/newsfirstlive-kannada/media/post_attachments/wp-content/uploads/2023/11/Rahul-Dravid-Coach.jpg)
ಇತ್ತೀಚೆಗೆ ಅಹಮದಾಬಾದಿನ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕ್ಯಾಪ್ಟನ್ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.
ಇನ್ನು, ವಿಶ್ವಕಪ್ ಹೀನಾಯ ಸೋಲಿನ ಬಳಿಕ ಮಾತಾಡಿದ ಟೀಂ ಇಂಡಿಯಾದ ಮುಖ್ಯ ಕೋಚ್, ತಮ್ಮ ಭವಿಷ್ಯದ ಬಗ್ಗೆ ಇನ್ನೂ ಯೋಚಿಸಿಲ್ಲ ಎಂದರು. ನಾನು ನನ್ನ ಭವಿಷ್ಯದ ಬಗ್ಗೆ ಅಷ್ಟು ಗಂಭೀರವಾಗಿ ಯೋಚನೆ ಮಾಡಿಲ್ಲ. ಈಗಷ್ಟೇ ಆಟದಿಂದ ಹೊರ ಬಂದಿದ್ದೇನೆ. ಇದರ ಬಗ್ಗೆ ಯೋಚಿಸಲು ನನಗೆ ಸಮಯ ಇಲ್ಲ ಎಂದರು.
ನನ್ನ ಕಂಪ್ಲೀಟ್ ಫೋಕಸ್ ವಿಶ್ವಕಪ್ ಮೇಲೆಯೇ ಇತ್ತು. ಇದರ ಹೊರತು ನನ್ನ ಮನಸಲ್ಲಿ ಬೇರೇನು ಇರಲಿಲ್ಲ. ನನ್ನ ಭವಿಷ್ಯದ ಬಗ್ಗೆ ಕೂಡ ಯೋಚನೆ ಮಾಡಲಿಲ್ಲ. ನಿಜವಾಗಲೂ ಹೇಳೋದಾದ್ರೆ ಇದರ ಬಗ್ಗೆ ಮಾತಾಡಲು ಇದು ಸಮಯ ಅಲ್ಲ ಎಂದರು.
ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ ಎಂದ ದ್ರಾವಿಡ್..!
ನಾನು ಮಾಡುತ್ತಿರೋ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಎರಡು ವರ್ಷಗಳಲ್ಲಿ ನಾನು ಟೀಂ ಇಂಡಿಯಾದ ಎಲ್ಲಾ ಫಾರ್ಮೇಟ್ ಆಟಗಾರರೊಂದಿಗೆ ಕೆಲಸ ಮಾಡಿದ್ದೇನೆ. ಇದು ನನಗೆ ಒಂದು ಸುವರ್ಣಾವಕಾಶ ಎಂದು ಭಾವಿಸಿದ್ದೇನೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್