/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮವಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ
ಮೇಷ ರಾಶಿ
- ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
- ಕಿರಿಯರಿಗೆ ಮಾರ್ಗದರ್ಶಕರು, ಗೌರವ ಕೊಡಬೇಕು
- ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
- ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
- ಹಳೆಯ ಕೆಲಸಗಳಲ್ಲಿ ಪ್ರಗತಿ ಹೊಂದುತ್ತೀರಿ
- ಸಾಯಂಕಾಲ ಹೊತ್ತಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಾಗಬಹುದು
- ಕುಲದೇವತಾರಾಧನೆ ಮಾಡಿ
ವೃಷಭ
- ಅವಿವಾಹಿತರಿಗೆ ಸಿಹಿ ಸುದ್ದಿ
- ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ
- ಪ್ರೇಮಿಗಳಿಗೆ ಅನುಕೂಲವಿದೆ
- ಭೂ ಸಂಬಂಧವಾದ ಲಾಭ
- ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ದೇಹದಲ್ಲಿ ದೌರ್ಬಲ್ಯ ಕಾಡಬಹುದು
- ಶಿಕ್ಷಣದಲ್ಲಿ ಗಮರ್ನಾಹ ಪ್ರಗತಿ ಕಾಣುತ್ತೀರಿ
- ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಉಪಯೋಗ ಆಗಲಿದೆ
- ಪ್ರೇಮಿಗಳಿಗೆ ಆತಂಕ, ಭಯ ಕಾಡಬಹುದು
- ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ
- ಮದುವೆಯ ವಿಚಾರ ಪ್ರಸ್ತಾಪಕ್ಕೆ ಬರಬಹುದು
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಕಟಕ
- ಹೊಸದಾಗಿ ಮದುವೆ ಆದವರಲ್ಲಿ ಕಿರಿಕಿರಿಯಾಗಬಹುದು
- ನಿಮ್ಮ ಜವಾಬ್ದಾರಿ ಪೂರ್ಣಮಾಡಿ
- ಪ್ರಿಯರೊಂದಿಗೆ ಜಗಳವಾಗಬಹುದು
- ಇಂದು ಆರ್ಥಿಕ ಲಾಭವಿದೆ
- ಈ ದಿನ ಆರೋಗ್ಯ ಕಾಪಾಡಿಕೊಳ್ಳಿ
- ಮನೆಯಲ್ಲಿ ಸಾಯಂಕಾಲ ಸಮಸ್ಯೆಯಾಗಬಹುದು
- ಈಶ್ವರನ ಆರಾಧನೆ ಮಾಡಿ
ಸಿಂಹ
- ಮನೆಯಲ್ಲಿ ಹಿರಿಯರ, ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
- ಸ್ವಾಭಿಮಾನಕ್ಕೆ ಧಕ್ಕೆ ಬೇಡ
- ಶಿಕ್ಷಣ, ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
- ನಿಮ್ಮ ಅನಿಸಿಕೆ ಈಡೇರುವ ದಿನ
- ಉತ್ತಮ ಸಮಯ, ಶುಭ ಲಾಭಗಳಿವೆ
- ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
- ನಾರಾಯಣ ಸ್ತೋತ್ರ ಪಠಿಸಿ
ಕನ್ಯಾ
- ಕುಟುಂಬದಲ್ಲಿ ಕಿರಿಕಿರಿಯಾಗಬಹುದು
- ಧಾರ್ಮಿಕ ವಿಚಾರಕ್ಕೆ ಜಗಳ ಆಗಬಹುದು
- ವ್ಯಾಪಾರ ವೃದ್ಧಿಗೆ ಹೊಸ ಮಾರ್ಗವಿದೆ
- ಸಗಟು ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು
- ಆರೋಗ್ಯ ಸಮಸ್ಯೆ, ಗಂಟಲು ನೋವು ಕಾಣಿಸಿಕೊಳ್ಳಬಹುದು
- ಹಣದ ವಿಚಾರದಲ್ಲಿ ಮನಸ್ತಾಪ
- ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಬಾರಿ ಜಪಿಸಿ
ತುಲಾ
- ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
- ಬಡ್ತಿಗೆ ಅವಕಾಶಗಳಿವೆ
- ಸಮಾಜದಲ್ಲಿ ಕಾರ್ಯಗಳಿಗೆ ಸಹಕರಿಸುತ್ತೀರಿ
- ಎರಡನೇ ಮದುವೆಯಾದವರಿಗೆ ಸಮಸ್ಯೆ ಉಂಟಾಗಬಹುದು
- ಅತಿಯಾದ ಶ್ರಮ, ದೇಹಾಲಾಸ್ಯ
- ಆರ್ಥಿಕವಾಗಿ ಸಮಾಧಾನವಿದೆ
- ವಿಷ್ಣು ಸಹಸ್ರನಾಮ ಶ್ರವಣ ಮಾಡಿ
ವೃಶ್ಚಿಕ
- ಉದ್ಯೋಗ, ವ್ಯವಹಾರದ ಬಗ್ಗೆ ಚರ್ಚೆ ಮಾಡಿ
- ಸರಿಯಾದ ಆಹಾರ ಸೇವಿಸಿ
- ಅಜೀರ್ಣದಂತಹ ಸಮಸ್ಯೆ ಕಾಡಬಹುದು
- ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆವಹಿಸಿ
- ಮನೆಯವರ ಸಲಹೆ ಸಹಕಾರ ಅಗತ್ಯ
- ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ ಸಮಸ್ಯೆಯಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
ಧನಸ್ಸು
- ಮನೆಯಲ್ಲಿ ಮಾತಿಗೆ ಬೆಲೆ ಬರುತ್ತದೆ
- ನಿಮ್ಮ ಪ್ರತಿಭೆ, ಬುದ್ಧಿವಂತಿಕೆ ಉಪಯೋಗವಾಗುತ್ತದೆ
- ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
- ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
- ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
- ಅಧಿಕ ಖರ್ಚು ಬೇಸರವಾಗುತ್ತೀರಿ
- ದುರ್ಗಾರಾಧನೆ ಮಾಡಿ
ಮಕರ
- ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
- ನಿಮ್ಮ ಆರೋಗ್ಯವೂ ಬಹಳ ಮುಖ್ಯವಾಗಿರುತ್ತದೆ
- ಅಪರಿಚಿತರೊಂದಿಗೆ ಚರ್ಚೆ ಮಾಡುವುದು ಉಪಯೋಗವಲ್ಲ
- ಹಿರಿಯರ ಮಾರ್ಗದರ್ಶನ ಪಡೆಯಿರಿ
- ಹೊಸ ವ್ಯಾಪಾರಕ್ಕೆ ಅನುಕೂಲವಿದೆ
- ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
- ಶ್ರೀ ರಾಮನನ್ನು ಪೂಜಿಸಿ
ಕುಂಭ
- ಕಾನೂನು ವಿಚಾರಗಳಲ್ಲಿ ಜಯ ಸಿಗಲಿದೆ
- ವ್ಯವಹಾರದಲ್ಲಿ ಲಾಭವಿದೆ
- ಅತಿಥಿಗಳ ಆಗಮನ ಸಂತೋಷ
- ಮಕ್ಕಳಿಗೆ ಶುಭ ಸಮಯ
- ವ್ಯವಹಾರ ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
- ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
- ಇಷ್ಟದೇವತಾರಾಧನೆ ಮಾಡಿ
ಮೀನ
- ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟಪಡಬೇಕಾಗುತ್ತದೆ
- ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
- ನಿಮ್ಮ ಯೋಚನೆಗಳಿಗೆ ಗಮನಹರಿಸಿ
- ಕುಟುಂಬದ ಜವಾಬ್ದಾರಿ ಬಗ್ಗೆ ನಿರ್ಲಕ್ಷ್ಯಬೇಡ
- ಅತಿಥಿಗಳಿಗಾಗಿ, ಸ್ನೇಹಿತರಿಗಾಗಿ ಹಣ ಖರ್ಚು
- ವ್ಯವಹಾರಾನುಕೂಲವಿದೆ ಭವಿಷ್ಯವಿದೆ
- ನವಗ್ರಹರ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ