ಉತ್ತರ ಪ್ರದೇಶದಲ್ಲಿ ಒಂದು ಹೇಯ ಕೃತ್ಯ..!
ಜತೆ ಮಗಳಿದ್ದರೂ ಕ್ಯಾರೇ ಎನ್ನದೆ ಅಟ್ಯಾಕ್
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಯಾರು?
ಲಕ್ನೋ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕೃತ್ಯ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಗುಫ್ರಾನ್, ನದೀಮ್, ತಾರಿಕ್ ಎಂಬ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದವರು.
ತಂದೆಯೋರ್ವ ಮಗಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ನಡೆದುಕೊಂಡು ಹೋಗುವಾಗ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಬಂಧಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ತಂದೆ ತೀವ್ರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಘಟನೆ?
ಶೋಯೆಬ್ ಎಂಬ 30 ವರ್ಷದ ಉದ್ಯಮಿ ಸಣ್ಣದೊಂದು ರೋಡ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೋರ್ವ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಈ ಕೇಸ್ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ತಾರಿಕ್ ಎಂಬಾತ ಸಂತ್ರಸ್ತನ ಸಂಬಂಧಿ. ಪೊಲೀಸ್ ವಿಚಾರಣೆ ವೇಳೆ ಹಳೇ ದ್ವೇಷದಿಂದ ಅಟ್ಯಾಕ್ ಮಾಡಿದ್ದೇವೆ ಎಂದು ತಾರಿಕ್ ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉತ್ತರ ಪ್ರದೇಶದಲ್ಲಿ ಒಂದು ಹೇಯ ಕೃತ್ಯ..!
ಜತೆ ಮಗಳಿದ್ದರೂ ಕ್ಯಾರೇ ಎನ್ನದೆ ಅಟ್ಯಾಕ್
ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ಯಾರು?
ಲಕ್ನೋ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕೃತ್ಯ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಗುಫ್ರಾನ್, ನದೀಮ್, ತಾರಿಕ್ ಎಂಬ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿ ಪೊಲೀಸರ ಕೈಗೆ ಸಿಕ್ಕಿಬಿದ್ದವರು.
ತಂದೆಯೋರ್ವ ಮಗಳನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ನಡೆದುಕೊಂಡು ಹೋಗುವಾಗ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಬಂಧಿತರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ತಂದೆ ತೀವ್ರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಘಟನೆ?
ಶೋಯೆಬ್ ಎಂಬ 30 ವರ್ಷದ ಉದ್ಯಮಿ ಸಣ್ಣದೊಂದು ರೋಡ್ನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೋರ್ವ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಈ ಕೇಸ್ ಸಂಬಂಧ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಲ್ಲಿ ತಾರಿಕ್ ಎಂಬಾತ ಸಂತ್ರಸ್ತನ ಸಂಬಂಧಿ. ಪೊಲೀಸ್ ವಿಚಾರಣೆ ವೇಳೆ ಹಳೇ ದ್ವೇಷದಿಂದ ಅಟ್ಯಾಕ್ ಮಾಡಿದ್ದೇವೆ ಎಂದು ತಾರಿಕ್ ಬಾಯಿಬಿಟ್ಟಿರುವುದಾಗಿ ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ