ ಅವಮಾನ
ಕೊನೆ ಓವರ್​ನಲ್ಲಿ ರೌಫ್ ಎಸೆತಕ್ಕೆ ಬ್ರಹೋಸ್ಮ್​ ಸ್ಪೀಡ್​ನಲ್ಲಿ ಸಿಕ್ಸರ್​ ಬಾರಿಸಿದ ತಿಲಕ್​ ವರ್ಮಾ ಭಾರತದ ಗೆಲುವನ್ನು ಖಾತ್ರಿ ಪಡಿಸಿದ್ರು. ಅಂತಿಮವಾಗಿ ಭಾರತ ತಂಡ 5 ವಿಕೆಟ್​​ಗಳಿಂದ ಗೆಲವು ಸಾಧಿಸಿ, 9ನೇ ಬಾರಿ ಏಷ್ಯಾ ಕಪ್ ತಿಲಕವನ್ನು ಹಚ್ಚಿಕೊಳ್ತು.
ಮೈದಾನದಲ್ಲೂ ಆಪರೇಷನ್ ಸಿಂಧೂರ್.. ಮೋದಿ ವಿಶ್​
ಕೆಲವು ತಿಂಗಳುಗಳ ಹಿಂದೆ ಯುದ್ಧ ಭೂಮಿಯಲ್ಲಿ ಭಾರತದ ದಾಳಿಗೆ ತತ್ತರಿಸಿ ಹೋಗಿದ್ದ ಪಾಕಿಸ್ತಾನ ಇದೀಗ ಕ್ರಿಕೆಟ್​​ನಲ್ಲೂ ಮಣ್ಣು ಮುಕ್ಕಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾಕ್ಕೆ ತಮ್ಮದೇ ಶೈಲಿಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ.. ಭಾರತಕ್ಕೆ ಜಯ. ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಗೆಲುವಿನ ಸಿಂಧೂರವಿಟ್ಟ ತಿಲಕ್.. ಪಾಕ್​ಗೆ ಅವಮಾನ, Asia Cup​ ಗೆದ್ದ ಸೂರ್ಯ ಪಡೆ
Rani Rashmoni was a towering figure of courage, compassion and conviction. She is fondly remembered as a visionary leader and philanthropist. She built lasting institutions and had unwavering commitment to spirituality as well as for the upliftment of the poor. Tributes to her on…
— Narendra Modi (@narendramodi) September 28, 2025
ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಗೃಹಸಚಿವ ಅಮಿತ್​ ಶಾ ಸೇರಿದಂತೆ ಹಲವು ನಾಯಕರು, ಎಕ್ಸ್​ ಖಾತೆಯಲ್ಲಿ ಟೀಂ ಇಂಡಿಯಾ ಆಟಗಾರರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: BIGG BOSS 12ಕ್ಕೆ ಎಂಟ್ರಿ ಕೊಟ್ಟ ಇನ್ನೂ 9 ಕಂಟೆಸ್ಟೆಂಟ್​ಗಳು.. ಯಾರು ಯಾರು ಗೊತ್ತಾ?
Glorious victory for 🇮🇳!
— Siddaramaiah (@siddaramaiah) September 28, 2025
Congratulations to Team India for their spectacular triumph over Pakistan in the Asia Cup final.
Your determination and teamwork have once again lifted the spirit of 1.4 billion Indians.
This win is a testament to our nation’s unwavering pride. Jai… pic.twitter.com/Z9muGBAHy7
ದೇಶಾದ್ಯಂತ ಸಂಭ್ರಮ
ಫೈನಲ್​ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸುತ್ತಿದ್ದಂತೆ ದೇಶಾಧ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.. ಕರ್ನಾಕಟದಲ್ಲೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್​ ಪ್ರೇಮಿಗಳು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ರು.. ಬೆಳಗಾವಿಯ ಆರ್ಪಿಡಿ ವೃತ್ತದಲ್ಲಿ ಕ್ರಿಕೆಟ್​ ಪ್ರೇಮಿಗಳು ತ್ರಿವರ್ಣ ಧ್ವಜ ಹಿಡಿದು ಕುಣಿದು ಕುಪ್ಪಳಿಸಿದ್ರು.
ಇದನ್ನೂ ಓದಿ:ಬಿಸಿಸಿಐಗೆ ಮಿಥುನ್ ಮನ್ಹಾಸ್ ಅಧ್ಯಕ್ಷ.. ಕನ್ನಡಿಗ ರಘುರಾಮ್ ಭಟ್​​ಗೆ ಉನ್ನತ ಸ್ಥಾನ
ಕೇವಲ ಕರ್ನಾಟಕ ಉತ್ತರ ಪ್ರದೇಶ, ರಾಂಚಿ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲೂ ಭಾರತದ ಗೆಲುವಿನ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜಮ್ಮು ಕಾಶ್ಮೀರದ ಪೂಂಚ್​ನಲ್ಲಿ ಭಾರತೀಯ ಸೈನಿಕರು, ಸ್ಥಳೀಯರೊಂದಿಗೆ ಸೇರಿ, ಪಾಕಿಸ್ತಾನ ವಿರುದ್ಧದ ಭಾರತ ಕ್ರಿಕೆಟ್​ ಗೆಲುವನ್ನು ಸಂಭ್ರಮಿಸಿದ್ರು.. ಚತ್ತೀಸ್​ಘಡಲ್ಲಿ ಸಿಆರ್​ಪಿಎಸ್​ ಸೈನಿಕರು ಸಂಭ್ರಮಾಚರಣೆ ಜೋರಾಗಿತ್ತು.
ಎಸಿಸಿ ಮುಖ್ಯಸ್ಥರಾಗಿರುವುದು ಪಾಕ್ನ ಮೊಹ್ಸಿನ್ ನಖ್ವಿ.. ಇವರಿಂದ ಟ್ರೋಫಿ ತೆಗೆದುಕೊಳ್ಳಲು ಭಾರತ ತಂಡ ನಿರಾಕರಿಸಿದ ಕಾರಣ, ಏಷ್ಯಾ ಕಪ್​ ಚಾಂಪಿಯನ್ಸ್​ ತಂಡವಾದ ಭಾರತ ಟ್ರೋಪಿ ಇಲ್ಲದೇ ಚಾಂಪಿಯನ್ಸ್​ ಪೋಸ್​ ನೀಡಿದೆ. ಒಟ್ಟಾರೆ.. ಏಷ್ಯಾಕಪ್​ನಲ್ಲಿ ಪಾಕಿಸ್ತಾನದ ಮಣಿಸುವ ಮೂಲಕ ಭಾರತ ತಂಡ ಹೊಸ ದಾಖಲೆಯನ್ನು ಬರೆದಿದೆ.
ಇದನ್ನೂ ಓದಿ: ಫೈನಲ್ ಫೋಟೋಶೂಟ್​ಗೆ ಬರಲ್ಲ ಎಂದ ಸೂರ್ಯ.. ಅದಕ್ಕೆ ಪಾಕ್ ಕ್ಯಾಪ್ಟನ್ ಕೊಂಕು..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ