/newsfirstlive-kannada/media/post_attachments/wp-content/uploads/2023/06/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಸ್ಥಿರಾಸ್ತಿ ಮತ್ತು ವಾಹನದ ಲಾಭವಿದೆ
- ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು
- ಕುಟುಂಬದಲ್ಲಿ ಕಲಹ ಉಂಟಾಗಬಹುದು
- ಮಿತ್ರರಿಂದ ಸಮಸ್ಯೆಯಾಗಬಹುದು
- ಇಂದು ಆದಾಯದಲ್ಲಿ ಕುಂಠಿತ ಆಗಬಹುದು
- ಮಾನಸಿಕವಾಗಿ ನೆಮ್ಮದಿ ಇಲ್ಲದಿರುವುದು
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಚಂದ್ರನನ್ನು ಪ್ರಾರ್ಥನೆ ಮಾಡಿ
ವೃಷಭ
- ಸಾಂಸಾರಿಕ ವಿಚಾರ ಬೇಸರ ತರಲಿದೆ
- ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
- ಬೇರೆಯವರ ತಪ್ಪುಗಳನ್ನು ಎತ್ತಿ ಹಿಡಿಯುವಿರಿ
- ಪ್ರಯಾಣದಲ್ಲಿ ಆಲಸ್ಯ ಆಗಬಹುದು
- ಹಣ ಇರುವುದೆಂಬ ಭ್ರಾಂತಿ ಬೇಡ
- ಜವಾಬ್ದಾರಿಯ ಬಗ್ಗೆ ಚಿಂತನೆ ಮಾಡಿ
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ಅನಿರೀಕ್ಷಿತವಾಗಿ ಆರ್ಥಿಕ ಸಂಕಷ್ಟ ಬರಬಹುದು
- ಸಾಲದ ಪರಿಸ್ಥಿತಿ ಬರಬಹುದು
- ಕುಟುಂಬದವರು ಶತ್ರುಗಳಾಗುತ್ತಾರೆ
- ವಾದ-ವಿವಾದಗಳಲ್ಲಿ ಸೋಲು ಉಂಟಾಗಬಹುದು
- ಶಾರೀರಿಕವಾದ ತೊಂದರೆ ಅದರಲ್ಲೂ ಕಾಲು ನೋವನ್ನು ಅನುಭವಿಸುತ್ತೀರಿ
- ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು ಹರಸಾಹಸ ಪಡುತ್ತೀರಿ
- ಋಣಮೋಚನ ಮಂಗಳ ಸ್ತೋತ್ರವನ್ನು ಶ್ರವಣ ಮಾಡಿ
ಕಟಕ
- ಸ್ವಯಂಕೃತ ಅಪರಾಧಗಳು ಯಾವುದನ್ನು ಮಾಡಬೇಡಿ
- ಜೂಟಾಟದಂತಹ ಉತ್ತೇಜಕ ವಿಚಾರಗಳು ಬೇಡ
- ಮಾನಸಿಕ ಚಂಚಲತೆ ಇರಬಹುದು
- ಮಕ್ಕಳ ವಿಚಾರದಲ್ಲಿ ಬೇಸರವಿದೆ
- ಅಂದುಕೊಂಡ ಕೆಲಸ ಕಾರ್ಯಗಳು ವಿಳಂಬ ಆಗಲಿದೆ
- ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆಯಾಗಬಹುದು
- ಶಿವರಾಧನೆ ಮಾಡಿ
ಸಿಂಹ
- ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
- ಶರೀರದಲ್ಲಿನ ಬದಲಾವಣೆಯ ಬಗ್ಗೆ ಗಮನಿಸಿ
- ಆಹಾರ ಸೇವನೆಯಲ್ಲಿ ಗಮನವಿರಲಿ
- ಆರ್ಥಿಕ ತೊಂದರೆ ಇಲ್ಲ ಆದರೆ ಧನ ಮದ ಬೇಡ
- ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
- ಪ್ರವಾಸದ ಬಗ್ಗೆ ಖುಷಿಯಿಂದ ಇರುತ್ತೀರಿ
- ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ
ಕನ್ಯಾ
- ಮಕ್ಕಳಿಂದ ಬೇಸರ ಆಗಲಿದೆ
- ಉದ್ಯೋಗದಲ್ಲಿ ಭಡ್ತಿ ಸಿಗಬಹುದು
- ದಾಂಪತ್ಯದಲ್ಲಿ ಕಿರಿಕಿರಿಯಾಗಬಹುದು
- ಕೋರ್ಟ್ ಕೇಸ್ ಗಳಲ್ಲಿ ಸೋಲಿನ ಭೀತಿ ಇರಲಿದೆ
- ಇಂದು ಆತ್ಮೀಯರೇ ಶತ್ರುಗಳಾಗುವರು
- ಕ್ಷಮೆ ಕೇಳುವ ಪ್ರಸಂಗವಿದ್ದರೆ ಕೇಳುವುದು ಒಳ್ಳೆಯದು
- ಮನ್ಯುಸೂಕ್ತ ಮಂತ್ರವನ್ನು ಶ್ರವಣ ಮಾಡಿ
ತುಲಾ
- ಉದ್ಯೋಗದಲ್ಲಿ ಅನುಕೂಲವಿದೆ
- ಮಿತ್ರರಿಗೆ ಸಹಾಯ ಮಾಡುವ ಯೋಗವಿದೆ
- ಕೆಲವು ವಸ್ತುಗಳಿಂದ ಲಾಭವಿದೆ
- ಧನಾಗಮನಕ್ಕೆ ಅವಕಾಶವಿದೆ
- ಮಾನಸಿಕ ಸ್ತಿಮಿತತೆ ಇರಬೇಕು
- ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
- ಶಿವರಾಧನೆ ಮಾಡಿ
ವೃಶ್ಚಿಕ
- ಪ್ರಯಾಣದಲ್ಲಿ ಅಡೆತಡೆಯಾಗಬಹುದು
- ಕೆಲಸದಲ್ಲಿ ನಿರಾಸಕ್ತಿ ಉಂಟಾಗಬಹುದು
- ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತೀರಿ
- ಇಂದು ಮಾನಸಿಕ ಹಿಂಸೆಯಾಗಬಹುದು
- ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
- ಕೆಲಸವಿಲ್ಲದೆ ತುಂಬಾ ಬೇಸರ ಪಡುತ್ತೀರಿ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಕುಜನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಆಕಸ್ಮಿಕ ಧನ ನಷ್ಟ ಆಗಬಹುದು
- ನಂಬಿಗಸ್ಥರಿಂದ ಮೋಸ ಆಗುವ ಸಾಧ್ಯತೆ ಇದೆ
- ಕೆಲಸಗಾರರಿಂದ ನಷ್ಟ ಆಗಬಹುದು
- ಉಸಿರಾಟದ ಸಮಸ್ಯೆ ತೊಂದರೆಯನ್ನು ಉಂಟು ಮಾಡಬಹುದು
- ಮನಸ್ಸಿನಲ್ಲಿ ಆತಂಕ ಮಾತ್ರ ಹೆಚ್ಚಿರಲಿದೆ
- ಇಂದು ನಕಾರಾತ್ಮಕವಾದ ದಿನ
- ಧನ್ವಂತರಿಯನ್ನು ಪ್ರಾರ್ಥನೆ ಮಾಡಿ
ಮಕರ
- ಹಣ ಹೂಡಿಕೆಯಲ್ಲಿ ಧನಲಾಭ
- ಬೇರೆಯವರಿಗೆ ಹಣ ಸಹಾಯ ಮಾಡುತ್ತೀರಿ
- ಗೌರವ, ಸನ್ಮಾನಗಳಿಗೆ ಅವಕಾಶವಿದೆ
- ಬೇರೆಯವರ ಭಾವನೆಗೆ ಗೌರವ ನೀಡಿ
- ಯಾವ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ
- ಹಿರಿಯರ ಬೇಸರಕ್ಕೆ ಕಾರಣರಾಗುತ್ತೀರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ
- ಉದ್ಯೋಗದಲ್ಲಿ ಶತ್ರುಗಳ ಕಾಟ
- ಶೀತ ಸಂಬಂಧಿ ಸಮಸ್ಯೆ ನಿಮ್ಮನ್ನು ಕಾಡಲಿದೆ
- ಸಾಲಗಾರರಿಂದ ಕಿರಿಕಿರಿಯಾಗಬಹುದು
- ಹಣದ ವಿಚಾರಕ್ಕೆ ಜಗಳ ಆಗುವ ಸಾಧ್ಯತೆ ಇದೆ
- ಹಣೆ ಬರಹಕ್ಕೆ ಹೊಣೆ ಯಾರು ಎಂಬ ವೇದಾಂತದ ಮಾತು ಆಡುತ್ತೀರಿ
- ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಆಗಲಿದೆ
- ಪ್ರತ್ಯಂಗಿರಾದೇವಿಯನ್ನು ಆರಾಧನೆ ಮಾಡಿ
ಮೀನ
- ಮಕ್ಕಳಿಂದ ಸಂತೋಷ ಆಗಲಿದೆ
- ಆಕಸ್ಮಿಕವಾಗಿ ದುರಂತ ಆಗಬಹುದು
- ದೂರ ಪ್ರಯಾಣದ ಅನಿವಾರ್ಯತೆ ಇರಲಿದೆ
- ನ್ಯಾಯಾಲಯದ ಕೆಲಸಕ್ಕೆ ಆದ್ಯತೆ ನೀಡಿ
- ಹಣದ ವಿಚಾರದಲ್ಲಿ ಗೊಂದಲ ಆಗಬಹುದು
- ಇಂದು ಕೋಪ ನಿಯಂತ್ರಣದಲ್ಲಿರಲಿ
- ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ